ಡಾ.ಸಂತೋಷ ಮಲ್ಲೇಶಪ್ಪ ಬಸರಕೋಡ, ಇಲ್ಲಿಯ ಕರಬಾದೇವಿ ದೇವಸ್ಥಾನದ ಬಳಿ ನೂತನ ಕಟ್ಟಡವನ್ನು ಒಂದು ವರ್ಷದಿಂದ ನಿರ್ಮಿಸುತ್ತಿದ್ದರು. ನೆಲ ಅಂತಸ್ತು ಮತ್ತು ಎರಡು ಅಂತಸ್ತಿನ ಕಟ್ಟಡ ನಿರ್ಮಾಣ ಪೂರ್ಣಗೊಂಡಿತ್ತು. ಸದ್ಯ ಮೂರನೇ ಅಂತಸ್ತಿನ ಕಟ್ಟಡ ನಿರ್ಮಾಣ ಕಾರ್ಯ ನಡೆದಿತ್ತು. ಆ ಕಟ್ಟಡದಲ್ಲಿ ಎಲೆಕ್ಟ್ರಿಕಲ್ ಕಾಮಗಾರಿ ನಿರ್ವಹಿಸುವಾಗ ಈ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.