<p><strong>ತಾಂಬಾ:</strong> ಇಂಡಿ ಮತ್ತು ಸಿಂದಗಿ ಎರಡು ಮತಕ್ಷೇತ್ರಗಳ ವ್ಯಾಪ್ತಿಗೆ ಬರುವ ತಾಂಬಾ–ಅಥರ್ಗಾ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಈ ಮಾರ್ಗದಲ್ಲಿ ಸಂಚಾರ ದುರಸ್ತರವಾಗಿದೆ.</p>.<p>ತಾಂಬಾದಿಂದ ಅಥರ್ಗಾವು 13 ಕಿ.ಮೀ. ಅಂತರವಿದೆ. ಅಥರ್ಗಾ ಗ್ರಾಮವು ಇಂಡಿ ಮತಕ್ಷೇತ್ರ, ತಾಂಬಾ ಗ್ರಾಮವು ಸಿಂದಗಿ ಮತಕ್ಷೇತ್ರದಲ್ಲಿದೆ. ಈ 13 ಕಿ.ಮೀ ರಸ್ತೆಯಲ್ಲಿ 7 ಕಿ.ಮೀ ರಸ್ತೆಯನ್ನು ಇಂಡಿ ಮತಕ್ಷೇತ್ರಕ್ಕೆ ಇನ್ನುಳಿದ 6 ಕಿ.ಮೀ ಸಿಂದಗಿ ಮತಕ್ಷೇತ್ರಕ್ಕೆ ಬರುತ್ತಿದೆ. ಈ ರಸ್ತೆ ದುರಸ್ತಿ ಬಗ್ಗೆ ಶಾಸಕರು, ಅಧಿಕಾರಿಗಳು ಗಮನ ಹರಿಸುತ್ತಿಲ್ಲ.</p>.<p>ರಸ್ತೆಯು ತೆಗ್ಗು, ಗುಂಡಿಗಳು ಬಿದ್ದು ಹಾಳಾಗಿದೆ. ಅಧಿಕಾರಿಗಳಿಗೆ ಸಿಂದಗಿ ಮತಕ್ಷೇತ್ರದ ತಾಂಬಾ, ಶಿವಪುರ, ಇಂಡಿ ಮತಕ್ಷೇತ್ರದ ಬೆನಕನಹಳ್ಳಿ, ಅಥರ್ಗಾ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.</p>.<p>ದಿನನಿತ್ಯ ಸರ್ಕಾರಿ ವಾಹನ, ಖಾಸಗಿ ವಾಹನ, ಸೈಕಲ್, ಬೈಕ್, ರೈತರ ಎತ್ತಿನ ಗಾಡಿ, ಶಾಲಾ ವಾಹನಗಳ ಸುವ್ಯವಸ್ಥಿತ ಸಂಚಾರಕ್ಕೆ ಅಡಚಣೆಯಾಗಿದೆ. ಜನರು ಕಾಲುನಡಿಗೆಯಿಂದಲೂ ತಿರುಗಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.</p>.<p>ತಾಂಬಾ ಮತ್ತು ಅಥರ್ಗಾ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ ಇರುವುದರಿಂದ ಇಲ್ಲಿಗೆ ಬರುವ ತುಂಬು ಗರ್ಭಿಣಿಯರನ್ನು ವಾಹನಗಳಲ್ಲಿ ಕರೆದುಕೊಂಡು ಹೋಗಬೇಕಾದರೆ ಅವರ ಸ್ಥಿತಿ ದೇವರೇ ಬಲ್ಲ.</p>.<p>ತೆಗ್ಗು ಗುಂಡಿಗಳಿಂದ ಕೂಡಿದ ಹದಗೆಟ್ಟ ರಸ್ತೆಯಲ್ಲಿ ಸಂಚಾರಕ್ಕೆ ಸಂಚಕಾರ ಉಂಟಾಗಿದೆ. ಆದ್ದರಿಂದ ಅಧಿಕಾರಿಗಳು ಈ ರಸ್ತೆ ದುರಸ್ತಿ ಮಾಡಲು ಸಾರ್ವಜನಿಕರು ಹಲವಾರು ಭಾರಿ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ.</p>.<p>ಈ ರಸ್ತೆ 2 ಮತಕ್ಷೇತ್ರಗಳಲ್ಲಿ ಬರುವುದರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಶೀಘ್ರವಾಗಿ ಇಂಡಿ ಶಾಸಕರಾದ ಯಶವಂತರಾಯಗೌಡ ಪಾಟೀಲ ಮತ್ತು ಸಿಂದಗಿ ಶಾಸಕ ಅಶೋಕ ಮನಗೂಳಿ ಹಾಗೂ ಅಧಿಕಾರಿಗಳು ರಸ್ತೆ ದುರಸ್ತಿ ಮಾಡಿಸಿ, ಹದಗೆಟ್ಟ ರಸ್ತೆಗೆ ಡಾಂಬರೀಕರಣ ಮಾಡಿಸಬೇಕು ಎಂದು ತಾಂಬಾ, ಶಿವಪುರ, ಬೆನಕನಹಳ್ಳಿ, ಅಥರ್ಗಾ ಗ್ರಾಮಸ್ಥರು ಆಗ್ರಹಿಸಿದ್ದಾರೆ</p>.<div><blockquote>ತಕ್ಷಣವೇ ಅಧಿಕಾರಿಗಳ ಸಬೆ ನಡಿಸಿ ತಾಂಬಾ ಮತ್ತು ಅಥರ್ಗಾ ರಸ್ತೆಗಳ ಕುರಿತು ಮಾಹಿತಿ ಪಡೆದು ಸರ್ಕಾರದ ಗಮನಕ್ಕೆ ತಂದು ಶೀಘ್ರವೇ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು </blockquote><span class="attribution"> ಅಶೋಕ ಮನಗೂಳಿ, ಶಾಸಕ ಸಿಂದಗಿ </span></div>.<div><blockquote>ಶಿವಪುರದಲ್ಲಿ ಕೂಲಿಕಾರ್ಮಿಕರು ಹೆಚ್ಚಾಗಿದ್ದು ದಿನನಿತ್ಯ ತಾಂಬಾ ಗ್ರಾಮದಿಂದಲೆ ಪಟ್ಟಣಗಳಿಗೆ ಹೊಗಬೇಕಾದರೆ ಹದಗೆಟ್ಟ ರಸ್ತೆಯಲ್ಲಿ ಸಂಚಾರ ಅನಿವಾರ್ಯವಾಗಿದೆ </blockquote><span class="attribution">-ಮಲ್ಲೇಶಿ ಪೂಜಾರಿ ರೈತ ಶಿವಪುರ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಾಂಬಾ:</strong> ಇಂಡಿ ಮತ್ತು ಸಿಂದಗಿ ಎರಡು ಮತಕ್ಷೇತ್ರಗಳ ವ್ಯಾಪ್ತಿಗೆ ಬರುವ ತಾಂಬಾ–ಅಥರ್ಗಾ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಈ ಮಾರ್ಗದಲ್ಲಿ ಸಂಚಾರ ದುರಸ್ತರವಾಗಿದೆ.</p>.<p>ತಾಂಬಾದಿಂದ ಅಥರ್ಗಾವು 13 ಕಿ.ಮೀ. ಅಂತರವಿದೆ. ಅಥರ್ಗಾ ಗ್ರಾಮವು ಇಂಡಿ ಮತಕ್ಷೇತ್ರ, ತಾಂಬಾ ಗ್ರಾಮವು ಸಿಂದಗಿ ಮತಕ್ಷೇತ್ರದಲ್ಲಿದೆ. ಈ 13 ಕಿ.ಮೀ ರಸ್ತೆಯಲ್ಲಿ 7 ಕಿ.ಮೀ ರಸ್ತೆಯನ್ನು ಇಂಡಿ ಮತಕ್ಷೇತ್ರಕ್ಕೆ ಇನ್ನುಳಿದ 6 ಕಿ.ಮೀ ಸಿಂದಗಿ ಮತಕ್ಷೇತ್ರಕ್ಕೆ ಬರುತ್ತಿದೆ. ಈ ರಸ್ತೆ ದುರಸ್ತಿ ಬಗ್ಗೆ ಶಾಸಕರು, ಅಧಿಕಾರಿಗಳು ಗಮನ ಹರಿಸುತ್ತಿಲ್ಲ.</p>.<p>ರಸ್ತೆಯು ತೆಗ್ಗು, ಗುಂಡಿಗಳು ಬಿದ್ದು ಹಾಳಾಗಿದೆ. ಅಧಿಕಾರಿಗಳಿಗೆ ಸಿಂದಗಿ ಮತಕ್ಷೇತ್ರದ ತಾಂಬಾ, ಶಿವಪುರ, ಇಂಡಿ ಮತಕ್ಷೇತ್ರದ ಬೆನಕನಹಳ್ಳಿ, ಅಥರ್ಗಾ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.</p>.<p>ದಿನನಿತ್ಯ ಸರ್ಕಾರಿ ವಾಹನ, ಖಾಸಗಿ ವಾಹನ, ಸೈಕಲ್, ಬೈಕ್, ರೈತರ ಎತ್ತಿನ ಗಾಡಿ, ಶಾಲಾ ವಾಹನಗಳ ಸುವ್ಯವಸ್ಥಿತ ಸಂಚಾರಕ್ಕೆ ಅಡಚಣೆಯಾಗಿದೆ. ಜನರು ಕಾಲುನಡಿಗೆಯಿಂದಲೂ ತಿರುಗಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.</p>.<p>ತಾಂಬಾ ಮತ್ತು ಅಥರ್ಗಾ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ ಇರುವುದರಿಂದ ಇಲ್ಲಿಗೆ ಬರುವ ತುಂಬು ಗರ್ಭಿಣಿಯರನ್ನು ವಾಹನಗಳಲ್ಲಿ ಕರೆದುಕೊಂಡು ಹೋಗಬೇಕಾದರೆ ಅವರ ಸ್ಥಿತಿ ದೇವರೇ ಬಲ್ಲ.</p>.<p>ತೆಗ್ಗು ಗುಂಡಿಗಳಿಂದ ಕೂಡಿದ ಹದಗೆಟ್ಟ ರಸ್ತೆಯಲ್ಲಿ ಸಂಚಾರಕ್ಕೆ ಸಂಚಕಾರ ಉಂಟಾಗಿದೆ. ಆದ್ದರಿಂದ ಅಧಿಕಾರಿಗಳು ಈ ರಸ್ತೆ ದುರಸ್ತಿ ಮಾಡಲು ಸಾರ್ವಜನಿಕರು ಹಲವಾರು ಭಾರಿ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ.</p>.<p>ಈ ರಸ್ತೆ 2 ಮತಕ್ಷೇತ್ರಗಳಲ್ಲಿ ಬರುವುದರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಶೀಘ್ರವಾಗಿ ಇಂಡಿ ಶಾಸಕರಾದ ಯಶವಂತರಾಯಗೌಡ ಪಾಟೀಲ ಮತ್ತು ಸಿಂದಗಿ ಶಾಸಕ ಅಶೋಕ ಮನಗೂಳಿ ಹಾಗೂ ಅಧಿಕಾರಿಗಳು ರಸ್ತೆ ದುರಸ್ತಿ ಮಾಡಿಸಿ, ಹದಗೆಟ್ಟ ರಸ್ತೆಗೆ ಡಾಂಬರೀಕರಣ ಮಾಡಿಸಬೇಕು ಎಂದು ತಾಂಬಾ, ಶಿವಪುರ, ಬೆನಕನಹಳ್ಳಿ, ಅಥರ್ಗಾ ಗ್ರಾಮಸ್ಥರು ಆಗ್ರಹಿಸಿದ್ದಾರೆ</p>.<div><blockquote>ತಕ್ಷಣವೇ ಅಧಿಕಾರಿಗಳ ಸಬೆ ನಡಿಸಿ ತಾಂಬಾ ಮತ್ತು ಅಥರ್ಗಾ ರಸ್ತೆಗಳ ಕುರಿತು ಮಾಹಿತಿ ಪಡೆದು ಸರ್ಕಾರದ ಗಮನಕ್ಕೆ ತಂದು ಶೀಘ್ರವೇ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು </blockquote><span class="attribution"> ಅಶೋಕ ಮನಗೂಳಿ, ಶಾಸಕ ಸಿಂದಗಿ </span></div>.<div><blockquote>ಶಿವಪುರದಲ್ಲಿ ಕೂಲಿಕಾರ್ಮಿಕರು ಹೆಚ್ಚಾಗಿದ್ದು ದಿನನಿತ್ಯ ತಾಂಬಾ ಗ್ರಾಮದಿಂದಲೆ ಪಟ್ಟಣಗಳಿಗೆ ಹೊಗಬೇಕಾದರೆ ಹದಗೆಟ್ಟ ರಸ್ತೆಯಲ್ಲಿ ಸಂಚಾರ ಅನಿವಾರ್ಯವಾಗಿದೆ </blockquote><span class="attribution">-ಮಲ್ಲೇಶಿ ಪೂಜಾರಿ ರೈತ ಶಿವಪುರ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>