<p>ವಿದ್ಯಾರ್ಥಿಗಳು ಉಣಬಡಿಸಿದ ಸಾಂಸ್ಕೃತಿಕ ಸಿರಿಯನ್ನು ಆ ಗ್ರಾಮಸ್ಥರು ಮರೆಯಲು ಸಾಧ್ಯವೇ ಇಲ್ಲ. ವಿವಿಧ ವೇಷ ಧರಿಸಿ ತಾವೂ ಕುಣಿದು ಪ್ರೇಕ್ಷಕರನ್ನೂ ಕುಣಿಸಿದ ಆ ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಸ್ಮರಿಸುತ್ತ ಗ್ರಾಮಸ್ಥರೆಲ್ಲ ಚಪ್ಪಾಳೆ ತಟ್ಟಿದರು.<br /> <br /> ಸಿಂದಗಿ ಪಟ್ಟಣದ ಪದ್ಮರಾಜ ಬಿ.ಇಡಿ ಕಾಲೇಜಿನಿಂದ ಗಣಿಹಾರ ಗ್ರಾಮದಲ್ಲಿ ನಡೆದ ಪೌರತ್ವ ತರಬೇತಿ ಶಿಬಿರ ಇಂಥದ್ದೊಂದು ಕಾರ್ಯಕ್ರಮಕ್ಕೆ ವೇದಿಕೆಯಾಯಿತು. ಶಿಬಿರದ ಉದ್ದೇಶ ವ್ಯಕ್ತಿತ್ವ ವಿಕಸನ. ಶಿಬಿರದಲ್ಲಿ ಪಾಲ್ಗೊಂಡಿದ್ದ 80 ವಿದ್ಯಾರ್ಥಿಗಳು ಆ ಉದ್ದೇಶವನ್ನು ನಿಜಕ್ಕೂ ಯಶಸ್ವಿಗೊಳಿಸಿದರು.<br /> <br /> <strong>ಹಗಲು ಹೊತ್ತು ಚಿಂತನ-ಮಂಥನ. ಸಂಜೆ ಅದ್ಭುತ ಮನರಂಜನಾ ಕಾರ್ಯಕ್ರಮ.</strong><br /> ಶಿಕ್ಷಕರ ಮಾರ್ಗದರ್ಶನವಿಲ್ಲ; ಪೂರ್ವ ಸಿದ್ಧತೆಯೂ ಇಲ್ಲ. ತಮ್ಮಷ್ಟಕ್ಕೆ ತಾವೇ ವೇಷ-ಭೂಷಣಗಳನ್ನು ಜೋಡಿಸಿಕೊಂಡು ವಿದ್ಯಾರ್ಥಿ-ವಿದ್ಯಾರ್ಥಿನಿಯರ ಜೊತೆಗೂಡಿ ಆಧುನಿಕತೆಯ ಸೋಂಕಿಲ್ಲದ, ಕೀಳು ಮಾತುಗಳಿಲ್ಲದ, ಪಕ್ಕಾ ಜನಪದ ಸಂಸ್ಕೃತಿಯನ್ನೊಳಗೊಂಡ ಅಪರೂಪದ ಕಲೆಯನ್ನು ಪ್ರದರ್ಶಿಸಿ ಇಡೀ ಗ್ರಾಮಸ್ಥರಿಂದ ಶಹಬ್ಬಾಸಗಿರಿ ಪಡೆದುಕೊಂಡರು.<br /> <br /> ಡಾ.ಚಂದ್ರಶೇಖರ ಕಂಬಾರ, ಕಿತ್ತೂರು ಚೆನ್ನಮ್ಮ, ಸಿ.ವಿ. ರಾಮನ್, ಧ್ಯಾನಚಂದ ಹೀಗೆ ತಂಡಗಳನ್ನಾಗಿ ಮಾಡಿಕೊಂಡು ನಾಟಕ, ಗಾಯನ, ನೃತ್ಯಗಳ ಸ್ಪರ್ಧಾ ಕಾರ್ಯಕ್ರಮ ನಡೆಸುವ ಮೂಲಕ ಒಬ್ಬರಿಗಿಂತ ಇನ್ನೊಬ್ಬರು ವಿಶಿಷ್ಟ ಅಭಿನಯ ಪ್ರದರ್ಶಿಸಿದರು.