ಮಾರುಕಟ್ಟೆ ತೊಂದರೆ ಇಲ್ಲ. ಸಗಟು ಮಾರಾಟಗಾರರು ನೇರವಾಗಿ ತೋಟಕ್ಕೆ ಬಂದು ಸ್ಥಳದಲ್ಲೆ ಹಣ ನೀಡಿ ಖರೀದಿ ಮಾಡುತ್ತಿದ್ದಾರೆ. ತೋಟ ಬಸ್ನಿಲ್ದಾಣದ ಪಕ್ಕದಲ್ಲೆ ಇರುವುದರಿಂದ ಸಂಪರ್ಕಕ್ಕೆ ತೊಂದರೆ ಇಲ್ಲ.
ಕರಿಬೇವನ್ನು ತೋಟಗಾರಿಕೆ ಬೆಳೆಯನ್ನಾಗಿ ಬೆಳೆದು ಹಣ ಗಳಿಸಬಹುದು ಎಂದು ಅನೀಲ ನಿರೂಪಿಸಿದ್ದಾರೆ. ಸಾಕಷ್ಟು ರೈತರು ತೋಟಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ಅನಿಲ ಇತರ ರೈತರಿಗೆ
ಮಾದರಿಯಾಗಿದ್ದಾರೆ.