<p><strong>ವಿಜಯಪುರ:</strong> ಜಿಲ್ಲೆಯಲ್ಲಿ ನಡೆದ ಕೊಲೆ, ಬೈಕ್, ಮನೆ ಕಳವು, ಗಾಂಜಾ, ಮಾವಾ ಮಾರಾಟ, ಕ್ರಿಕೆಟ್ ಬೆಟ್ಟಿಂಗ್, ಅಡುಗೆ ಅನಿಲ ರಿಫಿಲಿಂಗ್, ಜೂಜಾಟ, ಮಟ್ಕಾದಲ್ಲಿ ತೊಡಗಿದ್ದ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.</p>.<p class="Briefhead"><strong>50 ಬೈಕ್ ವಶ:</strong>ತಾಳಿಕೋಟೆ ಠಾಣೆ ಪೊಲೀಸರು ನಾಲ್ವರು ಅಂತರ ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಿ, ಅವರಿಂದ ₹30 ಲಕ್ಷ ಮೌಲ್ಯದ 50 ಬೈಕುಗಳನ್ನು ವಶಪಡಿಸಿಕೊಂಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಮಪ್ ಅಗರವಾಲ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>ಜಮ್ಮಲದಿನ್ನಿಯ ರಾಮಣ್ಣ ಹಳ್ಳೂರ ಎಂಬುವವರು ಅ.19ರಂದು ದಾಖಲಿಸಿದ್ದ ಬೈಕ್ ಕಳವು ಪ್ರಕರಣವನ್ನು ಬೆನ್ನುಹತ್ತಿದಾಗ ಅಂತರ್ ಜಿಲ್ಲಾ ಬೈಕ್ ಕಳವು ಜಾಲ ಪತ್ತೆಯಾಗಿದೆ.</p>.<p>ಈ ಸಂಬಂಧ ಬಿಳೆಬಾವಿಯ ಮೌನೇಶ್ ಬಡಿಗೇರ(28), ನಿಂಗಣ್ಣ ಪೂಜಾರಿ(38), ಕೋಡೆಕಲ್ನ ಮೀರಾಸಾಬ್ ಬಳಿಗಾರ(29), ಮೆಹಬೂಬ್ ಬಳಿಗಾರ(28) ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.</p>.<p>ಆರೋಪಿಗಳು ಕದ್ದಿರುವ ಎಲ್ಲ ಬೈಕುಗಳು ‘ಹಿರೊ’ ಕಂಪನಿಗೆ ಸೇರಿದ ಸ್ಪೆಂಡರ್ ಬೈಕುಗಳಾಗಿವೆ. ಅದರಲ್ಲೂ ಸಿಲ್ವರ್ ಕಲರ್ ಬೈಕುಗಳೇ ಇವರ ಟಾರ್ಗೆಟ್ ಆಗಿದ್ದವು. ಈ ಬೈಕುಗಳ ಕೀಯನ್ನು ಸುಲಭವಾಗಿ ತೆಗೆಯಬಹುದು ಎಂದು ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಹೇಳಿದರು.</p>.<p class="Briefhead"><strong>ಮನೆಗಳ್ಳರ ಬಂಧನ:</strong>ಬಸವನ ಬಾಗೇವಾಡಿ ಪಟ್ಟಣದಲ್ಲಿ ಮೂರು ತಿಂಗಳ ಹಿಂದೆ ರಾತ್ರಿ ವೇಳೆ ಮನೆ ಕೀಲಿ ಮುರಿದು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.</p>.<p>ಬಸವನ ಬಾಗೇವಾಡಿಯ ಇಂದ್ರಾನಗರದ ಸೊಹೈಲ್ ಇನಾಂದಾರ(21), ಬಸವನ ನಗರದ ಆಕಾಶ ಕೋಲ್ಕಾರ(19) ಎಂಬುವವರನ್ನು ಬಂಧಿಸಿ, ಅವರಿಂದ 40 ಗ್ರಾಂ ಚಿನ್ನಾಭರಣ, 190 ಗ್ರಾಂ ಬೆಳ್ಳಿಯ ಆಭರಣ ಸೇರಿದಂತೆ ಒಟ್ಟು ₹ 2.15 ಲಕ್ಷ್ಮ ಮೌಲ್ಯದ ಚಿನ್ನಾಭರಣವನ್ನು ಸಿಪಿಐ ಸೋಮಶೇಖರ ಜುಟ್ಟಿಲ್, ಪಿಎಸ್ಐ ಚಂದ್ರಶೇಖರ ವೈ.