ಜಿಲ್ಲೆಯ ವಿವಿಧೆಡೆ ಐದಾರು ತಿಂಗಳಿಂದ ಆಗಾಗ ಭೂಕಂಪನ ಸಂಭವಿಸುತ್ತಲೇ ಇದ್ದು, ಭೂವಿಜ್ಞಾನಿಗಳು, ಜನ ಭಯ ಪಡುವ ಅಗತ್ಯವಿಲ್ಲ. ಇದೊಂದು ನೈರ್ಗಿಕ ಪ್ರಕ್ರಿಯೆ ಎಂದು ಧೈರ್ಯ ತುಂಬುತ್ತಿದ್ದಾರೆ. ಆದರೆ, ಜನ ಭಯ ಭೀತರಾಗಿದ್ದಾರೆ. ಭೂಕಂಪ ಜಿಲ್ಲೆಯ ಜನತೆಯನ್ನು ಹಗಲಿರುಳು ಕಾಡತೊಡಗಿದೆ. ಯಾವಾಗ ದುರಂತ ಸಂಭವಿಸುತ್ತದೆಯೋ? ಏನಾಗುತ್ತದೆಯೋ? ಎಂಬ ಆತಂಕದಲ್ಲಿ ದಿನ ಕಳೆಯತೊಡಗಿದ್ದಾರೆ.