<br /> <br /> `ವಧು ಅನ್ವೇಷಣೆ~ಯ ಕಿರು ನಾಟಕದಲ್ಲಿ ವಿದ್ಯಾರ್ಥಿನಿ ಲಕ್ಷ್ಮಿ ಅರುಣಿ, ವಿದ್ಯಾರ್ಥಿ ಶರಣು ತೇಲಿ ಅಭಿನಯ ಅಮೋಘವಾಗಿತ್ತು. ಲಕ್ಷ್ಮಿ ಅರುಣಿ ಮತ್ತು ಕವಿತಾ ಈಳಗೇರರ ನೃತ್ಯವಂತೂ ಸೂಪರ್. ಸತೀಶ ಸ್ಥಾವರಮಠ, ಕಾಸೀಂ ದೊಡಮನಿಯನ್ನೊಳಗೊಂಡ `ಹೈ ಪಾಯ್ ಸಲೂನ್~ ನಾಟಕ ಪ್ರಸಂಗ ಇಡೀ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ಅರ್ಚನಾ ಕುಲಕರ್ಣಿ ಸಂಗಡಿಗರ `ವಂದೇ ಮಾತರಂ~ ಗೀತೆ ಮೈ ರೋಮಾಂಚನಗೊಳಿಸಿತು.<br /> <br /> ಭವ್ಯಾ ಡಾಂಗಿ, ಜ್ಯೋತಿ ನಾಗರಾಜ ಮುರಗೋಡ ಸಂಗಡಿಗರು ಇಲಕಲ್ ಸೀರೆ, ಗುಳೇದಗುಡ್ಡ ಕುಪ್ಪಸ ತೊಟ್ಟು ಮಗುವಿನ ನಾಮಕರಣ ಸಾಂಪ್ರದಾಯಿಕ ಚಟುವಟಿಕೆಗಳ ಜೊತೆಗೆ ಸುಂದರ ಗೀತೆ ಹಾಡಿದರು. ಆನಂದ ಕೆಳಗಿನಮನಿ ಸಂಗಡಿಗರ ಸಾಂಪ್ರದಾಯಿಕ ಶೈಲಿ ಡೊಳ್ಳಿನ ಪದ ಇಡೀ ಹಳ್ಳಿಗರನ್ನು ಬೆರಗುಗೊಳಿಸಿತು. <br /> <br /> ಕವಿತಾ ತಮ್ಮಣ್ಣ ಈಳಗೇರ ನೇತೃತ್ವದ `ಏನು ಕೊಡ ಏನ ಕೊಡವ...~ ಜಾನಪದ ನೃತ್ಯದ ಸಂದರ್ಭದಲ್ಲಿ ಪ್ರೇಕ್ಷಕರು- ಶಿಕ್ಷಕರು ಸಹ ಅತ್ಯುತ್ಸಾಹದಿಂದ ಹೆಜ್ಜೆ ಹಾಕಿದರು.<br /> <br /> `ವಿಧವಾ ಮರು ವಿವಾಹ~ಕ್ಕೆ ಬೆಂಬಲಿಸಿದ ಕಿರು ನಾಟಕ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ವಿದ್ಯಾರ್ಥಿ ಮಹೇಶ ಬೆಲ್ಲದ, ಸಿದ್ದಮ್ಮ ನಾಯ್ಕೋಡಿ ಅಭಿನಯ ಹೃದಯಸ್ಪರ್ಶಿಯಾಗಿತ್ತು. ಮಾಸ್ಟರ್ ರವಿ ಗೋಲಾ, ಮೇಡಂ ಸವಿತಾ ಹಾಬಾಳ, ಜಯಶ್ರೀ ನಂದಿಕೋಲ ಅವರ ಪ್ರೋತ್ಸಾಹ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿದ್ಯಾರ್ಥಿಗಳು