ಹೆರಕಲ್ ನೇತೃತ್ವದ ತನಿಖಾ ತಂಡ ವಶಪಡಿಸಿಕೊಂಡಿದೆ.</p>.<p class="Briefhead"><strong>287 ಕೆ.ಜಿ ಗಾಂಜಾ ವಶ:</strong>ಜಿಲ್ಲೆಯಲ್ಲಿ ಅಕ್ರಮವಾಗಿ ಗಾಂಜಾ ಬೆಳೆದ ಮತ್ತು ಮಾರಾಟ ಮಾಡುತ್ತಿದ್ದ ಒಟ್ಟು 18 ಪ್ರಕರಣಗಳನ್ನು ಪತ್ತೆ ಹಚ್ಚಿ 287 ಕೆ.ಜಿ.ಗಾಂಜಾವನ್ನು ವಶಪಡಿಸಿಕೊಳ್ಳಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಗರವಾಲ್ ತಿಳಿಸಿದರು.</p>.<p class="Briefhead"><strong>ಕ್ರಿಕೆಟ್ ಬೆಟ್ಟಿಂಗ್:</strong>ಜಿಲ್ಲೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದ ಒಟ್ಟು 16 ಪ್ರಕರಣಗಳನ್ನು ದಾಖಲಿಸಿ, 32 ಆರೋಪಿಗಳನ್ನು ಬಂಧಿಸಿ, ಅವರಿಂದ ₹6,52,770 ನಗದು, 39 ಮೊಬೈಲ್ ಫೋನ್, 2 ಟಿವಿ, ಒಂದು ಡಸ್ಟರ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.</p>.<p class="Briefhead"><strong>ಸಿಲಿಂಡರ್ ಜಪ್ತಿ:</strong>ಅಡುಗೆ ಮತ್ತು ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ಗಳನ್ನುಅಕ್ರಮವಾಗಿ ರಿಫಿಲಿಂಗ್ ಮಾಡಿ ಮಾರಾಟ ಮಾಡುತ್ತಿದ್ದ ಎರಡು ಪ್ರಕರಣಗಳನ್ನು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಿ, ಅವರಿಂದ ₹ 1,38 ಲಕ್ಷ ಮೌಲ್ಯದ ಸಿಲಿಂಡರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.</p>.<p class="Briefhead"><strong>ಮಾವಾ ಮಾರಾಟ:</strong>ಅಡಿಕೆ, ತಂಬಾಕು, ಸುಣ್ಣ ಸೇರಿಸಿ ಮಾವಾ ತಯಾರಿಸಿ ಮಾರಾಟ ಮಾಡುತ್ತಿದ್ದ ಐದು ಪ್ರಕರಣಗಳನ್ನು ದಾಖಲಿಸಿ, 10 ಆರೋಪಿಗಳ ವಿರುದ್ಧ ಕೋಟ್ಪಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಿಂದ ₹ 1.86 ಲಕ್ಷ ಮೌಲ್ಯದ ಮಾವಾ ವಶಪಡಿಸಿಕೊಳ್ಳಲಾಗಿದೆ.</p>.<p>ಅಬಕಾರಿ ಕಾಯ್ದೆಯಡಿ 19 ಪ್ರಕರಣಗಳನ್ನು ದಾಖಲಿಸಿ, 19 ಆರೋಪಿಗಳನ್ನು ಬಂಧಿಸಲಾಗಿದೆ. 35 ಜೂಜಾಟ ಪ್ರಕರಣಗಳನ್ನು ಪತ್ತೆ ಹಚ್ಚಿ 130 ಆರೋಪಿಗಳನ್ನು ಬಂಧಿಸಲಾಗಿದೆ. ಮಟ್ಕಾ ಪ್ರಕರಣಗಳಿಗೆ ಸಂಬಂಧಿಸಿದಂತೆ30 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.</p>.<p>ಈ ಎಲ್ಲ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಎಸ್ಪಿ ಅಭಿನಂದಿಸಿ, ಬಹುಮಾನ ನೀಡಿದರು.</p>.<p>ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ ಅರಸಿದ್ದಿ ಇದ್ದರು.</p>.<p><strong>ಕೊಲೆ ಆರೋಪಿಗಳ ಬಂಧನ</strong></p>.<p>ಸಿಂದಗಿ ಪಟ್ಟಣದಲ್ಲಿಕಳೆದ ಆಗಸ್ಟ್ 25ರಂದು ಐಸಿಐಸಿಐ ಬ್ಯಾಂಕಿನ ಎಟಿಎಂ ಭದ್ರತಾ ಸಿಬ್ಬಂದಿ ರಾಹುಲ ರಾಠೋಡ(24) ಎಂಬುವವರ ತಲೆಗೆ ಕಬ್ಬಿಣದ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ, ಬಳಿಕ ಎಟಿಎಂ ಯಂತ್ರವನ್ನು ಒಡೆದು ಕಳವಿಗೆ ಯತ್ನಿಸಿದ್ದ ಒಬ್ಬ ಬಾಲಾಪರಾಧಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.</p>.<p>ಎಟಿಎಂ ದರೋಡೆ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಬಲೇಶ್ವರದ ಜೆಸಿಬಿ ಚಾಲಕ ಅನಿಲ ಬರಗಾಲ(28), ದಯಾನಂದ ಹೊಸಮನಿ(21) ಹಾಗೂ 17 ವರ್ಷ ಇನ್ನೊಬ್ಬ ಬಾಲಾಪರಾಧಿಯನ್ನು ಸಿಂದಗಿ ಸಿಪಿಐ ಎಚ್.ಎಂ.ಪಾಟೀಲ ನೇತೃತ್ವದ ತಂಡವು ಕೊಂಡಗುಳಿ ಗ್ರಾಮದಲ್ಲಿ ಬಂಧಿಸಿದೆ.</p>.<p class="Briefhead"><strong>ಆರು ಜನರ ವಿರುದ್ಧಗೂಂಡಾ ಪ್ರಕರಣ</strong></p>.<p>ಕೊಲೆ, ಸುಲಿಗೆ, ಮಟ್ಕಾ, ಡಕಾಯತಿ, ಜೂಜಾಟ, ಅಪಹರಣ ಪ್ರಕರಣದಲ್ಲಿ ಪಾಲ್ಗೊಂಡಿದ್ದ ಆರು ಜನರನ್ನು ಗೂಂಡಾ ಕಾಯ್ದೆ ಅಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನೂ ಹಲವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮಕೈಗೊಳ್ಳಲು ಸಿದ್ಧತೆ ನಡೆದಿದೆ ಎಂದು ಎಸ್.ಪಿ.ಅಗರವಾಲ್ ತಿಳಿಸಿದರು.</p>.<p>ತಾಂಬಾ ನಿವಾಸಿ ದೇವೇಂದ್ರ ತದ್ದೇವಾಡಿ, ನಾಗರಾಠದ ಚಂದ್ರಶೇಖರ ವಡೆದ್ ಮತ್ತು ಸಂಗನಗೌಡ ಸಂಕನಾಳ, ವಿಜಯಪುರದ ಚಾಂದ್ಪೀರ್ ಇನಾಂದಾರ್ ಮತ್ತು ಹೈದರ್ ಅಲಿ ನದಾಫ್ ಹಾಗೂ ಹಿಂಗಣಿಯ ಪೀರಪ್ಪ ಕಟ್ಟಿಮನಿ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ಜಿಲ್ಲೆಯಲ್ಲಿ ನಡೆದ ಕೊಲೆ, ಬೈಕ್, ಮನೆ ಕಳವು, ಗಾಂಜಾ, ಮಾವಾ ಮಾರಾಟ, ಕ್ರಿಕೆಟ್ ಬೆಟ್ಟಿಂಗ್, ಅಡುಗೆ ಅನಿಲ ರಿಫಿಲಿಂಗ್, ಜೂಜಾಟ, ಮಟ್ಕಾದಲ್ಲಿ ತೊಡಗಿದ್ದ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.