‘ಕಾಲುವೆ ಮೇಲ್ಭಾಗದಲ್ಲಿ ಕೆಲ ರೈತರು ಕಾಲುವೆ ಸೀಳಿ ಪೈಪ್ಲೈನ್ ಮೂಲಕ ಅನಧಿಕೃತವಾಗಿ ಕೆರೆ ನಿರ್ಮಿಸಿದ್ದಾರೆ. ಸಂಗ್ರಹಿಸಿದ ನೀರನ್ನು ವಾರಬಂದಿ ಸಮಯದಲ್ಲಿ ಕಾಲುವೆ ನೀರು ಸ್ಥಗಿತಗೊಂಡಾಗ ಹಾಯಿಸುತ್ತಾರೆ. ಇದರಿಂದ ನಮಗೆ ನೀರು ತಲುಪುತ್ತಿಲ್ಲ. ಕೃಷ್ಣಾ ಭಾಗ್ಯ ಜಲ ನಿಗಮದ ಭೀಮರಾಯನಗುಡಿ ವಲಯದ ಎಂಜಿನಿಯರ್ ಅವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಅನಧಿಕೃತವಾಗಿ ನಿರ್ಮಿಸಿದ ಕೆರೆಗಳನ್ನು ತೆರವುಗೊಳಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ನೀರು ವಂಚಿತ ಕೆಳ ಭಾಗದ ಗ್ರಾಮಗಳಾದ ಮುನಮುಟಗಿ, ಕಾಡಂಗೇರಾ, ಹಯ್ಯಾಳ, ಮದರಕಲ್, ಕೊಳ್ಳೂರ, ಬಿರನೂರ, ಹತ್ತಿಗೂಡೂರ, ಅನವಾರ ಗ್ರಾಮದ ರೈತರು ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ.