ಸಾಗರ: ಸಮೀಪದ ಬಳಸಗೋಡು-ಮಂಚಾಲೆ ಬಳಿ ಮಂಗಳವಾರ ಗಾಳಿ ಮಳೆಯ ಕಾರಣ ಮರದ ರೆಂಬೆ ಮುರಿದು ಬಿದ್ದ ಕಾರಣ ರಾಷ್ಟ್ರೀಯ ಹೆದ್ದಾರಿ 206ರ ಸಾಗರ-ಶಿವಮೊಗ್ಗ ರಸ್ತೆಯಲ್ಲಿ ಕೆಲಕಾಲ ಸಂಚಾರಕ್ಕೆ ಅಡ್ಡಿಯಾಗಿತ್ತು.
ಈ ಭಾಗದಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ರಸ್ತೆಗೆ ಬಿದ್ದಿದ್ದ ರೆಂಬೆಯನ್ನು ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ನಗರದಲ್ಲಿ ಕೆಲಕಾಲ ಗುಡುಗು ಇದ್ದಾಗ್ಯೂ ಮಳೆ ಬರಲಿಲ್ಲ.