<p><strong>ಮುದ್ದೇಬಿಹಾಳ</strong>: ಪಟ್ಟಣದ ಬಜಾರದಲ್ಲಿರುವ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ 32 ವರ್ಷಗಳಿಂದ ರಾಜಸ್ಥಾನ ವೈಷ್ಣವಿ ಸಮಾಜ ಹಾಗೂ ವಿವಿಧ ಹಿಂದೂ ಸಮಾಜಗಳ ಆಶ್ರಯದಲ್ಲಿ ಅಂಬಾದೇವಿ (ದುರ್ಗಾದೇವಿ, ನಾಡದೇವತೆ, ಬನ್ನಿ ಮಹಾಕಾಳಿ ದೇವಿ ಎಂಬ ಹೆಸರಿನಿಂದಲೂ ಕರೆಯಲ್ಪಡುವ) ದೇವತೆಯ ಪೂಜೆ ನಡೆಸಿಕೊಂಡು ಬರಲಾಗುತ್ತಿದೆ.</p>.<p>ದೇಗುಲದ ಪಕ್ಕದಲ್ಲಿ ಪ್ರತ್ಯೇಕ ಮಂಟಪ ರಚಿಸಿ, ಅದರಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಸೆ.26 ಆರಂಭವಾಗಿರುವ ನವರಾತ್ರಿ ಉತ್ಸವ ಅ.5 ರಂದು ಮುಕ್ತಾಯವಾಗುತ್ತದೆ.</p>.<p>ಪ್ರತಿ ದಿನವೂ ದೇವತೆಯ ಪೂಜೆಗೆ ಪಟ್ಟಣದ ಜನರು ಸಾಗರೋಪಾದಿಯಲ್ಲಿ ಬೆಳಗಿನ ಮೂರು ಗಂಟೆಯಿಂದಲೇ ಬರುತ್ತಾರೆ.</p>.<p>1990ರ ಸುಮಾರಿಗೆ ಸಂಪತ್ ಪೋರ್ವಾಲ, ದಿ. ಅಮರಪ್ಪ ಅಮರಣ್ಣವರ, ಜ್ಯೋತಿರಾಮ ಸೋಲಂಕಿ, ಮುರಿಗೆಪ್ಪ ಮೋಟಗಿ, ಅಪ್ಪಣ್ಣ ಸಿದ್ದಾಪೂರ, ಅಶೋಕ ನಾಡಗೌಡ, ರಾಜು ಪೋರ್ವಾಲ, ಮುತ್ತಣ್ಣ ಒಣರೊಟ್ಟಿ, ಮುದಕಪ್ಪ ಪ್ಯಾಟಿಗೌಡರ ಮೊದಲಾದವರು ಸೇರಿ ದೇವಿಯ ಪೂಜೆ ಆರಂಭಿಸಿದರು.</p>.<p>ಇದೇ ವರ್ಷ ಕೋಲಾಪೂರದಿಂದ ದೇವಿಯ ಹೊಸ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಲಾಗಿದೆ ಎಂದು ಮುರಿಗೆಪ್ಪ ಮೋಟಗಿ ಹಾಗೂ ಅಪ್ಪಣ್ಣ ಸಿದ್ದಾಪೂರ ಹೇಳಿದರು.</p>.<p>ದೇವಿಯ ಪೂಜೆ ನಿತ್ಯ ಬೆಳಿಗ್ಗೆ 3 ಗಂಟೆಗೆ ಶುರುವಾಗುತ್ತದೆ. ಪ್ರತೀ ನಿತ್ಯ ದೇವಿಗೆ ಒಂದೊಂದು ಸೀರೆ ಉಡಿಸಲಾಗುತ್ತದೆ. ಹೂವಿನ ಹಾರ, ಅಲಂಕಾರ, ದೀಪದ ಪೂಜೆ ಹೀಗೆ ಬೆಳಿಗ್ಗೆ ಹಾಗೂ ಸಂಜೆ ವಿಶೇಷ ಪೂಜೆ, ಅಭಿಷೇಕವನ್ನು ಅರ್ಚಕರಿಂದ ಮಾಡಿಸಲಾಗುತ್ತದೆ.</p>.<p>ನಿತ್ಯ ಸಂಜೆ 8 ರಿಂದ 11 ಗಂಟೆಯವರೆಗೆ ರಾಜಸ್ಥಾನಿ ವೈಷ್ಣವಿ ಸಮಾಜದ ಯುವಕರು ದಾಂಡಿಯಾ (ಕೋಲಾಟ) ನೃತ್ಯ ಸೇರಿದಂತೆ, ಭಜನೆ, ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಾರೆ.</p>.