<p>ವಿಜಯಪುರ: ಕವಿ ಸರ್ವಜ್ಞ ತ್ರಿಪದಿಗಳ ಮೂಲಕ ಸಮಾಜದ ಅಂಕು-ಡೊಂಕು, ಓರೆ-ಕೋರೆಗಳನ್ನು ತಿದ್ದಿದ ದಾರ್ಶನಿಕ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ್ ಹೇಳಿದರು.</p>.<p>ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ಜನರಾಡುವ ಭಾಷೆಯಲ್ಲಿ ಅತ್ಯಂತ ಸರಳವಾಗಿ ಹಾಗೂ ತೀಕ್ಷ್ಣವಾದ ಪದಗಳ ಮೂಲಕ ಸರ್ವಜ್ಞ ಕವಿ ಜೀವನದ ಆದರ್ಶವನ್ನು ಬೋಧಿಸಿದ್ದಾನೆ. ತ್ರಿಪದಿ ಸಾರವನ್ನು ಅರಿತು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.</p>.<p>ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಜೀವನದ ತತ್ವಗಳನ್ನು ತ್ರಿಪದಿಗಳಲ್ಲಿ ಕಾಣಬಹುದಾಗಿದೆ. ಆತ್ಮಶುದ್ಧಿ, ನೈತಿಕ ಬದುಕಿನ ಮಹತ್ವವನ್ನು ಪ್ರತಿಪಾದಿಸಲಾಗಿದೆ. ಹೊರಗಿನ ಆರ್ಭಟಕ್ಕಿಂತ ಒಳಮನಸ್ಸಿನ ಶುದ್ಧತೆಯೇ ಮುಖ್ಯ ಎಂಬ ಸಂದೇಶವನ್ನು ಅವರು ಸಾರಿದ್ದಾರೆ ಎಂದು ಹೇಳಿದರು.</p>.<p>ಮಾನವ ಜೀವನದಲ್ಲಿ ಪಾಪ-ಪುಣ್ಯಗಳನ್ನು ಸಮಾನವಾಗಿ ಅರ್ಥಮಾಡಿಕೊಂಡು, ಜೀವನದ ಏರುಪೇರುಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂಬ ತತ್ವವನ್ನು ಸರ್ವಜ್ಞ ತಿಳಿಸಿದ್ದಾರೆ ಎಂದರು.</p>.<p>ಜೀವನ ಸುಗಮವಾಗಬೇಕಾದರೆ ಸ್ವಾರ್ಥ, ಅಹಂಕಾರ ಹಾಗೂ ದುರಾಸೆಗಳನ್ನು ತೊರೆದು ಸತ್ಯ, ದಯೆ ಮತ್ತು ಸದ್ವಿಚಾರದ ಮಾರ್ಗದಲ್ಲಿ ನಡೆಯಬೇಕು ಎಂದು ಸರ್ವಜ್ಞ ಕವಿ ಹೇಳಿದ್ದಾರೆ ಎಂದು ತಿಳಿಸಿದರು.</p>.<p>ವ್ಯಕ್ತಿಯ ವರ್ತನೆ ಮಾತು ಮತ್ತು ಚಿಂತನೆಗಳಲ್ಲಿರುವ ಶುದ್ಧತೆಯೇ ಮಾನವ ಜೀವನದ ಸಾರ್ಥಕತೆ, ಇಂದಿನ ತಾಂತ್ರಿಕ ಯುಗದಲ್ಲಿ ಯುವಪೀಳಿಗೆ ಸರ್ವಜ್ಞನ ವಚನಗಳನ್ನು ಅರಿಯಬೇಕು. ಅಲ್ಲಿ ಅಭಿವ್ಯಕ್ತವಾಗುವ ಆರೋಗ್ಯಕರ ಜೀವನಶೈಲಿ, ಶ್ರಮದ ಮಹತ್ವ, ಸಮಯಪಾಲನೆ, ಮಾನವ ಸಂಬಂಧಗಳ ಮೌಲ್ಯ ಹಾಗೂ ಆತ್ಮ ಪರಿಶೀಲನೆ ಕುರಿತ ಅನೇಕ ಸಂದೇಶಗಳು ಅಡಕವಾಗಿವೆ ಎಂದು ಹೇಳಿದರು.</p>.<p>ಸಂತ ಕವಿ ಸರ್ವಜ್ಞ ಅವರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರ, ಅದನ್ನು ಎಲ್ಲರೂ ಸ್ಮರಿಸಬೇಕು ಎಂದು ಹೇಳಿದರು.</p>.