ವಿಜಯಪುರ: ಒಬ್ಬ ಪಾತ್ರಧಾರಿ ಕಾವಿ ಹಾಕಿಕೊಂಡಾಗ ನಾಟಕ ಮುಗಿಯೋವರೆಗಷ್ಟೇ ಅವನು ಸನ್ಯಾಸಿ. ಆದರೆ, ನಿಜವಾದ ಸನ್ಯಾಸಿ ಬದುಕು ಹಾಗಲ್ಲ. ಕರಿಮಣಿ ಸರವನ್ನು ಒಂದು ಗಂಡು ಹೆಣ್ಣಿಗೆ ಕಟ್ಟಿದಾಗ ಅವನಿಗೆ ತಾನು ಪತಿ, ಆಕೆಯು ತನ್ನ ಸತಿ ಎಂಬ ಭಾವ ಮೂಡುವುದು. ಕಾವಿ ಹಾಕಿಕೊಂಡವನ ಮನಸ್ಸಿನಲ್ಲಿ ಸಹ ನಾನು ವಿರಾಗಿ, ನಿರ್ಮೋಹಿ, ಸರ್ವಸಂಗ ಪರಿತ್ಯಾಗಿ ಎಂಬ ಭಾವಗಳು ಮೂಡಬೇಕು. ನಮ್ಮ ಭಾವಗಳು ಭಗವಂತನ ಒಲುಮೆಗೆ ಕಾರಣವಾಗಬೇಕು ಎಂದು ಬಾಲಗಾಂವದ ಅಮೃತಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.