<p><strong>ವಿಜಯಪುರ: </strong>ಸ್ಕೀಮ್ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು,ಕನಿಷ್ಠ ವೇತನ ₹ 21 ಸಾವಿರ ನಿಗದಿಪಡಿಸಬೇಕು,ಕಾರ್ಮಿಕ ಕಾಯ್ದೆ ತಿದ್ದುಪಡಿ ಕೈಬಿಡಬೇಕು ಎಂದು ಆಗ್ರಹಿಸಿ ಸ್ಕೀಮ್ ವರ್ಕರ್ಸ್ ಫೆಡರೇಷನ್ ಆಫ್ ಇಂಡಿಯಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.</p>.<p>ಆಶಾ, ಅಂಗನವಾಡಿ, ಬಿಸಿಯೂಟ ಸೇರಿದಂತೆ ಎಲ್ಲ ಸ್ಕೀಮ್ ನೌಕರರನ್ನು ಕಾಯಂ ನೌಕರರೆಂದು ಪರಿಗಣಿಸಿ ಅವರಿಗೆ ವೇತನ, ರಜೆ, ಆರೋಗ್ಯ ಪರಿಹಾರ, ಮುಂಬಡ್ತಿ ಸೌಲಭ್ಯ ಸೇರಿದಂತೆ ಎಲ್ಲ ಶಾಸನಬದ್ಧ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.</p>.<p>ನಿವೃತ್ತಿ ಹೊಂದುವ ಸ್ಕೀಮ್ ನೌಕರರಿಗೆ ₹ 5 ಲಕ್ಷ ನಿವೃತ್ತಿ ಇಡಿಗಂಟು ನೀಡಬೇಕು,ಕಾಯಂ ಸರ್ಕಾರಿ ನೌಕರರ ಹಾಗೆಯೇ ಸ್ಕಿಮ್ ನೌಕರರು ಕೂಡಾ ವರ್ಷವಿಡೀ ದುಡಿಯುವ ಕಾರಣ ಗೌರವಧನ ಮತ್ತು ಸಹಾಯಧನದ ಹೆಸರಿನಲ್ಲಿ ಇಲ್ಲಿಯವರೆಗೆ ನಡೆದ ಎಲ್ಲ ತಾರತಮ್ಯ ಮತ್ತು ವಂಚನೆಗೆ ಈ ಕೂಡಲೇ ಕೊನೆ ಹಾಡಬೇಕು ಎಂದು ಒತ್ತಾಯಿಸಿದರು.</p>.<p>ಕೋವಿಡ್ 19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ಎಲ್ಲ ಸ್ಕೀಮ್ ನೌಕರರಿಗೆ ಅಗತ್ಯವಿರುವ ಪಿಪಿಇ ಕಿಟ್ಗಳನ್ನು ಒದಗಿಸಬೇಕು, ಈ ನೌಕರರು ಕೋವಿಡ್ ಸೋಂಕಿನಿಂದ ಮೃತಪಟ್ಟರೆ ಕೇಂದ್ರ ಸರ್ಕಾರವು ₹ 50 ಲಕ್ಷ ಆರೋಗ್ಯ ವಿಮೆಯನ್ನು ಖಾತ್ರಿ ಪಡಿಸಬೇಕು ಎಂದು ಒತ್ತಾಯಿಸಿದರು.</p>.<p>ಸೇವಾ ಅವಧಿಯಲ್ಲಿ ಮೃತರಾದ ಸ್ಕೀಮ್ ನೌಕರರ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ಖಚಿತಪಡಿಸಬೇಕು ಎಂದು ಆಗ್ರಹಿಸಿದರು.</p>.<p>ಹೊಸ ಶಿಕ್ಷಣ ನೀತಿ (ಎನ್ಇಪಿ)ಯಿಂದ ಅಂಗನವಾಡಿಗಳು ಕ್ರಮೇಣವಾಗಿ ಮುಚ್ಚಿ ಹೋಗಲಿವೆ ಎಂಬ ಆತಂಕ ಎಲ್ಲೆಡೆ ಮನೆ ಮಾಡುತ್ತಿದೆ. ಇದನ್ನು ಪರಿಹರಿಸುವ ಸಲುವಾಗಿ ಅಂಗನವಾಡಿಗಳನ್ನು ಬಲಪಡಿಸಿ, ನೌಕರರಿಗೆ ಸೂಕ್ತ ಮತ್ತು ಸಮರ್ಪಕ ತರಬೇತಿ ನೀಡುವ ಮೂಲಕ ಅವರನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಆಗ್ರಹಿಸಿದರು.</p>.<p>ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಎಚ್.ಟಿ., ಸ್ಕೀಮ್ ವರ್ಕರ್ಸ್ ಎಂಬ ಹೆಸರಿನಲ್ಲಿ ಬಿಡಿಗಾಸಿಗೆ ಮಹಿಳೆಯರನ್ನು ದುಡಿಸಿಕೊಳ್ಳಲಾಗುತ್ತಿದೆ. ಈ ನೌಕರರು ಅತ್ಯಂತ ಬಡವರು ಮತ್ತು ಸಮಾಜದ ಅತ್ಯಂತ ತಳಮಟ್ಟದ ಮಹಿಳೆಯರಾಗಿದ್ದಾರೆ ಎಂದರು.</p>.<p>ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಸುನೀಲ ಸಿದ್ರಾಮಶೆಟ್ಟಿ ಮಾತನಾಡಿ, ಲಾಕ್ಡೌನ್ ಸಂದರ್ಭದಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯದ ನೌಕರರಿಗೆ ಯಾವುದೇ ವೇತನ ಕಡಿತ ಮಾಡುವುದಿಲ್ಲ ಎಂದು ಪದೇಪದೇ ಆಶ್ವಾಸನೆ ಕೊಟ್ಟರೂ ಸಹ ಸ್ಕೀಮ್ ವರ್ಕರ್ಸ್ಗಳು ವೇತನದಿಂದ ವಂಚಿತರಾಗಿದ್ದೇವೆ ಎಂದು ದೂರಿದರು.</p>.<p>ಪ್ರತಿಭಟನೆಯಲ್ಲಿ ಭಾರತಿ ದೇವಕತೆ, ಲಕ್ಷ್ಮೀ ಲಕ್ಷಟ್ಟಿ, ನಿಂಗಮ್ಮ ಮಠ, ಮಹಾದೇವಿ ಖ್ಯಾಡಿ, ಶಶಿಕಲಾ ಮ್ಯಾಗೆರಿ, ಸಾವಿತ್ರಿ, ದಾನಮ್ಮ ಕೊಟ್ಯಾಳ, ಜಯಶ್ರೀ ಕಂಬಾರ, ವೆಂಕಮ್ಮ ಗುಜ್ಜಾಲ, ಪಾರ್ವತಿ ಕನ್ನೂರ, ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ: </strong>ಸ್ಕೀಮ್ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು,ಕನಿಷ್ಠ ವೇತನ ₹ 21 ಸಾವಿರ ನಿಗದಿಪಡಿಸಬೇಕು,ಕಾರ್ಮಿಕ ಕಾಯ್ದೆ ತಿದ್ದುಪಡಿ ಕೈಬಿಡಬೇಕು ಎಂದು ಆಗ್ರಹಿಸಿ ಸ್ಕೀಮ್ ವರ್ಕರ್ಸ್ ಫೆಡರೇಷನ್ ಆಫ್ ಇಂಡಿಯಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.</p>.<p>ಆಶಾ, ಅಂಗನವಾಡಿ, ಬಿಸಿಯೂಟ ಸೇರಿದಂತೆ ಎಲ್ಲ ಸ್ಕೀಮ್ ನೌಕರರನ್ನು ಕಾಯಂ ನೌಕರರೆಂದು ಪರಿಗಣಿಸಿ ಅವರಿಗೆ ವೇತನ, ರಜೆ, ಆರೋಗ್ಯ ಪರಿಹಾರ, ಮುಂಬಡ್ತಿ ಸೌಲಭ್ಯ ಸೇರಿದಂತೆ ಎಲ್ಲ ಶಾಸನಬದ್ಧ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.</p>.<p>ನಿವೃತ್ತಿ ಹೊಂದುವ ಸ್ಕೀಮ್ ನೌಕರರಿಗೆ ₹ 5 ಲಕ್ಷ ನಿವೃತ್ತಿ ಇಡಿಗಂಟು ನೀಡಬೇಕು,ಕಾಯಂ ಸರ್ಕಾರಿ ನೌಕರರ ಹಾಗೆಯೇ ಸ್ಕಿಮ್ ನೌಕರರು ಕೂಡಾ ವರ್ಷವಿಡೀ ದುಡಿಯುವ ಕಾರಣ ಗೌರವಧನ ಮತ್ತು ಸಹಾಯಧನದ ಹೆಸರಿನಲ್ಲಿ ಇಲ್ಲಿಯವರೆಗೆ ನಡೆದ ಎಲ್ಲ ತಾರತಮ್ಯ ಮತ್ತು ವಂಚನೆಗೆ ಈ ಕೂಡಲೇ ಕೊನೆ ಹಾಡಬೇಕು ಎಂದು ಒತ್ತಾಯಿಸಿದರು.</p>.<p>ಕೋವಿಡ್ 19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ಎಲ್ಲ ಸ್ಕೀಮ್ ನೌಕರರಿಗೆ ಅಗತ್ಯವಿರುವ ಪಿಪಿಇ ಕಿಟ್ಗಳನ್ನು ಒದಗಿಸಬೇಕು, ಈ ನೌಕರರು ಕೋವಿಡ್ ಸೋಂಕಿನಿಂದ ಮೃತಪಟ್ಟರೆ ಕೇಂದ್ರ ಸರ್ಕಾರವು ₹ 50 ಲಕ್ಷ ಆರೋಗ್ಯ ವಿಮೆಯನ್ನು ಖಾತ್ರಿ ಪಡಿಸಬೇಕು ಎಂದು ಒತ್ತಾಯಿಸಿದರು.</p>.<p>ಸೇವಾ ಅವಧಿಯಲ್ಲಿ ಮೃತರಾದ ಸ್ಕೀಮ್ ನೌಕರರ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ಖಚಿತಪಡಿಸಬೇಕು ಎಂದು ಆಗ್ರಹಿಸಿದರು.</p>.<p>ಹೊಸ ಶಿಕ್ಷಣ ನೀತಿ (ಎನ್ಇಪಿ)ಯಿಂದ ಅಂಗನವಾಡಿಗಳು ಕ್ರಮೇಣವಾಗಿ ಮುಚ್ಚಿ ಹೋಗಲಿವೆ ಎಂಬ ಆತಂಕ ಎಲ್ಲೆಡೆ ಮನೆ ಮಾಡುತ್ತಿದೆ. ಇದನ್ನು ಪರಿಹರಿಸುವ ಸಲುವಾಗಿ ಅಂಗನವಾಡಿಗಳನ್ನು ಬಲಪಡಿಸಿ, ನೌಕರರಿಗೆ ಸೂಕ್ತ ಮತ್ತು ಸಮರ್ಪಕ ತರಬೇತಿ ನೀಡುವ ಮೂಲಕ ಅವರನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಆಗ್ರಹಿಸಿದರು.</p>.<p>ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಎಚ್.ಟಿ., ಸ್ಕೀಮ್ ವರ್ಕರ್ಸ್ ಎಂಬ ಹೆಸರಿನಲ್ಲಿ ಬಿಡಿಗಾಸಿಗೆ ಮಹಿಳೆಯರನ್ನು ದುಡಿಸಿಕೊಳ್ಳಲಾಗುತ್ತಿದೆ. ಈ ನೌಕರರು ಅತ್ಯಂತ ಬಡವರು ಮತ್ತು ಸಮಾಜದ ಅತ್ಯಂತ ತಳಮಟ್ಟದ ಮಹಿಳೆಯರಾಗಿದ್ದಾರೆ ಎಂದರು.</p>.<p>ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಸುನೀಲ ಸಿದ್ರಾಮಶೆಟ್ಟಿ ಮಾತನಾಡಿ, ಲಾಕ್ಡೌನ್ ಸಂದರ್ಭದಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯದ ನೌಕರರಿಗೆ ಯಾವುದೇ ವೇತನ ಕಡಿತ ಮಾಡುವುದಿಲ್ಲ ಎಂದು ಪದೇಪದೇ ಆಶ್ವಾಸನೆ ಕೊಟ್ಟರೂ ಸಹ ಸ್ಕೀಮ್ ವರ್ಕರ್ಸ್ಗಳು ವೇತನದಿಂದ ವಂಚಿತರಾಗಿದ್ದೇವೆ ಎಂದು ದೂರಿದರು.</p>.<p>ಪ್ರತಿಭಟನೆಯಲ್ಲಿ ಭಾರತಿ ದೇವಕತೆ, ಲಕ್ಷ್ಮೀ ಲಕ್ಷಟ್ಟಿ, ನಿಂಗಮ್ಮ ಮಠ, ಮಹಾದೇವಿ ಖ್ಯಾಡಿ, ಶಶಿಕಲಾ ಮ್ಯಾಗೆರಿ, ಸಾವಿತ್ರಿ, ದಾನಮ್ಮ ಕೊಟ್ಯಾಳ, ಜಯಶ್ರೀ ಕಂಬಾರ, ವೆಂಕಮ್ಮ ಗುಜ್ಜಾಲ, ಪಾರ್ವತಿ ಕನ್ನೂರ, ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>