ಪಟ್ಟಣ ಪಂಚಾಯಿತಿಯ ಸಿಬ್ಬಂದಿ ಆದ ಮಲ್ಲಪ್ಪ ಬ್ಯಾಲ್ಯಾಳ, ಗೌಡಪ್ಪ ಕಾರಜೋಳ, ಸಿದ್ದಪ್ಪ ಮುರನಾಳ ಹಾಗೂ ಶ್ರೀಶೈಲ ಬ್ಯಾಲ್ಯಾಳ ಉತಾರ ನೀಡುವಲ್ಲಿ ಅಕ್ರಮ ಎಸಗುತ್ತಿದ್ದಾರೆ. ತಮ್ಮ ಸಂಬಂಧಿಕರು ಹಾಗೂ ಬೇಕಾದವರಿಗೆ ಮಾತ್ರ ಉತಾರ ನೀಡುತ್ತಿದ್ದಾರೆ. ಬಡವರ ನಿವೇಶನಗಳಿಗೆ ತಾವೇ ತಕರಾರು ಅರ್ಜಿಗಳನ್ನಿಟ್ಟು ನಂತರ ಹಣ ಪಡೆದು ತಕರಾರು ಹಿಂಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.