ಮೇ 24ರಿಂದ ಆರಂಭವಾಗಿರುವ ರೋಹಿಣಿ ಮಳೆ ಉತ್ತಮ ಮುಂಗಾರಿನ ಸೂಚನೆ ನೀಡಿದ್ದು, ರೈತರ ಮೊಗದಲ್ಲಿ ಸಂತೋಷಕ್ಕೆ ಕಾರಣವಾಗಿದೆ. ವಾತಾವರಣವೂ ತಂಪಾಗಿದೆ. ಜಮೀನುಗಳ ಬದಿಯಲ್ಲಿ ಹಸಿರು ಚಿಗುರೊಡೆದಿದ್ದು, ದನಕರುಗಳಿಗೆ ಆಡು -ಕುರಿ ಮೇಯಿಸಲು ಮೇವು ದೊರೆಯುವಂತಾಗಿದೆ. ಅಲ್ಲಲ್ಲಿ ನೀರು ನಿಂತಿದ್ದು, ಜಾನುವಾರಗಳಿಗೂ ಅನುಕೂಲವಾಗಿದೆ.