<p>ಉಪನ್ಯಾಸ ನೀಡಿದ ಸಂಗಪ್ಪ ಎಸ್. ಕುಂಬಾರ, ಸರ್ವಜ್ಞ ಕವಿ ಸಮಾಜದಲ್ಲಿ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಚಿಂತನೆಗಳನ್ನು ಬಿತ್ತಿದ್ದಾರೆ ಎಂದರು.</p>.<p>ಸರ್ವಜ್ಞನ ವಚನಗಳಲ್ಲಿ ವ್ಯಕ್ತಿತ್ವದ ವಿಕಾಸ, ನೈತಿಕ ಶಿಸ್ತು ಹಾಗೂ ಸಮಾಜಮುಖಿ ಜೀವನದ ತತ್ವಗಳು ಸ್ಪಷ್ಟವಾಗಿ ಕಾಣುತ್ತವೆ. ಆರೋಗ್ಯ, ಜೀವನಶೈಲಿ, ಮಿತಾಹಾರ, ಸದಾಚಾರ ಇತ್ಯಾದಿ ವಿಷಯಗಳನ್ನು ಅವರು ತ್ರಿಪದಿಗಳಲ್ಲಿ ಸುಲಭವಾಗಿ ಹೇಳಿರುವುದು ಅವರ ವೈಶಿಷ್ಟ್ಯ ಎಂದು ಹೇಳಿದರು.</p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಸೋಮಲಿಂಗ ಕುಂಬಾರ ಇದ್ದರು.</p>.<div><blockquote>ಜಾತಿ-ಮತ-ಪಂಥ ಬೇಧವಿಲ್ಲದೆ ಮಾನವೀಯ ಮೌಲ್ಯಗಳನ್ನು ಹೊಂದಿ ಬದುಕಬೇಕು ಎಲ್ಲರೂ ಸಮಾನರು ಎಂಬ ಸಮಾನತೆಯ ಸಂದೇಶವನ್ನು ಅವರು ಸಾರಿದ್ದಾರೆ. </blockquote><span class="attribution">ಡಾ.ಔದ್ರಾಮ್, ಹೆಚ್ಚುವರಿ ಜಿಲ್ಲಾಧಿಕಾರಿ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಜಯಪುರ: ಕವಿ ಸರ್ವಜ್ಞ ತ್ರಿಪದಿಗಳ ಮೂಲಕ ಸಮಾಜದ ಅಂಕು-ಡೊಂಕು, ಓರೆ-ಕೋರೆಗಳನ್ನು ತಿದ್ದಿದ ದಾರ್ಶನಿಕ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ್ ಹೇಳಿದರು.</p>.<p>ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ಜನರಾಡುವ ಭಾಷೆಯಲ್ಲಿ ಅತ್ಯಂತ ಸರಳವಾಗಿ ಹಾಗೂ ತೀಕ್ಷ್ಣವಾದ ಪದಗಳ ಮೂಲಕ ಸರ್ವಜ್ಞ ಕವಿ ಜೀವನದ ಆದರ್ಶವನ್ನು ಬೋಧಿಸಿದ್ದಾನೆ. ತ್ರಿಪದಿ ಸಾರವನ್ನು ಅರಿತು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.</p>.<p>ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಜೀವನದ ತತ್ವಗಳನ್ನು ತ್ರಿಪದಿಗಳಲ್ಲಿ ಕಾಣಬಹುದಾಗಿದೆ. ಆತ್ಮಶುದ್ಧಿ, ನೈತಿಕ ಬದುಕಿನ ಮಹತ್ವವನ್ನು ಪ್ರತಿಪಾದಿಸಲಾಗಿದೆ. ಹೊರಗಿನ ಆರ್ಭಟಕ್ಕಿಂತ ಒಳಮನಸ್ಸಿನ ಶುದ್ಧತೆಯೇ ಮುಖ್ಯ ಎಂಬ ಸಂದೇಶವನ್ನು ಅವರು ಸಾರಿದ್ದಾರೆ ಎಂದು ಹೇಳಿದರು.</p>.