<p><strong>ವಿಜಯಪುರ:</strong> ಶಾಲಾ ಮಕ್ಕಳಿಗೆ ಆರೋಗ್ಯವರ್ಧಕವಾಗಿರುವ ಒಣದ್ರಾಕ್ಷಿ ವಿತರಣೆ ಕುರಿತು ವಿಜಯಪುರದಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಜವಳಿ, ಕೃಷಿ ಮಾರುಕಟ್ಟೆ ಸಕ್ಕರೆ ಹಾಗೂ ಕಬ್ಬು ಅಭಿಣಿವೃದ್ಧಿ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.</p>.<p>ನಗರದಲ್ಲಿ ಪುಣೆಯ ರಾಷ್ಟ್ರೀಯ ದ್ರಾಕ್ಷಿ ಬೆಳೆಗಾರರ ಮಹಾಮಂಡಳ, ರಾಷ್ಟ್ರೀಯ ದ್ರಾಕ್ಷಿ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದ್ರಾಕ್ಷಿ ಹಾಗೂ ಒಣದ್ರಾಕ್ಷಿ ಉತ್ಪಾದನೆಯಲ್ಲಿ ಇತ್ತೀಚಿನ ಬೆಳವಣಿಗೆಗಳ ಕುರಿತು ರಾಷ್ಟ್ರ ಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ಇತಿಹಾಸದಲ್ಲೇ ಒಣದ್ರಾಕ್ಷಿ ಬೆಳೆಗೆ ಮೊದಲ ಬಾರಿಗೆ ₹500 ರಿಂದ ₹600 ದರ ಸಿಕ್ಕಿದ್ದು, ಭವಿಷ್ಯದಲ್ಲಿ ಗುಣಮಟ್ಟದ ಮೌಲ್ಯವರ್ಧನೆ, ಗ್ರೇಡಿಂಗ್ನಂಥ ವಿಷುಯಗಳಿಗೆ ಆದ್ಯತೆ ನೀಡಿದಲ್ಲಿ ದ್ರಾಕ್ಷಿ ಬೆಳೆಗಾರರಿಗೆ ಉತ್ತಮ ಭವಿಷ್ಯವಿದೆ ಎಂದರು.</p>.<p>ವಿಜಯಪುರ ಜಿಲ್ಲೆಯನ್ನು ಒಣದ್ರಾಕ್ಷಿ ಹಬ್ ಮಾಡಿ, ರಫ್ತು ಗುಣಮಟ್ಟದ ಒಣದ್ರಾಕ್ಷಿ ಉತ್ಪಾದನೆ ವಿಷಯವಾಗಿ ಸಂಶೋಧನೆ ನಡೆಸಲು ಮುಂದಾದಲ್ಲಿ ವಿಜಯಪುರದಲ್ಲಿ ಎಪಿಎಂಸಿ ಮೂಲಕ 20 ಎಕರೆ ಜಮೀನು ನೀಡುವುದಾಗಿ ಘೋಷಿಸಿದರು.</p>.<p>ವಿಜಯಪುರ ಜಿಲ್ಲೆಯಲ್ಲಿ ವೈನ್ ಪಾರ್ಕ್ ನಿರ್ಮಾಣಕ್ಕೆ ಈಗಾಗಲೇ 141 ಎಕರೆ ಜಮೀನು ನೀಡಿದ್ದು, ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ 35 ಕೋಲ್ಡ್ ಸ್ಟೋರೇಜ್ಗಳನ್ನೂ ನಿರ್ಮಿಸಲಾಗುತ್ತಿದೆ. ಹೀಗಾಗಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ, ವಿಷಮುಕ್ತವಾಗಿ ಗುಣಮಟ್ಟದ, ರಫ್ತು ದರ್ಜೆಯ ದ್ರಾಕ್ಷಿ ಬೆಳೆಯುವ ಕುರಿತು ರೈತರಿಗೆ ತಾಂತ್ರಿಕ ಮಾಹಿತಿ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವಿಜಯಪುರದಲ್ಲಿ ಬೆಳೆಯುವ ದ್ರಾಕ್ಷಿಯಲ್ಲಿ ಬಹುತೇಕ ಒಣದ್ರಾಕ್ಷಿ ಉತ್ಪಾದಿಸುತ್ತಿದ್ದು, ವಿಷಮುಕ್ತ ಒಣದ್ರಾಕ್ಷಿ ಉತ್ಪಾದನೆಗೆ ಆದ್ಯತೆ ನೀಡುವ ಸಂಶೋಧನೆ ನಡೆಯಬೇಕಿದೆ ಎಂದರು.