<p><strong>ವಿಜಯಪುರ:</strong> ಅವಿಭಜಿತ ವಿಜಯಪುರ ಜಿಲ್ಲೆಯ ಕೂಡಲಸಂಗಮದಲ್ಲಿ ದಶಕದ ಹಿಂದೆಯೇ ‘ಬಸವ ಧರ್ಮ ಪೀಠ’ ಆರಂಭಿಸಿ, ಮಠ ಕಟ್ಟಿಕೊಂಡಿದ್ದರೂ; ಮಾತೆ ಮಹಾದೇವಿ ಅವರ ವಿಜಯಪುರದ ನಂಟು ಅಷ್ಟಕ್ಕಷ್ಟೇ.</p>.<p>ಮಾತೆ ಆರಂಭಿಸಿದ ಬಸವ ಸಮಿತಿ, ರಾಷ್ಟ್ರೀಯ ಬಸವ ದಳಗಳು ಇಂದಿಗೂ ಜಿಲ್ಲೆಯ ವಿವಿಧೆಡೆ ಸಕ್ರಿಯವಾಗಿವೆ. ಹಿರಿಯರ ಜತೆ, ಕಿರಿಯರು, ಯುವಕರು ಸದಸ್ಯರಾಗಿದ್ದು, ಬಸವ ತತ್ವ ಪಾಲನೆ, ಪ್ರಚಾರದಲ್ಲಿ ತಲ್ಲೀನವಾಗಿವೆ.</p>.<p>ಲಿಂಗಾಯತ ಪ್ರತ್ಯೇಕ ಧರ್ಮದ ಹಕ್ಕೊತ್ತಾಯ ಹೋರಾಟ 2017ರಲ್ಲಿ ಬಿರುಸುಗೊಂಡ ನಂತರ, ಮಾತೆ ಮಹಾದೇವಿ ನಂಟು ಜಿಲ್ಲೆಗೂ ವ್ಯಾಪಿಸಿತು.</p>.<p>ಬಸವೇಶ್ವರರ ಅನುಯಾಯಿಯಾದ ಮಾತೆ ಮಹಾದೇವಿ ಬಸವಜನ್ಮಭೂಮಿ ಬಸವನಬಾಗೇವಾಡಿಗೆ 1968ರಲ್ಲಿ ಭೇಟಿ ಕೊಟ್ಟ ನೆನಪು ಸ್ಥಳೀಯರದ್ದು.</p>.<p>ಸಿಂದಗಿಯ ವೈದ್ಯ ಎಸ್.ಜಿ.ಬಮ್ಮಣ್ಣಿ 1970ರ ದಶಕದಲ್ಲಿ ಮಾತೆಯನ್ನು ಪ್ರವಚನ ನೀಡಲಿಕ್ಕಾಗಿ ಪಟ್ಟಣಕ್ಕೆ ಆಹ್ವಾನಿಸಿದ್ದರು. ನಾಲ್ಕುವರೆ ದಶಕದ ಹಿಂದೆಯೇ ಸಿಂದಗಿಯ ನಾಟಕ ಥಿಯೇಟರ್ವೊಂದರಲ್ಲಿ ಮಹಾದೇವಿ ಒಂದು ತಿಂಗಳು ಪ್ರವಚನ ನೀಡಿದರು.</p>.<p>ಮಾತೆಯ ಪ್ರವಚನ ಆಲಿಸಿದ ಬಹುತೇಕರು ಇವರ ಪ್ರಭಾವಕ್ಕೊಳಗಾದರು. ಪ್ರವಚನ ನಡೆದಿದ್ದ ಅವಧಿಯಲ್ಲೇ ಸಿಂದಗಿಯಲ್ಲಿ ಬಸವ ಸಮಿತಿಯೊಂದನ್ನು ಅಸ್ಥಿತ್ವಕ್ಕೆ ತಂದರು. ಅಂದಿನಿಂದಲೂ ಬಸವ ಸಮಿತಿ ಕ್ರಿಯಾಶೀಲವಾಗಿದೆ. ಬದಲಾದ ಕಾಲಘಟ್ಟದಲ್ಲಿ ರಾಷ್ಟ್ರೀಯ ಬಸವದಳವಾಗಿ ಪರಿವರ್ತನೆ ಹೊಂದಿದೆ.</p>.<p>ಮಾತೆಗೂ ಸಿಂದಗಿಗೂ ಅವಿನಾಭಾವ ಸಂಬಂಧ. ಇಂದಿಗೂ ಮಹಾದೇವಿಯ ಅನುಯಾಯಿಗಳು, ಭಕ್ತರು ಇಲ್ಲಿದ್ದಾರೆ. 1978ರಲ್ಲಿ ನಡೆದ ಕಲ್ಯಾಣ ನಾಡಿನ ಚತುರ್ಥ ವೀರಶೈವ ಸಮ್ಮೇಳನದಲ್ಲೂ ಮಾತೆ ಭಾಗಿಯಾಗಿದ್ದು ಇದೀಗ ಸ್ಮರಣಾರ್ಹ.</p>.