ವಿಜಯಪುರ: ಎರಡು ವಾರಗಳಿಂದ ಮರೆಯಾಗಿದ್ದ ಮಳೆ ಗುರುವಾರ ಸಂಜೆ ಸುಮಾರು ಅರ್ಧ ತಾಸು ವಿಜಯಪುರ ನಗರ ಸೇರಿದಂತೆ ತಾಳಿಕೋಟೆ ಪಟ್ಟಣದಲ್ಲಿ ಧಾರಾಕಾರವಾಗಿ ಸುರಿಯಿತು.
ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ಬೆಳೆ ಬಾಡತೊಡಗಿತ್ತು. ಇದರಿಂದ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಬಿಸಿಲಿನ ತಾಪ ಬೇಸಿಗೆಯನ್ನು ನೆನಪಿಸುವಂತಿತ್ತು. ಇದೀಗ ಮಳೆಯಾಗಿರುವುದರಿಂದ ರೈತರ ಆತಂಕ ದೂರವಾಗಿದೆ. ವಾತಾವರಣವೂ ತಂಪಾಗಿದೆ.
ಸುಮಾರು ಅರ್ಧ ತಾಸು ಮಳೆಯಾದ ಪರಿಣಾಮ ಚರಂಡಿಗಳು ಉಕ್ಕಿ ಮಳೆ ನೀರು ರಸ್ತೆ ಮೇಲೆ ಹರಿಯಿತು. ತಗ್ಗು ಪ್ರದೇಶ, ಹೊಲಗಳಲ್ಲಿ ನೀರು ನಿಂತಿದ್ದ ದೃಶ್ಯ ಕಂಡುಬಂದಿತು.