<p>ಮಾನವ ಜೀವನದಲ್ಲಿ ಪಾಪ-ಪುಣ್ಯಗಳನ್ನು ಸಮಾನವಾಗಿ ಅರ್ಥಮಾಡಿಕೊಂಡು, ಜೀವನದ ಏರುಪೇರುಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂಬ ತತ್ವವನ್ನು ಸರ್ವಜ್ಞ ತಿಳಿಸಿದ್ದಾರೆ ಎಂದರು.</p>.<p>ಜೀವನ ಸುಗಮವಾಗಬೇಕಾದರೆ ಸ್ವಾರ್ಥ, ಅಹಂಕಾರ ಹಾಗೂ ದುರಾಸೆಗಳನ್ನು ತೊರೆದು ಸತ್ಯ, ದಯೆ ಮತ್ತು ಸದ್ವಿಚಾರದ ಮಾರ್ಗದಲ್ಲಿ ನಡೆಯಬೇಕು ಎಂದು ಸರ್ವಜ್ಞ ಕವಿ ಹೇಳಿದ್ದಾರೆ ಎಂದು ತಿಳಿಸಿದರು.</p>.<p>ವ್ಯಕ್ತಿಯ ವರ್ತನೆ ಮಾತು ಮತ್ತು ಚಿಂತನೆಗಳಲ್ಲಿರುವ ಶುದ್ಧತೆಯೇ ಮಾನವ ಜೀವನದ ಸಾರ್ಥಕತೆ, ಇಂದಿನ ತಾಂತ್ರಿಕ ಯುಗದಲ್ಲಿ ಯುವಪೀಳಿಗೆ ಸರ್ವಜ್ಞನ ವಚನಗಳನ್ನು ಅರಿಯಬೇಕು. ಅಲ್ಲಿ ಅಭಿವ್ಯಕ್ತವಾಗುವ ಆರೋಗ್ಯಕರ ಜೀವನಶೈಲಿ, ಶ್ರಮದ ಮಹತ್ವ, ಸಮಯಪಾಲನೆ, ಮಾನವ ಸಂಬಂಧಗಳ ಮೌಲ್ಯ ಹಾಗೂ ಆತ್ಮ ಪರಿಶೀಲನೆ ಕುರಿತ ಅನೇಕ ಸಂದೇಶಗಳು ಅಡಕವಾಗಿವೆ ಎಂದು ಹೇಳಿದರು.</p>.<p>ಸಂತ ಕವಿ ಸರ್ವಜ್ಞ ಅವರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರ, ಅದನ್ನು ಎಲ್ಲರೂ ಸ್ಮರಿಸಬೇಕು ಎಂದು ಹೇಳಿದರು.</p>.<p>ಉಪನ್ಯಾಸ ನೀಡಿದ ಸಂಗಪ್ಪ ಎಸ್. ಕುಂಬಾರ, ಸರ್ವಜ್ಞ ಕವಿ ಸಮಾಜದಲ್ಲಿ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಚಿಂತನೆಗಳನ್ನು ಬಿತ್ತಿದ್ದಾರೆ ಎಂದರು.</p>.<p>ಸರ್ವಜ್ಞನ ವಚನಗಳಲ್ಲಿ ವ್ಯಕ್ತಿತ್ವದ ವಿಕಾಸ, ನೈತಿಕ ಶಿಸ್ತು ಹಾಗೂ ಸಮಾಜಮುಖಿ ಜೀವನದ ತತ್ವಗಳು ಸ್ಪಷ್ಟವಾಗಿ ಕಾಣುತ್ತವೆ. ಆರೋಗ್ಯ, ಜೀವನಶೈಲಿ, ಮಿತಾಹಾರ, ಸದಾಚಾರ ಇತ್ಯಾದಿ ವಿಷಯಗಳನ್ನು ಅವರು ತ್ರಿಪದಿಗಳಲ್ಲಿ ಸುಲಭವಾಗಿ ಹೇಳಿರುವುದು ಅವರ ವೈಶಿಷ್ಟ್ಯ ಎಂದು ಹೇಳಿದರು.</p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಸೋಮಲಿಂಗ ಕುಂಬಾರ ಇದ್ದರು.</p>.<div><blockquote>ಜಾತಿ-ಮತ-ಪಂಥ ಬೇಧವಿಲ್ಲದೆ ಮಾನವೀಯ ಮೌಲ್ಯಗಳನ್ನು ಹೊಂದಿ ಬದುಕಬೇಕು ಎಲ್ಲರೂ ಸಮಾನರು ಎಂಬ ಸಮಾನತೆಯ ಸಂದೇಶವನ್ನು ಅವರು ಸಾರಿದ್ದಾರೆ. </blockquote><span class="attribution">ಡಾ.ಔದ್ರಾಮ್, ಹೆಚ್ಚುವರಿ ಜಿಲ್ಲಾಧಿಕಾರಿ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>