</p>.<p class="Briefhead"><strong>50 ಬೈಕ್ ವಶ:</strong>ತಾಳಿಕೋಟೆ ಠಾಣೆ ಪೊಲೀಸರು ನಾಲ್ವರು ಅಂತರ ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಿ, ಅವರಿಂದ ₹30 ಲಕ್ಷ ಮೌಲ್ಯದ 50 ಬೈಕುಗಳನ್ನು ವಶಪಡಿಸಿಕೊಂಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಮಪ್ ಅಗರವಾಲ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>ಜಮ್ಮಲದಿನ್ನಿಯ ರಾಮಣ್ಣ ಹಳ್ಳೂರ ಎಂಬುವವರು ಅ.19ರಂದು ದಾಖಲಿಸಿದ್ದ ಬೈಕ್ ಕಳವು ಪ್ರಕರಣವನ್ನು ಬೆನ್ನುಹತ್ತಿದಾಗ ಅಂತರ್ ಜಿಲ್ಲಾ ಬೈಕ್ ಕಳವು ಜಾಲ ಪತ್ತೆಯಾಗಿದೆ.</p>.<p>ಈ ಸಂಬಂಧ ಬಿಳೆಬಾವಿಯ ಮೌನೇಶ್ ಬಡಿಗೇರ(28), ನಿಂಗಣ್ಣ ಪೂಜಾರಿ(38), ಕೋಡೆಕಲ್ನ ಮೀರಾಸಾಬ್ ಬಳಿಗಾರ(29), ಮೆಹಬೂಬ್ ಬಳಿಗಾರ(28) ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.</p>.<p>ಆರೋಪಿಗಳು ಕದ್ದಿರುವ ಎಲ್ಲ ಬೈಕುಗಳು ‘ಹಿರೊ’ ಕಂಪನಿಗೆ ಸೇರಿದ ಸ್ಪೆಂಡರ್ ಬೈಕುಗಳಾಗಿವೆ. ಅದರಲ್ಲೂ ಸಿಲ್ವರ್ ಕಲರ್ ಬೈಕುಗಳೇ ಇವರ ಟಾರ್ಗೆಟ್ ಆಗಿದ್ದವು. ಈ ಬೈಕುಗಳ ಕೀಯನ್ನು ಸುಲಭವಾಗಿ ತೆಗೆಯಬಹುದು ಎಂದು ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಹೇಳಿದರು.</p>.<p class="Briefhead"><strong>ಮನೆಗಳ್ಳರ ಬಂಧನ:</strong>ಬಸವನ ಬಾಗೇವಾಡಿ ಪಟ್ಟಣದಲ್ಲಿ ಮೂರು ತಿಂಗಳ ಹಿಂದೆ ರಾತ್ರಿ ವೇಳೆ ಮನೆ ಕೀಲಿ ಮುರಿದು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.</p>.<p>ಬಸವನ ಬಾಗೇವಾಡಿಯ ಇಂದ್ರಾನಗರದ ಸೊಹೈಲ್ ಇನಾಂದಾರ(21), ಬಸವನ ನಗರದ ಆಕಾಶ ಕೋಲ್ಕಾರ(19) ಎಂಬುವವರನ್ನು ಬಂಧಿಸಿ, ಅವರಿಂದ 40 ಗ್ರಾಂ ಚಿನ್ನಾಭರಣ, 190 ಗ್ರಾಂ ಬೆಳ್ಳಿಯ ಆಭರಣ ಸೇರಿದಂತೆ ಒಟ್ಟು ₹ 2.15 ಲಕ್ಷ್ಮ ಮೌಲ್ಯದ ಚಿನ್ನಾಭರಣವನ್ನು ಸಿಪಿಐ ಸೋಮಶೇಖರ ಜುಟ್ಟಿಲ್, ಪಿಎಸ್ಐ ಚಂದ್ರಶೇಖರ ವೈ.