<p>ಇದಲ್ಲದೇ ಪಟ್ಟಣದ ಅಂಬಾ ಭವಾನಿ ದೇವಸ್ಥಾನದಲ್ಲಿ ಬೆಳ್ಳಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಿತ್ಯ ಪ್ರದಕ್ಷಿಣೆ, ಪೂಜೆ, ಮಹಿಳೆಯರಿಗೆ ಉಡಿ ತುಂಬುವ ಕಾರ್ಯ ನಡೆಸಲಾಗುತ್ತಿದೆ ಎಂದು ಹಣಮಂತ ನಲವಡೆ ಹೇಳಿದರು.</p>.<p>ಮಹಾಂತೇಶ ನಗರದಲ್ಲಿರುವ ಮಹಾ ಗಣಪತಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಸಂಬಂಧ ದೇವಿಯ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ನಡೆಸಲಾಗುತ್ತಿದೆ.</p>.<p>ವಿಬಿಸಿ ಪ್ರೌಢಶಾಲೆಯಲ್ಲಿರುವ ಬನ್ನಿ ಬಸವಣ್ಣನ ಕಟ್ಟೆಯ ಆವರಣದಲ್ಲಿ ಉಪನ್ಯಾಸಕ ಐ. ವಿ. ಹಿರೇಮಠ ಅವರ ನೇತೃತ್ವದಲ್ಲಿ ನವರಾತ್ರಿ ಉತ್ಸವ ಕಾರ್ಯಕ್ರಮ ನಡೆಯುತ್ತಿವೆ.</p>.<p>ಪಟ್ಟಣದಲ್ಲಿ ವಿವಿಧ ಸಮಿತಿಗಳು ನವರಾತ್ರಿ ಉತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದು, ಅ.5 ರಂದು ಬನ್ನಿ ಹಬ್ಬದ ದಿನ ಉತ್ಸವಕ್ಕೆ ತೆರೆ ಬೀಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುದ್ದೇಬಿಹಾಳ</strong>: ಪಟ್ಟಣದ ಬಜಾರದಲ್ಲಿರುವ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ 32 ವರ್ಷಗಳಿಂದ ರಾಜಸ್ಥಾನ ವೈಷ್ಣವಿ ಸಮಾಜ ಹಾಗೂ ವಿವಿಧ ಹಿಂದೂ ಸಮಾಜಗಳ ಆಶ್ರಯದಲ್ಲಿ ಅಂಬಾದೇವಿ (ದುರ್ಗಾದೇವಿ, ನಾಡದೇವತೆ, ಬನ್ನಿ ಮಹಾಕಾಳಿ ದೇವಿ ಎಂಬ ಹೆಸರಿನಿಂದಲೂ ಕರೆಯಲ್ಪಡುವ) ದೇವತೆಯ ಪೂಜೆ ನಡೆಸಿಕೊಂಡು ಬರಲಾಗುತ್ತಿದೆ.</p>.<p>ದೇಗುಲದ ಪಕ್ಕದಲ್ಲಿ ಪ್ರತ್ಯೇಕ ಮಂಟಪ ರಚಿಸಿ, ಅದರಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಸೆ.26 ಆರಂಭವಾಗಿರುವ ನವರಾತ್ರಿ ಉತ್ಸವ ಅ.5 ರಂದು ಮುಕ್ತಾಯವಾಗುತ್ತದೆ.</p>.<p>ಪ್ರತಿ ದಿನವೂ ದೇವತೆಯ ಪೂಜೆಗೆ ಪಟ್ಟಣದ ಜನರು ಸಾಗರೋಪಾದಿಯಲ್ಲಿ ಬೆಳಗಿನ ಮೂರು ಗಂಟೆಯಿಂದಲೇ ಬರುತ್ತಾರೆ.</p>.<p>1990ರ ಸುಮಾರಿಗೆ ಸಂಪತ್ ಪೋರ್ವಾಲ, ದಿ. ಅಮರಪ್ಪ ಅಮರಣ್ಣವರ, ಜ್ಯೋತಿರಾಮ ಸೋಲಂಕಿ, ಮುರಿಗೆಪ್ಪ ಮೋಟಗಿ, ಅಪ್ಪಣ್ಣ ಸಿದ್ದಾಪೂರ, ಅಶೋಕ ನಾಡಗೌಡ, ರಾಜು ಪೋರ್ವಾಲ, ಮುತ್ತಣ್ಣ ಒಣರೊಟ್ಟಿ, ಮುದಕಪ್ಪ ಪ್ಯಾಟಿಗೌಡರ ಮೊದಲಾದವರು ಸೇರಿ ದೇವಿಯ ಪೂಜೆ ಆರಂಭಿಸಿದರು.