ಹುಣಸಗಿ: ರಾಜ್ಯದ ಕೃಷ್ಣಾ ನದಿ ಪ್ರದೇಶದಲ್ಲಿ ಒಂದು ವಾರದಿಂದ ವ್ಯಾಪಕ ಮಳೆ ಕಾರಣ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮತ್ತೆ ನೀರು ಹರಿದು ಬರುತ್ತಿದೆ ಎಂದು ಡ್ಯಾಂ ಡಿವಿಜನ್ ಕಾರ್ಯನಿರ್ವಾಹಕ ಎಂಜಿನಿಯರ್ ಶಂಕರ್ ನಾಯ್ಕೊಡಿ ತಿಳಿಸಿದ್ದಾರೆ.
ಮಂಗಳವಾರ ಬೆಳಿಗ್ಗೆ 85 ಸಾವಿರ ಕ್ಯುಸೆಕ್ ಇದ್ದ ಒಳ ಹರಿವು ಬುಧವಾರ ಬೆಳಿಗ್ಗೆ 1.20 ಲಕ್ಷಕ್ಕೆ ಏರಿಕೆಯಾಗಿತ್ತು. ಇದರಿಂದಾಗಿ ಸಂಜೆಯ ಹೊತ್ತಿಗೆ 22 ಗೇಟ್ಗಳ ಮುಖಾಂತರ 1.62 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಹರಿಬಿಡಲಾಯಿತು.