<p><strong>ಆರೋಗ್ಯ ವಿಚಾರಿಸಿದ್ದ ಗೃಹ ಸಚಿವ:</strong></p>.<p>ಲಿಂಗಾಯತ ಪ್ರತ್ಯೇಕ ಧರ್ಮದ ಚಳವಳಿಯ ಮುಂಚೂಣಿ ನಾಯಕರಾಗಿ ಎಂ.ಬಿ.ಪಾಟೀಲ ಗುರುತಿಸಿಕೊಂಡ ಬಳಿಕ ಮಾತೆ ಮಹಾದೇವಿ ಜತೆ ಆಪ್ತ ಒಡನಾಟ ಬೆಸೆದುಕೊಂಡಿತು.</p>.<p>ಕಳೆದ ಫೆಬ್ರುವರಿಯಲ್ಲಿ ಮಾತೆ ಅನಾರೋಗ್ಯಕ್ಕೀಡಾದ ಸಂದರ್ಭ ಎಂ.ಬಿ.ಪಾಟೀಲ ಆಸ್ಪತ್ರೆಗೆ ಭೇಟಿ ನೀಡಿ ಕ್ಷೇಮ ವಿಚಾರಿಸಿದ್ದರು. ಇದೇ ಸಂದರ್ಭ ಕೂಡಲಸಂಗಮದಲ್ಲಿ ನಡೆದ ಶರಣ ಮೇಳದಲ್ಲೂ ಭಾಗಿಯಾಗಿದ್ದರು. ಆಗಲೇ ಎಂ.ಬಿ.ಪಾಟೀಲ ಮುಖ್ಯಮಂತ್ರಿಯಾಗಬೇಕು ಎಂಬ ಬೇಡಿಕೆ ಸಮ್ಮೇಳನದ ವೇದಿಕೆಯಿಂದ ಪ್ರತಿಧ್ವನಿಗೊಂಡಿತ್ತು.</p>.<p>ಈಚೆಗಷ್ಟೇ ಆರೋಗ್ಯ ತೀವ್ರ ಕ್ಷೀಣಿಸಿದಾಗಲೂ ಗೃಹ ಸಚಿವ ಎಂ.ಬಿ.ಪಾಟೀಲ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರೊಟ್ಟಿಗೆ ಚಿಕಿತ್ಸೆ ಬಗ್ಗೆ ಚರ್ಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ಅವಿಭಜಿತ ವಿಜಯಪುರ ಜಿಲ್ಲೆಯ ಕೂಡಲಸಂಗಮದಲ್ಲಿ ದಶಕದ ಹಿಂದೆಯೇ ‘ಬಸವ ಧರ್ಮ ಪೀಠ’ ಆರಂಭಿಸಿ, ಮಠ ಕಟ್ಟಿಕೊಂಡಿದ್ದರೂ; ಮಾತೆ ಮಹಾದೇವಿ ಅವರ ವಿಜಯಪುರದ ನಂಟು ಅಷ್ಟಕ್ಕಷ್ಟೇ.</p>.<p>ಮಾತೆ ಆರಂಭಿಸಿದ ಬಸವ ಸಮಿತಿ, ರಾಷ್ಟ್ರೀಯ ಬಸವ ದಳಗಳು ಇಂದಿಗೂ ಜಿಲ್ಲೆಯ ವಿವಿಧೆಡೆ ಸಕ್ರಿಯವಾಗಿವೆ. ಹಿರಿಯರ ಜತೆ, ಕಿರಿಯರು, ಯುವಕರು ಸದಸ್ಯರಾಗಿದ್ದು, ಬಸವ ತತ್ವ ಪಾಲನೆ, ಪ್ರಚಾರದಲ್ಲಿ ತಲ್ಲೀನವಾಗಿವೆ.</p>.<p>ಲಿಂಗಾಯತ ಪ್ರತ್ಯೇಕ ಧರ್ಮದ ಹಕ್ಕೊತ್ತಾಯ ಹೋರಾಟ 2017ರಲ್ಲಿ ಬಿರುಸುಗೊಂಡ ನಂತರ, ಮಾತೆ ಮಹಾದೇವಿ ನಂಟು ಜಿಲ್ಲೆಗೂ ವ್ಯಾಪಿಸಿತು.</p>.<p>ಬಸವೇಶ್ವರರ ಅನುಯಾಯಿಯಾದ ಮಾತೆ ಮಹಾದೇವಿ ಬಸವಜನ್ಮಭೂಮಿ ಬಸವನಬಾಗೇವಾಡಿಗೆ 1968ರಲ್ಲಿ ಭೇಟಿ ಕೊಟ್ಟ ನೆನಪು ಸ್ಥಳೀಯರದ್ದು.</p>.<p>ಸಿಂದಗಿಯ ವೈದ್ಯ ಎಸ್.ಜಿ.