ಉಣಬಡಿಸಿದ ಸಾಂಸ್ಕೃತಿಕ ಸಿರಿಯನ್ನು ಆ ಗ್ರಾಮಸ್ಥರು ಮರೆಯಲು ಸಾಧ್ಯವೇ ಇಲ್ಲ. ವಿವಿಧ ವೇಷ ಧರಿಸಿ ತಾವೂ ಕುಣಿದು ಪ್ರೇಕ್ಷಕರನ್ನೂ ಕುಣಿಸಿದ ಆ ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಸ್ಮರಿಸುತ್ತ ಗ್ರಾಮಸ್ಥರೆಲ್ಲ ಚಪ್ಪಾಳೆ ತಟ್ಟಿದರು.<br /> <br /> ಸಿಂದಗಿ ಪಟ್ಟಣದ ಪದ್ಮರಾಜ ಬಿ.ಇಡಿ ಕಾಲೇಜಿನಿಂದ ಗಣಿಹಾರ ಗ್ರಾಮದಲ್ಲಿ ನಡೆದ ಪೌರತ್ವ ತರಬೇತಿ ಶಿಬಿರ ಇಂಥದ್ದೊಂದು ಕಾರ್ಯಕ್ರಮಕ್ಕೆ ವೇದಿಕೆಯಾಯಿತು. ಶಿಬಿರದ ಉದ್ದೇಶ ವ್ಯಕ್ತಿತ್ವ ವಿಕಸನ. ಶಿಬಿರದಲ್ಲಿ ಪಾಲ್ಗೊಂಡಿದ್ದ 80 ವಿದ್ಯಾರ್ಥಿಗಳು ಆ ಉದ್ದೇಶವನ್ನು ನಿಜಕ್ಕೂ ಯಶಸ್ವಿಗೊಳಿಸಿದರು.<br /> <br /> <strong>ಹಗಲು ಹೊತ್ತು ಚಿಂತನ-ಮಂಥನ. ಸಂಜೆ ಅದ್ಭುತ ಮನರಂಜನಾ ಕಾರ್ಯಕ್ರಮ.</strong><br /> ಶಿಕ್ಷಕರ ಮಾರ್ಗದರ್ಶನವಿಲ್ಲ; ಪೂರ್ವ ಸಿದ್ಧತೆಯೂ ಇಲ್ಲ. ತಮ್ಮಷ್ಟಕ್ಕೆ ತಾವೇ ವೇಷ-ಭೂಷಣಗಳನ್ನು ಜೋಡಿಸಿಕೊಂಡು ವಿದ್ಯಾರ್ಥಿ-ವಿದ್ಯಾರ್ಥಿನಿಯರ ಜೊತೆಗೂಡಿ ಆಧುನಿಕತೆಯ ಸೋಂಕಿಲ್ಲದ, ಕೀಳು ಮಾತುಗಳಿಲ್ಲದ, ಪಕ್ಕಾ ಜನಪದ ಸಂಸ್ಕೃತಿಯನ್ನೊಳಗೊಂಡ ಅಪರೂಪದ ಕಲೆಯನ್ನು ಪ್ರದರ್ಶಿಸಿ ಇಡೀ ಗ್ರಾಮಸ್ಥರಿಂದ ಶಹಬ್ಬಾಸಗಿರಿ ಪಡೆದುಕೊಂಡರು.<br /> <br /> ಡಾ.ಚಂದ್ರಶೇಖರ ಕಂಬಾರ, ಕಿತ್ತೂರು ಚೆನ್ನಮ್ಮ, ಸಿ.ವಿ. ರಾಮನ್, ಧ್ಯಾನಚಂದ ಹೀಗೆ ತಂಡಗಳನ್ನಾಗಿ ಮಾಡಿಕೊಂಡು ನಾಟಕ, ಗಾಯನ, ನೃತ್ಯಗಳ ಸ್ಪರ್ಧಾ ಕಾರ್ಯಕ್ರಮ ನಡೆಸುವ ಮೂಲಕ ಒಬ್ಬರಿಗಿಂತ ಇನ್ನೊಬ್ಬರು ವಿಶಿಷ್ಟ ಅಭಿನಯ ಪ್ರದರ್ಶಿಸಿದರು.