</p>.<p>ವಿಶಿಷ್ಟ ಸ್ವಾದದ ಉತ್ಕೃಷ್ಟ ದರ್ಜೆಯ ಒಣದ್ರಾಕ್ಷಿ ಉತ್ಪಾದಿಸುವ ವಿಜಯಪುರದ ಹಸಿರು ದ್ರಾಕ್ಷಿಗೆ ವಿಜಯಪುರ ಗ್ರೀನ್ ಕ್ರಿಸ್ಮಿಸ್ ಹೆಸರಿನಲ್ಲಿ ಜಿಐ (ಭೌಗೋಳಿಕ ಸೂಚ್ಯಂಕ) ಟ್ಯಾಗ್ ಪಡೆಯಲು ಸಿದ್ಧತೆ ನಡೆದಿದೆ. ಬಾಗಲಕೋಟೆ ವಿಶ್ವವಿದ್ಯಾಲಯದ ಡಾ.ಫಕ್ರುದ್ಧಿನ್ ಅಧ್ಯಕ್ಷತೆಯಲ್ಲಿ ಸಮಿತಿ ಅಗತ್ಯ ದಾಖಲೆ ಹಾಗೂ ಪೂರಕ ಮಾಹಿತಿ ಸಂಗ್ರಹದಲ್ಲಿ ತೊಡಗಿದೆ. ಶೀಘ್ರವೇ ವಿಜಯಪುರ ಹಸಿರು ಒಣದ್ರಾಕ್ಷಿಗೆ ಜಿಐ ಟ್ಯಾಗ್ ಸಿಗಲಿದೆ ಎಂದರು.</p>.<p>ರಾಷ್ಟ್ರೀಯ ದ್ರಾಕ್ಷಿ ಬೆಳೆಗಾರರ ಮಹಾಮಂಡಳದ ಅಧ್ಯಕ್ಷ ಸೋಫನ್ ಕಾಂಚನ್, ಉಪಾಧ್ಯಕ್ಷ ಬಿ.ಎಂ.ಕೋಕರೆ, ಕೈಲಾಸ್ ಭೋಸಲೆ, ಎಸ್.ಡಿ.ಸಾವಂತ, ಮಾರುತಿ ಚವ್ಹಾಣ, ಎಸ್.ಡಿ.ಶಿಖಾಮಣಿ, ಪ್ರಕಾಶ ಗಣಿ, ಕೌಶಿಕ್ ಬ್ಯಾನರ್ಜಿ, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ವಿಷ್ಣುವರ್ಧನ ಇದ್ದರು.</p>.<p><strong>‘ದ್ರಾಕ್ಷಿ ಭೂಷಣ’ ಪ್ರಶಸ್ತಿ ಪ್ರದಾನ</strong> </p><p>ದ್ರಾಕ್ಷಿ ಬೆಳೆಯುವಲ್ಲಿ ಸಾಧನೆ ಮಾಡಿರುವ ಕರ್ನಾಟಕದ ವಿ.ಡಿ.ಪಾಟೀಲ ಸೋಲಾಪುರದ ಮಹಾದೇವ ಚಾಕೋಟೆ ನಾಸಿಕ್ನ ಅಶೋಕ ಗಾಯಕವಾಡ ಪುಣೆಯ ಅನಿಲ ಮೆಹರೆ ಸಾಂಗಲಿಯ ಜಗನ್ನಾಥ ಮಸ್ಕೆ ತಮಿಳುನಾಡಿನ ಸೇಂಥಿಲಕುಮಾರ್ ಆಂಧ್ರಪ್ರದೇಶದ ವೆಂಟಕರೆಡ್ಡಿ ಕನಕರೆಡ್ಡಿ ಅವರಿಗೆ ‘ದ್ರಾಕ್ಷಿ ಭೂಷಣ’ ಪ್ರಶಸ್ತಿಯನ್ನು ಸಚಿವ ಶಿವಾನಂದ ಪಾಟೀಲ ಪ್ರದಾನ ಮಾಡಿದರು.</p>.<div><blockquote>ದ್ರಾಕ್ಷಿ ಬೆಳೆಗಾರರ ಹಿತದೃಷ್ಟಿಯಿಂದ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಹಾಲು ಮೊಟ್ಟೆ ಬಾಳೆಹಣ್ಣು ವಿತರಣೆ ಜೊತೆಗೆ ಒಣದ್ರಾಕ್ಷಿ ವಿತರಣೆ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗುವುದು.