‘ಅಗ್ರೋ ಕೇಂದ್ರಗಳಲ್ಲಿ ಹತ್ತಿ ಬೀಜ ಮತ್ತು ರಸಗೊಬ್ಬರಗಳನ್ನು ದುಬಾರಿ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಖರೀದಿಸಿದ ಬೀಜಗಳ ಬಿಲ್ ಕೇಳಿದರೆ ನಮ್ಮಲ್ಲಿ ಬೀಜವೇ ಇಲ್ಲ ಹೋಗಿ ಎಂದು ವಾಪಸ್ ಕಳಿಸುತ್ತಾರೆ. ಹೀಗಾಗಿ ಸರ್ಕಾರದ ಮಾರ್ಗಸೂಚಿ ದರದ ಅನ್ವಯ ಬೀಜಗಳ ಮಾರಾಟ ಮಾಡುವಂತೆ ಕೃಷಿ ಸಹಾಯಕ ನಿರ್ದೇಶಕರು ಕ್ರಮ ಜರುಗಿಸಬೇಕು’ ಎಂದು ಕಬ್ಬು ಬೆಳೆಗಾರರ ಸಂಘದ ಕಲಬುರ್ಗಿ ಜಿಲ್ಲಾ ಶಾಖೆಯ ಅಧ್ಯಕ್ಷ ರಮೇಶ ಹೂಗಾರ, ಸಿಂದಗಿ ತಾಲ್ಲೂಕು ಶಾಖೆಯ ಅಧ್ಯಕ್ಷ ಧರೆಪ್ಪಗೌಡ ಎಸ್. ಬಿರಾದಾರ ಚಿಕ್ಕಹಾವಳಗಿ ಒತ್ತಾಯಿಸಿದರು.