<br /> <br /> `ವಧು ಅನ್ವೇಷಣೆ~ಯ ಕಿರು ನಾಟಕದಲ್ಲಿ ವಿದ್ಯಾರ್ಥಿನಿ ಲಕ್ಷ್ಮಿ ಅರುಣಿ, ವಿದ್ಯಾರ್ಥಿ ಶರಣು ತೇಲಿ ಅಭಿನಯ ಅಮೋಘವಾಗಿತ್ತು. ಲಕ್ಷ್ಮಿ ಅರುಣಿ ಮತ್ತು ಕವಿತಾ ಈಳಗೇರರ ನೃತ್ಯವಂತೂ ಸೂಪರ್. ಸತೀಶ ಸ್ಥಾವರಮಠ, ಕಾಸೀಂ ದೊಡಮನಿಯನ್ನೊಳಗೊಂಡ `ಹೈ ಪಾಯ್ ಸಲೂನ್~ ನಾಟಕ ಪ್ರಸಂಗ ಇಡೀ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ಅರ್ಚನಾ ಕುಲಕರ್ಣಿ ಸಂಗಡಿಗರ `ವಂದೇ ಮಾತರಂ~ ಗೀತೆ ಮೈ ರೋಮಾಂಚನಗೊಳಿಸಿತು.<br /> <br /> ಭವ್ಯಾ ಡಾಂಗಿ, ಜ್ಯೋತಿ ನಾಗರಾಜ ಮುರಗೋಡ ಸಂಗಡಿಗರು ಇಲಕಲ್ ಸೀರೆ, ಗುಳೇದಗುಡ್ಡ ಕುಪ್ಪಸ ತೊಟ್ಟು ಮಗುವಿನ ನಾಮಕರಣ ಸಾಂಪ್ರದಾಯಿಕ ಚಟುವಟಿಕೆಗಳ ಜೊತೆಗೆ ಸುಂದರ ಗೀತೆ ಹಾಡಿದರು. ಆನಂದ ಕೆಳಗಿನಮನಿ ಸಂಗಡಿಗರ ಸಾಂಪ್ರದಾಯಿಕ ಶೈಲಿ ಡೊಳ್ಳಿನ ಪದ ಇಡೀ ಹಳ್ಳಿಗರನ್ನು ಬೆರಗುಗೊಳಿಸಿತು. <br /> <br /> ಕವಿತಾ ತಮ್ಮಣ್ಣ ಈಳಗೇರ ನೇತೃತ್ವದ `ಏನು ಕೊಡ ಏನ ಕೊಡವ...~ ಜಾನಪದ ನೃತ್ಯದ ಸಂದರ್ಭದಲ್ಲಿ ಪ್ರೇಕ್ಷಕರು- ಶಿಕ್ಷಕರು ಸಹ ಅತ್ಯುತ್ಸಾಹದಿಂದ ಹೆಜ್ಜೆ ಹಾಕಿದರು.<br /> <br /> `ವಿಧವಾ ಮರು ವಿವಾಹ~ಕ್ಕೆ ಬೆಂಬಲಿಸಿದ ಕಿರು ನಾಟಕ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ವಿದ್ಯಾರ್ಥಿ ಮಹೇಶ ಬೆಲ್ಲದ, ಸಿದ್ದಮ್ಮ ನಾಯ್ಕೋಡಿ ಅಭಿನಯ ಹೃದಯಸ್ಪರ್ಶಿಯಾಗಿತ್ತು. ಮಾಸ್ಟರ್ ರವಿ ಗೋಲಾ, ಮೇಡಂ ಸವಿತಾ ಹಾಬಾಳ, ಜಯಶ್ರೀ ನಂದಿಕೋಲ ಅವರ ಪ್ರೋತ್ಸಾಹ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>