ಪ್ರತಿ ವರ್ಷ ಜನತೆ ಉತ್ಸಾಹದಿಂದ ಯುಗಾದಿ ಹಬ್ಬದ ಮುನ್ನ ಎಲ್ಲಾ ತರಹದ ಹಣ್ಣುಗಳನ್ನು ಹಾಗೂ ಹೊಸ ಬೇವಿನ ಮಡಿಕೆ ಖರೀದಿಸಿ, ಬೇವಿನ ಗಿಡದಿಂದ ಸ್ವಲ್ಪ ಎಲೆ ಕಿತ್ತು ಬೇವು ತಯಾರಿಸಿದ್ದರು. ಮೊದಲು ದೇವರಿಗೆ ಅರ್ಪಿಸಿ ಕುಟುಂಬದ ಎಲ್ಲಾ ಸದಸ್ಯರು ಸಂಭ್ರಮದಿಂದ ಕುಡಿದು, ಅಕ್ಕ-ಪಕ್ಕದ ಮನೆಯವರನ್ನು ಹಾಗೂ ಸ್ನೇಹಿತರನ್ನು ತಮ್ಮ ಮನೆಗೆ ಕರೆದು ಬೇವು ಕುಡಿಸುವ ಮೂಲಕ ಸಾಮರಸ್ಯದ ವಾತಾವರಣ ನಿರ್ಮಾಣಕ್ಕೆ ಪ್ರಯತ್ನಿಸುತ್ತಿದ್ದರು. ಆದರೆ, ಪ್ರಸಕ್ತ ದಿನಗಳಲ್ಲಿ ಕೊರೊನಾ ವೈರಸ್ ಎಲ್ಲಾ ಭಾಗದಲ್ಲಿ ಹರಡಿರುವುದರಿಂದ ಜನರು ಆತಂಕದಲ್ಲಿಯೇ ಜೀವನ ಕಳೆಯುತ್ತಿದ್ದಾರೆ. ಸರ್ಕಾರ ಕೂಡ ವೈರಸ್ ತಡೆಯಲು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡು ಜನರು ಈ ವರ್ಷ ಯುಗಾದಿ ಹಬ್ಬವನ್ನು ಆಡಂಬರದಿಂದ ಆಚರಿಸದೇ ಮೊದಲು ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ ಸೂಚಿಸಿರುವುದರಿಂದ ಜನರು ಮನೆಯಿಂದ ಹೊರಬರಲು ಬಂದಿಲ್ಲ.