</blockquote><span class="attribution">-ಶಿವಾನಂದ ಪಾಟೀಲ, ಸಚಿವ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ಶಾಲಾ ಮಕ್ಕಳಿಗೆ ಆರೋಗ್ಯವರ್ಧಕವಾಗಿರುವ ಒಣದ್ರಾಕ್ಷಿ ವಿತರಣೆ ಕುರಿತು ವಿಜಯಪುರದಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಜವಳಿ, ಕೃಷಿ ಮಾರುಕಟ್ಟೆ ಸಕ್ಕರೆ ಹಾಗೂ ಕಬ್ಬು ಅಭಿಣಿವೃದ್ಧಿ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.</p>.<p>ನಗರದಲ್ಲಿ ಪುಣೆಯ ರಾಷ್ಟ್ರೀಯ ದ್ರಾಕ್ಷಿ ಬೆಳೆಗಾರರ ಮಹಾಮಂಡಳ, ರಾಷ್ಟ್ರೀಯ ದ್ರಾಕ್ಷಿ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದ್ರಾಕ್ಷಿ ಹಾಗೂ ಒಣದ್ರಾಕ್ಷಿ ಉತ್ಪಾದನೆಯಲ್ಲಿ ಇತ್ತೀಚಿನ ಬೆಳವಣಿಗೆಗಳ ಕುರಿತು ರಾಷ್ಟ್ರ ಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ಇತಿಹಾಸದಲ್ಲೇ ಒಣದ್ರಾಕ್ಷಿ ಬೆಳೆಗೆ ಮೊದಲ ಬಾರಿಗೆ ₹500 ರಿಂದ ₹600 ದರ ಸಿಕ್ಕಿದ್ದು, ಭವಿಷ್ಯದಲ್ಲಿ ಗುಣಮಟ್ಟದ ಮೌಲ್ಯವರ್ಧನೆ, ಗ್ರೇಡಿಂಗ್ನಂಥ ವಿಷುಯಗಳಿಗೆ ಆದ್ಯತೆ ನೀಡಿದಲ್ಲಿ ದ್ರಾಕ್ಷಿ ಬೆಳೆಗಾರರಿಗೆ ಉತ್ತಮ ಭವಿಷ್ಯವಿದೆ ಎಂದರು.</p>.<p>ವಿಜಯಪುರ ಜಿಲ್ಲೆಯನ್ನು ಒಣದ್ರಾಕ್ಷಿ ಹಬ್ ಮಾಡಿ, ರಫ್ತು ಗುಣಮಟ್ಟದ ಒಣದ್ರಾಕ್ಷಿ ಉತ್ಪಾದನೆ ವಿಷಯವಾಗಿ ಸಂಶೋಧನೆ ನಡೆಸಲು ಮುಂದಾದಲ್ಲಿ ವಿಜಯಪುರದಲ್ಲಿ ಎಪಿಎಂಸಿ ಮೂಲಕ 20 ಎಕರೆ ಜಮೀನು ನೀಡುವುದಾಗಿ ಘೋಷಿಸಿದರು.</p>.<p>ವಿಜಯಪುರ ಜಿಲ್ಲೆಯಲ್ಲಿ ವೈನ್ ಪಾರ್ಕ್ ನಿರ್ಮಾಣಕ್ಕೆ ಈಗಾಗಲೇ 141 ಎಕರೆ ಜಮೀನು ನೀಡಿದ್ದು, ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ 35 ಕೋಲ್ಡ್ ಸ್ಟೋರೇಜ್ಗಳನ್ನೂ ನಿರ್ಮಿಸಲಾಗುತ್ತಿದೆ. ಹೀಗಾಗಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ, ವಿಷಮುಕ್ತವಾಗಿ ಗುಣಮಟ್ಟದ, ರಫ್ತು ದರ್ಜೆಯ ದ್ರಾಕ್ಷಿ ಬೆಳೆಯುವ ಕುರಿತು ರೈತರಿಗೆ ತಾಂತ್ರಿಕ ಮಾಹಿತಿ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವಿಜಯಪುರದಲ್ಲಿ ಬೆಳೆಯುವ ದ್ರಾಕ್ಷಿಯಲ್ಲಿ ಬಹುತೇಕ ಒಣದ್ರಾಕ್ಷಿ ಉತ್ಪಾದಿಸುತ್ತಿದ್ದು, ವಿಷಮುಕ್ತ ಒಣದ್ರಾಕ್ಷಿ ಉತ್ಪಾದನೆಗೆ ಆದ್ಯತೆ ನೀಡುವ ಸಂಶೋಧನೆ ನಡೆಯಬೇಕಿದೆ ಎಂದರು.</p>.<p>ವಿಶಿಷ್ಟ ಸ್ವಾದದ ಉತ್ಕೃಷ್ಟ ದರ್ಜೆಯ ಒಣದ್ರಾಕ್ಷಿ ಉತ್ಪಾದಿಸುವ ವಿಜಯಪುರದ ಹಸಿರು ದ್ರಾಕ್ಷಿಗೆ ವಿಜಯಪುರ ಗ್ರೀನ್ ಕ್ರಿಸ್ಮಿಸ್ ಹೆಸರಿನಲ್ಲಿ ಜಿಐ (ಭೌಗೋಳಿಕ ಸೂಚ್ಯಂಕ) ಟ್ಯಾಗ್ ಪಡೆಯಲು ಸಿದ್ಧತೆ ನಡೆದಿದೆ. ಬಾಗಲಕೋಟೆ ವಿಶ್ವವಿದ್ಯಾಲಯದ ಡಾ.ಫಕ್ರುದ್ಧಿನ್ ಅಧ್ಯಕ್ಷತೆಯಲ್ಲಿ ಸಮಿತಿ ಅಗತ್ಯ ದಾಖಲೆ ಹಾಗೂ ಪೂರಕ ಮಾಹಿತಿ ಸಂಗ್ರಹದಲ್ಲಿ ತೊಡಗಿದೆ. ಶೀಘ್ರವೇ ವಿಜಯಪುರ ಹಸಿರು ಒಣದ್ರಾಕ್ಷಿಗೆ ಜಿಐ ಟ್ಯಾಗ್ ಸಿಗಲಿದೆ ಎಂದರು.</p>.<p>ರಾಷ್ಟ್ರೀಯ ದ್ರಾಕ್ಷಿ ಬೆಳೆಗಾರರ ಮಹಾಮಂಡಳದ ಅಧ್ಯಕ್ಷ ಸೋಫನ್ ಕಾಂಚನ್, ಉಪಾಧ್ಯಕ್ಷ ಬಿ.ಎಂ.ಕೋಕರೆ, ಕೈಲಾಸ್ ಭೋಸಲೆ, ಎಸ್.ಡಿ.ಸಾವಂತ, ಮಾರುತಿ ಚವ್ಹಾಣ, ಎಸ್.ಡಿ.ಶಿಖಾಮಣಿ, ಪ್ರಕಾಶ ಗಣಿ, ಕೌಶಿಕ್ ಬ್ಯಾನರ್ಜಿ, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ವಿಷ್ಣುವರ್ಧನ ಇದ್ದರು.</p>.<p><strong>‘ದ್ರಾಕ್ಷಿ ಭೂಷಣ’ ಪ್ರಶಸ್ತಿ ಪ್ರದಾನ</strong> </p><p>ದ್ರಾಕ್ಷಿ ಬೆಳೆಯುವಲ್ಲಿ ಸಾಧನೆ ಮಾಡಿರುವ ಕರ್ನಾಟಕದ ವಿ.ಡಿ.ಪಾಟೀಲ ಸೋಲಾಪುರದ ಮಹಾದೇವ ಚಾಕೋಟೆ ನಾಸಿಕ್ನ ಅಶೋಕ ಗಾಯಕವಾಡ ಪುಣೆಯ ಅನಿಲ ಮೆಹರೆ ಸಾಂಗಲಿಯ ಜಗನ್ನಾಥ ಮಸ್ಕೆ ತಮಿಳುನಾಡಿನ ಸೇಂಥಿಲಕುಮಾರ್ ಆಂಧ್ರಪ್ರದೇಶದ ವೆಂಟಕರೆಡ್ಡಿ ಕನಕರೆಡ್ಡಿ ಅವರಿಗೆ ‘ದ್ರಾಕ್ಷಿ ಭೂಷಣ’ ಪ್ರಶಸ್ತಿಯನ್ನು ಸಚಿವ ಶಿವಾನಂದ ಪಾಟೀಲ ಪ್ರದಾನ ಮಾಡಿದರು.</p>.<div><blockquote>ದ್ರಾಕ್ಷಿ ಬೆಳೆಗಾರರ ಹಿತದೃಷ್ಟಿಯಿಂದ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಹಾಲು ಮೊಟ್ಟೆ ಬಾಳೆಹಣ್ಣು ವಿತರಣೆ ಜೊತೆಗೆ ಒಣದ್ರಾಕ್ಷಿ ವಿತರಣೆ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗುವುದು.</blockquote><span class="attribution">-ಶಿವಾನಂದ ಪಾಟೀಲ, ಸಚಿವ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>