‘ರಮೇಶ ಜಿಗಜಿಣಗಿ ಅವರು ಇದು ತಮ್ಮ ಕೊನೆಯ ಚುನಾವಣೆ ಎಂದು ಜನರ ಮುಂದೆ ಹೋಗಿದ್ದು ಅವರ ಮೇಲೆ ಅನುಕಂಪದ ಅಲೆ ಪರಿಣಾಮ ಬೀರಿತು. ಜನರು ಕೆಲವು ಸಿದ್ಧಾಂತಗಳನ್ನಿಟ್ಟುಕೊಂಡು ಮತ ಚಲಾಯಿಸಿದ್ದಾರೆ. ಗ್ಯಾರಂಟಿ ಕೊಟ್ಟರೂ ಜನರ ಮನಸ್ಥಿತಿಯಲ್ಲಿ ಬದಲಾವಣೆ ಆಗಿಲ್ಲ. ಶೇ 90ರಷ್ಟು ಗ್ಯಾರಂಟಿ ತೆಗೆದುಕೊಂಡವರು ಇದ್ದರೂ, ಗ್ರಾಮೀಣ ಪ್ರದೇಶದಲ್ಲಿ ಬಸ್ ಉಚಿತ, ಶೇ 73ರಷ್ಟು ಜನರ ಮನೆಗೆ ₹ 2 ಸಾವಿರ ಹೋಗುತ್ತದೆ. ಇಷ್ಟಾದರೂ ಕಾಂಗ್ರೆಸ್ಗೆ ಜನ ಮತ ಹಾಕಿಲ್ಲ ಎಂದರೆ ಅದಕ್ಕೆ ಅವರು ಇಟ್ಟುಕೊಂಡಿರುವ ಸಿದ್ಧಾಂತವೇ ಕಾರಣ. ಅದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ’ ಎಂದು ಅಭಿಪ್ರಾಯಪಟ್ಟರು.