ಹೆರಕಲ್ ನೇತೃತ್ವದ ತನಿಖಾ ತಂಡ ವಶಪಡಿಸಿಕೊಂಡಿದೆ.</p>.<p class="Briefhead"><strong>287 ಕೆ.ಜಿ ಗಾಂಜಾ ವಶ:</strong>ಜಿಲ್ಲೆಯಲ್ಲಿ ಅಕ್ರಮವಾಗಿ ಗಾಂಜಾ ಬೆಳೆದ ಮತ್ತು ಮಾರಾಟ ಮಾಡುತ್ತಿದ್ದ ಒಟ್ಟು 18 ಪ್ರಕರಣಗಳನ್ನು ಪತ್ತೆ ಹಚ್ಚಿ 287 ಕೆ.ಜಿ.ಗಾಂಜಾವನ್ನು ವಶಪಡಿಸಿಕೊಳ್ಳಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಗರವಾಲ್ ತಿಳಿಸಿದರು.</p>.<p class="Briefhead"><strong>ಕ್ರಿಕೆಟ್ ಬೆಟ್ಟಿಂಗ್:</strong>ಜಿಲ್ಲೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದ ಒಟ್ಟು 16 ಪ್ರಕರಣಗಳನ್ನು ದಾಖಲಿಸಿ, 32 ಆರೋಪಿಗಳನ್ನು ಬಂಧಿಸಿ, ಅವರಿಂದ ₹6,52,770 ನಗದು, 39 ಮೊಬೈಲ್ ಫೋನ್, 2 ಟಿವಿ, ಒಂದು ಡಸ್ಟರ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.</p>.<p class="Briefhead"><strong>ಸಿಲಿಂಡರ್ ಜಪ್ತಿ:</strong>ಅಡುಗೆ ಮತ್ತು ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ಗಳನ್ನುಅಕ್ರಮವಾಗಿ ರಿಫಿಲಿಂಗ್ ಮಾಡಿ ಮಾರಾಟ ಮಾಡುತ್ತಿದ್ದ ಎರಡು ಪ್ರಕರಣಗಳನ್ನು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಿ, ಅವರಿಂದ ₹ 1,38 ಲಕ್ಷ ಮೌಲ್ಯದ ಸಿಲಿಂಡರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.</p>.<p class="Briefhead"><strong>ಮಾವಾ ಮಾರಾಟ:</strong>ಅಡಿಕೆ, ತಂಬಾಕು, ಸುಣ್ಣ ಸೇರಿಸಿ ಮಾವಾ ತಯಾರಿಸಿ ಮಾರಾಟ ಮಾಡುತ್ತಿದ್ದ ಐದು ಪ್ರಕರಣಗಳನ್ನು ದಾಖಲಿಸಿ, 10 ಆರೋಪಿಗಳ ವಿರುದ್ಧ ಕೋಟ್ಪಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಿಂದ ₹ 1.86 ಲಕ್ಷ ಮೌಲ್ಯದ ಮಾವಾ ವಶಪಡಿಸಿಕೊಳ್ಳಲಾಗಿದೆ.</p>.<p>ಅಬಕಾರಿ ಕಾಯ್ದೆಯಡಿ 19 ಪ್ರಕರಣಗಳನ್ನು ದಾಖಲಿಸಿ, 19 ಆರೋಪಿಗಳನ್ನು ಬಂಧಿಸಲಾಗಿದೆ. 35 ಜೂಜಾಟ ಪ್ರಕರಣಗಳನ್ನು ಪತ್ತೆ ಹಚ್ಚಿ 130 ಆರೋಪಿಗಳನ್ನು ಬಂಧಿಸಲಾಗಿದೆ. ಮಟ್ಕಾ ಪ್ರಕರಣಗಳಿಗೆ ಸಂಬಂಧಿಸಿದಂತೆ30 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.</p>.<p>ಈ ಎಲ್ಲ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಎಸ್ಪಿ ಅಭಿನಂದಿಸಿ, ಬಹುಮಾನ ನೀಡಿದರು.</p>.<p>ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ ಅರಸಿದ್ದಿ ಇದ್ದರು.</p>.<p><strong>ಕೊಲೆ ಆರೋಪಿಗಳ ಬಂಧನ</strong></p>.<p>ಸಿಂದಗಿ ಪಟ್ಟಣದಲ್ಲಿಕಳೆದ ಆಗಸ್ಟ್ 25ರಂದು ಐಸಿಐಸಿಐ ಬ್ಯಾಂಕಿನ ಎಟಿಎಂ ಭದ್ರತಾ ಸಿಬ್ಬಂದಿ ರಾಹುಲ ರಾಠೋಡ(24) ಎಂಬುವವರ ತಲೆಗೆ ಕಬ್ಬಿಣದ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ, ಬಳಿಕ ಎಟಿಎಂ ಯಂತ್ರವನ್ನು ಒಡೆದು ಕಳವಿಗೆ ಯತ್ನಿಸಿದ್ದ ಒಬ್ಬ ಬಾಲಾಪರಾಧಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.</p>.<p>ಎಟಿಎಂ ದರೋಡೆ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಬಲೇಶ್ವರದ ಜೆಸಿಬಿ ಚಾಲಕ ಅನಿಲ ಬರಗಾಲ(28), ದಯಾನಂದ ಹೊಸಮನಿ(21) ಹಾಗೂ 17 ವರ್ಷ ಇನ್ನೊಬ್ಬ ಬಾಲಾಪರಾಧಿಯನ್ನು ಸಿಂದಗಿ ಸಿಪಿಐ ಎಚ್.ಎಂ.ಪಾಟೀಲ ನೇತೃತ್ವದ ತಂಡವು ಕೊಂಡಗುಳಿ ಗ್ರಾಮದಲ್ಲಿ ಬಂಧಿಸಿದೆ.</p>.<p class="Briefhead"><strong>ಆರು ಜನರ ವಿರುದ್ಧಗೂಂಡಾ ಪ್ರಕರಣ</strong></p>.<p>ಕೊಲೆ, ಸುಲಿಗೆ, ಮಟ್ಕಾ, ಡಕಾಯತಿ, ಜೂಜಾಟ, ಅಪಹರಣ ಪ್ರಕರಣದಲ್ಲಿ ಪಾಲ್ಗೊಂಡಿದ್ದ ಆರು ಜನರನ್ನು ಗೂಂಡಾ ಕಾಯ್ದೆ ಅಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನೂ ಹಲವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮಕೈಗೊಳ್ಳಲು ಸಿದ್ಧತೆ ನಡೆದಿದೆ ಎಂದು ಎಸ್.ಪಿ.ಅಗರವಾಲ್ ತಿಳಿಸಿದರು.</p>.<p>ತಾಂಬಾ ನಿವಾಸಿ ದೇವೇಂದ್ರ ತದ್ದೇವಾಡಿ, ನಾಗರಾಠದ ಚಂದ್ರಶೇಖರ ವಡೆದ್ ಮತ್ತು ಸಂಗನಗೌಡ ಸಂಕನಾಳ, ವಿಜಯಪುರದ ಚಾಂದ್ಪೀರ್ ಇನಾಂದಾರ್ ಮತ್ತು ಹೈದರ್ ಅಲಿ ನದಾಫ್ ಹಾಗೂ ಹಿಂಗಣಿಯ ಪೀರಪ್ಪ ಕಟ್ಟಿಮನಿ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>