<p><strong>ಸಿಂದಗಿ (ವಿಜಯಪುರ ಜಿಲ್ಲೆ):</strong> ಬಳಗಾನೂರ ಗ್ರಾಮದ ಕೇದಾರಲಿಂಗ ಕುಂಬಾರ 55 ಕೆಜಿ ತೂಕದ ಗೋಧಿ ಮೂಟೆ ತಲೆಯ ಮೇಲೆ ಹೊತ್ತುಕೊಂಡ ದೂರದ ಉತ್ತರಪ್ರದೇಶದ ಅಯೋಧ್ಯೆ ರಾಮಮಂದಿರವರೆಗೆ ಕಾಲ್ನಡಿಗೆ ಶನಿವಾರ ಪ್ರಾರಂಭಿಸಿದರು.</p>.<p>ಗ್ರಾಮಸ್ಥರು ಯುವಕನಿಗೆ ಗೌರವಿಸಿ ವಾದ್ಯ ವೈಭವದೊಂದಿಗೆ ರಾಮನಹಳ್ಳಿ ವರೆಗೆ ಬೀಳ್ಕೊಟ್ಟರು. ಬಳಗಾನೂರ ಗ್ರಾಮದ ಸಮಸ್ತ ನಾಗರಿಕರಿಗೆ ಒಳ್ಳೆಯದಾಗಲಿ, ಗೋಹತ್ಯೆ ನಿಷೇಧ ಕಟ್ಟುನಿಟ್ಟಾಗಿ ಜಾರಿಗೆ ಬರಬೇಕು ಎಂಬ ಸಂದೇಶದೊಂದಿಗೆ ಕಾಲ್ನಡಿಗೆ ಪ್ರಾರಂಭಿಸಿದ್ದಾಗಿ ತಿಳಿಸಿದ್ದಾರೆ.</p>.<p>ಪ್ರತಿದಿನ 40-50 ಕಿ.ಮೀ ವರೆಗೆ ಪಾದಯಾತ್ರೆ ಹೊರಟು ಅಲ್ಲಿ ವಾಸ್ತವ್ಯ ಮಾಡಿ ಮತ್ತೆ ಕಾಲ್ನಡಿಗೆ ಹೊರಡುವರು. ಇವರ ಜೊತೆ ನೂರ ನದಾಫ್ ಎಂಬ ಮುಸ್ಲಿಂ ವ್ಯಕ್ತಿ ಕರ್ನಾಟಕ ಗಡಿ ದಾಟುವವರೆಗೆ ಪಾದಯಾತ್ರೆ ಕೈಗೊಂಡಿದ್ದಾರೆ.</p>.<p>ವಿವೇಕ ಕುಂಬಾರ ಎಂಬ ಯುವಕ ಬೈಕ್ ತೆಗೆದುಕೊಂಡು ಪಾದಯಾತ್ರಿಗೆ ನೀರು, ಊಟದ ವ್ಯವಸ್ಥೆ ಮಾಡುವದಕ್ಕಾಗಿ ಹೊರಟಿದ್ದಾರೆ.</p>.<p>ಕೇದಾರಲಿಂಗ ಕುಂಬಾರ ಈ ಮೊದಲು ಆಂಧ್ರ ಪ್ರದೇಶದ ಶ್ರೀಶೈಲಂ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಇದೇ ರೀತಿ ಮೂಟೆ ಹೊತ್ತು 12 ದಿನಗಳ ಕಾಲ್ನಡಿಗೆ ಎರಡು ಬಾರಿ, ಹುಲಜಂತಿ ಸುಕ್ಷೇತ್ರಕ್ಕೆ ಪಾದಯಾತ್ರೆ ಮಾಡಿದ್ದಾರೆ.</p>.<p>‘ಪಾದಯಾತ್ರೆ ಆರಂಭಿಸುವ ಮುನ್ನ ಹಲವು ದಿನಗಳು ಗೋಧಿ ಮೂಟೆ ಹೊತ್ತು ನಿತ್ಯ ಸಂಜೆ ಬಳಗಾನೂರದಿಂದ ಕೋರಳ್ಳಿ ಗ್ರಾಮದವರೆಗೆ ನಡೆದು ರೂಢಿ ಮಾಡಿಕೊಂಡಿದ್ದಾರೆ’ ಎಂದು ಗ್ರಾಮದ ಅನಿಲ್ ಸುರಗಿಹಳ್ಳಿ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂದಗಿ (ವಿಜಯಪುರ ಜಿಲ್ಲೆ):</strong> ಬಳಗಾನೂರ ಗ್ರಾಮದ ಕೇದಾರಲಿಂಗ ಕುಂಬಾರ 55 ಕೆಜಿ ತೂಕದ ಗೋಧಿ ಮೂಟೆ ತಲೆಯ ಮೇಲೆ ಹೊತ್ತುಕೊಂಡ ದೂರದ ಉತ್ತರಪ್ರದೇಶದ ಅಯೋಧ್ಯೆ ರಾಮಮಂದಿರವರೆಗೆ ಕಾಲ್ನಡಿಗೆ ಶನಿವಾರ ಪ್ರಾರಂಭಿಸಿದರು.</p>.<p>ಗ್ರಾಮಸ್ಥರು ಯುವಕನಿಗೆ ಗೌರವಿಸಿ ವಾದ್ಯ ವೈಭವದೊಂದಿಗೆ ರಾಮನಹಳ್ಳಿ ವರೆಗೆ ಬೀಳ್ಕೊಟ್ಟರು. ಬಳಗಾನೂರ ಗ್ರಾಮದ ಸಮಸ್ತ ನಾಗರಿಕರಿಗೆ ಒಳ್ಳೆಯದಾಗಲಿ, ಗೋಹತ್ಯೆ ನಿಷೇಧ ಕಟ್ಟುನಿಟ್ಟಾಗಿ ಜಾರಿಗೆ ಬರಬೇಕು ಎಂಬ ಸಂದೇಶದೊಂದಿಗೆ ಕಾಲ್ನಡಿಗೆ ಪ್ರಾರಂಭಿಸಿದ್ದಾಗಿ ತಿಳಿಸಿದ್ದಾರೆ.</p>.<p>ಪ್ರತಿದಿನ 40-50 ಕಿ.ಮೀ ವರೆಗೆ ಪಾದಯಾತ್ರೆ ಹೊರಟು ಅಲ್ಲಿ ವಾಸ್ತವ್ಯ ಮಾಡಿ ಮತ್ತೆ ಕಾಲ್ನಡಿಗೆ ಹೊರಡುವರು. ಇವರ ಜೊತೆ ನೂರ ನದಾಫ್ ಎಂಬ ಮುಸ್ಲಿಂ ವ್ಯಕ್ತಿ ಕರ್ನಾಟಕ ಗಡಿ ದಾಟುವವರೆಗೆ ಪಾದಯಾತ್ರೆ ಕೈಗೊಂಡಿದ್ದಾರೆ.</p>.<p>ವಿವೇಕ ಕುಂಬಾರ ಎಂಬ ಯುವಕ ಬೈಕ್ ತೆಗೆದುಕೊಂಡು ಪಾದಯಾತ್ರಿಗೆ ನೀರು, ಊಟದ ವ್ಯವಸ್ಥೆ ಮಾಡುವದಕ್ಕಾಗಿ ಹೊರಟಿದ್ದಾರೆ.</p>.<p>ಕೇದಾರಲಿಂಗ ಕುಂಬಾರ ಈ ಮೊದಲು ಆಂಧ್ರ ಪ್ರದೇಶದ ಶ್ರೀಶೈಲಂ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಇದೇ ರೀತಿ ಮೂಟೆ ಹೊತ್ತು 12 ದಿನಗಳ ಕಾಲ್ನಡಿಗೆ ಎರಡು ಬಾರಿ, ಹುಲಜಂತಿ ಸುಕ್ಷೇತ್ರಕ್ಕೆ ಪಾದಯಾತ್ರೆ ಮಾಡಿದ್ದಾರೆ.</p>.<p>‘ಪಾದಯಾತ್ರೆ ಆರಂಭಿಸುವ ಮುನ್ನ ಹಲವು ದಿನಗಳು ಗೋಧಿ ಮೂಟೆ ಹೊತ್ತು ನಿತ್ಯ ಸಂಜೆ ಬಳಗಾನೂರದಿಂದ ಕೋರಳ್ಳಿ ಗ್ರಾಮದವರೆಗೆ ನಡೆದು ರೂಢಿ ಮಾಡಿಕೊಂಡಿದ್ದಾರೆ’ ಎಂದು ಗ್ರಾಮದ ಅನಿಲ್ ಸುರಗಿಹಳ್ಳಿ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>