ಬಮ್ಮಣ್ಣಿ 1970ರ ದಶಕದಲ್ಲಿ ಮಾತೆಯನ್ನು ಪ್ರವಚನ ನೀಡಲಿಕ್ಕಾಗಿ ಪಟ್ಟಣಕ್ಕೆ ಆಹ್ವಾನಿಸಿದ್ದರು. ನಾಲ್ಕುವರೆ ದಶಕದ ಹಿಂದೆಯೇ ಸಿಂದಗಿಯ ನಾಟಕ ಥಿಯೇಟರ್ವೊಂದರಲ್ಲಿ ಮಹಾದೇವಿ ಒಂದು ತಿಂಗಳು ಪ್ರವಚನ ನೀಡಿದರು.</p>.<p>ಮಾತೆಯ ಪ್ರವಚನ ಆಲಿಸಿದ ಬಹುತೇಕರು ಇವರ ಪ್ರಭಾವಕ್ಕೊಳಗಾದರು. ಪ್ರವಚನ ನಡೆದಿದ್ದ ಅವಧಿಯಲ್ಲೇ ಸಿಂದಗಿಯಲ್ಲಿ ಬಸವ ಸಮಿತಿಯೊಂದನ್ನು ಅಸ್ಥಿತ್ವಕ್ಕೆ ತಂದರು. ಅಂದಿನಿಂದಲೂ ಬಸವ ಸಮಿತಿ ಕ್ರಿಯಾಶೀಲವಾಗಿದೆ. ಬದಲಾದ ಕಾಲಘಟ್ಟದಲ್ಲಿ ರಾಷ್ಟ್ರೀಯ ಬಸವದಳವಾಗಿ ಪರಿವರ್ತನೆ ಹೊಂದಿದೆ.</p>.<p>ಮಾತೆಗೂ ಸಿಂದಗಿಗೂ ಅವಿನಾಭಾವ ಸಂಬಂಧ. ಇಂದಿಗೂ ಮಹಾದೇವಿಯ ಅನುಯಾಯಿಗಳು, ಭಕ್ತರು ಇಲ್ಲಿದ್ದಾರೆ. 1978ರಲ್ಲಿ ನಡೆದ ಕಲ್ಯಾಣ ನಾಡಿನ ಚತುರ್ಥ ವೀರಶೈವ ಸಮ್ಮೇಳನದಲ್ಲೂ ಮಾತೆ ಭಾಗಿಯಾಗಿದ್ದು ಇದೀಗ ಸ್ಮರಣಾರ್ಹ.</p>.<p><strong>ಆರೋಗ್ಯ ವಿಚಾರಿಸಿದ್ದ ಗೃಹ ಸಚಿವ:</strong></p>.<p>ಲಿಂಗಾಯತ ಪ್ರತ್ಯೇಕ ಧರ್ಮದ ಚಳವಳಿಯ ಮುಂಚೂಣಿ ನಾಯಕರಾಗಿ ಎಂ.ಬಿ.ಪಾಟೀಲ ಗುರುತಿಸಿಕೊಂಡ ಬಳಿಕ ಮಾತೆ ಮಹಾದೇವಿ ಜತೆ ಆಪ್ತ ಒಡನಾಟ ಬೆಸೆದುಕೊಂಡಿತು.</p>.<p>ಕಳೆದ ಫೆಬ್ರುವರಿಯಲ್ಲಿ ಮಾತೆ ಅನಾರೋಗ್ಯಕ್ಕೀಡಾದ ಸಂದರ್ಭ ಎಂ.ಬಿ.ಪಾಟೀಲ ಆಸ್ಪತ್ರೆಗೆ ಭೇಟಿ ನೀಡಿ ಕ್ಷೇಮ ವಿಚಾರಿಸಿದ್ದರು. ಇದೇ ಸಂದರ್ಭ ಕೂಡಲಸಂಗಮದಲ್ಲಿ ನಡೆದ ಶರಣ ಮೇಳದಲ್ಲೂ ಭಾಗಿಯಾಗಿದ್ದರು. ಆಗಲೇ ಎಂ.ಬಿ.ಪಾಟೀಲ ಮುಖ್ಯಮಂತ್ರಿಯಾಗಬೇಕು ಎಂಬ ಬೇಡಿಕೆ ಸಮ್ಮೇಳನದ ವೇದಿಕೆಯಿಂದ ಪ್ರತಿಧ್ವನಿಗೊಂಡಿತ್ತು.</p>.<p>ಈಚೆಗಷ್ಟೇ ಆರೋಗ್ಯ ತೀವ್ರ ಕ್ಷೀಣಿಸಿದಾಗಲೂ ಗೃಹ ಸಚಿವ ಎಂ.ಬಿ.ಪಾಟೀಲ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರೊಟ್ಟಿಗೆ ಚಿಕಿತ್ಸೆ ಬಗ್ಗೆ ಚರ್ಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>