</p>.<p>ಇದೇ ವರ್ಷ ಕೋಲಾಪೂರದಿಂದ ದೇವಿಯ ಹೊಸ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಲಾಗಿದೆ ಎಂದು ಮುರಿಗೆಪ್ಪ ಮೋಟಗಿ ಹಾಗೂ ಅಪ್ಪಣ್ಣ ಸಿದ್ದಾಪೂರ ಹೇಳಿದರು.</p>.<p>ದೇವಿಯ ಪೂಜೆ ನಿತ್ಯ ಬೆಳಿಗ್ಗೆ 3 ಗಂಟೆಗೆ ಶುರುವಾಗುತ್ತದೆ. ಪ್ರತೀ ನಿತ್ಯ ದೇವಿಗೆ ಒಂದೊಂದು ಸೀರೆ ಉಡಿಸಲಾಗುತ್ತದೆ. ಹೂವಿನ ಹಾರ, ಅಲಂಕಾರ, ದೀಪದ ಪೂಜೆ ಹೀಗೆ ಬೆಳಿಗ್ಗೆ ಹಾಗೂ ಸಂಜೆ ವಿಶೇಷ ಪೂಜೆ, ಅಭಿಷೇಕವನ್ನು ಅರ್ಚಕರಿಂದ ಮಾಡಿಸಲಾಗುತ್ತದೆ.</p>.<p>ನಿತ್ಯ ಸಂಜೆ 8 ರಿಂದ 11 ಗಂಟೆಯವರೆಗೆ ರಾಜಸ್ಥಾನಿ ವೈಷ್ಣವಿ ಸಮಾಜದ ಯುವಕರು ದಾಂಡಿಯಾ (ಕೋಲಾಟ) ನೃತ್ಯ ಸೇರಿದಂತೆ, ಭಜನೆ, ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಾರೆ.</p>.<p>ಇದಲ್ಲದೇ ಪಟ್ಟಣದ ಅಂಬಾ ಭವಾನಿ ದೇವಸ್ಥಾನದಲ್ಲಿ ಬೆಳ್ಳಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಿತ್ಯ ಪ್ರದಕ್ಷಿಣೆ, ಪೂಜೆ, ಮಹಿಳೆಯರಿಗೆ ಉಡಿ ತುಂಬುವ ಕಾರ್ಯ ನಡೆಸಲಾಗುತ್ತಿದೆ ಎಂದು ಹಣಮಂತ ನಲವಡೆ ಹೇಳಿದರು.</p>.<p>ಮಹಾಂತೇಶ ನಗರದಲ್ಲಿರುವ ಮಹಾ ಗಣಪತಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಸಂಬಂಧ ದೇವಿಯ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ನಡೆಸಲಾಗುತ್ತಿದೆ.</p>.<p>ವಿಬಿಸಿ ಪ್ರೌಢಶಾಲೆಯಲ್ಲಿರುವ ಬನ್ನಿ ಬಸವಣ್ಣನ ಕಟ್ಟೆಯ ಆವರಣದಲ್ಲಿ ಉಪನ್ಯಾಸಕ ಐ. ವಿ. ಹಿರೇಮಠ ಅವರ ನೇತೃತ್ವದಲ್ಲಿ ನವರಾತ್ರಿ ಉತ್ಸವ ಕಾರ್ಯಕ್ರಮ ನಡೆಯುತ್ತಿವೆ.</p>.<p>ಪಟ್ಟಣದಲ್ಲಿ ವಿವಿಧ ಸಮಿತಿಗಳು ನವರಾತ್ರಿ ಉತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದು, ಅ.5 ರಂದು ಬನ್ನಿ ಹಬ್ಬದ ದಿನ ಉತ್ಸವಕ್ಕೆ ತೆರೆ ಬೀಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>