ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂದರ ಪರಿಸರ ನಿರ್ಮಾಣ ಅಗತ್ಯ: ಸಿದ್ಧೇಶ್ವರ ಶ್ರೀ

Last Updated 13 ಸೆಪ್ಟೆಂಬರ್ 2021, 11:15 IST
ಅಕ್ಷರ ಗಾತ್ರ

ವಿಜಯಪುರ: ನಗರದಭೂತನಾಳ ಕೆರೆ ಬಳಿ ಇರುವ ಗಂಟೆ ಆಂಜನೇಯ ಜೈ ಹನುಮಾನ ದೇವಸ್ಥಾನ ಸಮಿತಿಯಿಂದ 201 ಸಸಿಗಳನ್ನು ನೆಡಲಾಯಿತು.

ಸಸಿ ನೆಟ್ಟುಆಶೀರ್ವಚನ ನೀಡಿದಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ, ನಮ್ಮ ಸುತ್ತಮುತ್ತ ಗಿಡಮರಗಳಿಂದ ಕೂಡಿದ ಪರಿಸರ ಅವಶ್ಯಕವಾಗಿದೆ. ಸದ್ಯದ ಕಾಲಘಟ್ಟದಲ್ಲಿ ಮನುಷ್ಯನಿಗೆ ಶುದ್ಧ ಗಾಳಿ ಸಿಗುತ್ತಿಲ್ಲ. ಆದ ಕಾರಣ ಖಾಲಿ ಪ್ರದೇಶದಲ್ಲಿ ಸಸಿಗಳನ್ನು ನೆಡುವುದರ ಮೂಲಕ ಶುದ್ಧ ಗಾಳಿ ದೊರೆಯುವಂತೆ ಮಾಡಬೇಕಾದ ಅಗತ್ಯ ಇದೆ ಎಂದರು.

ವಾಹನ ದಟ್ಟನೆ ಹಾಗೂ ಕಾರ್ಖಾನೆಗಳಿಂದಾಗಿಪರಿಸರ ಹಾಳಾಗುತ್ತಿದೆ. ಪರಿಸರ ವಿನಾಶದತ್ತ ದಾಪುಗಾಲಿಡುತ್ತಿದೆ. ಆದ್ದರಿಂದ ನಾವೆಲ್ಲರೂ ಪರಿಸರ ರಕ್ಷಣೆಗೆ ಮುಂದಾಗಬೇಕು. ಪ್ರತಿಯೊಬ್ಬರು ಒಂದೊಂದು ಗಿಡಗಳನ್ನು ನೆಟ್ಟು ಸುಂದರ ಪರಿಸರ ನಿರ್ಮಾಣದತ್ತ ಸಾಗಬೇಕಾಗಿದೆ ಎಂದರು.

ಬಸವಲಿಂಗ ಸ್ವಾಮೀಜಿ, ರಾಮನಗೌಡ ಪಾಟೀಲ, ಅಭಿನವ ದೇವಾನಂದ ಚವ್ಹಾಣ, ರಾಮಚಂದ್ರ ಬಿ. ಚವ್ಹಾಣ, ಹುನ್ನು ಶಂಕರ ನಾಯಕ, ಕಾಸು ಹಾಮು ನಾಯಕ, ಮುನ್ನು ಲಚ್ಚು ಡಾವ್, ಭೀಮು ರಾಮು ಡಾವ್, ದಾಮಲು ಪುನ್ನು ಕಾರಭಾರಿ, ಮೋಹನ ಕುಬ್ಬು ಕಾರಬಾರಿ, ರಮೇಶ ಲಚ್ಚು ಚವ್ಹಾಣ, ಅಶೋಕ ಸೇವು ಚವ್ಹಾಣ, ದೇವು ಕೇಸು ಚವ್ಹಾಣ,ರಾಮಚಂದ್ರ ಬಿ. ಚವ್ಹಾಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT