<p><strong>ಶಹಾಪುರ</strong>: ಸಾಧನೆಗಳ ಪರಿಪೂರ್ಣತೆಗೆ ಇಚ್ಛಾಶಕ್ತಿ ಹಾಗೂ ನಿರಂತರ ಪರಿಶ್ರಮ ಅಗತ್ಯವಾಗಿದೆ. ಸತತ ಪ್ರಯತ್ನದ ದಾರಿ ಹಿಡಿದರೆ ಯಶಸ್ಸು ನಿಶ್ಚಿತವಾಗಿ ದೊರಕುತ್ತದೆ ಎಂದು ದಂಡಗುಂಡ ಸಂಸ್ಥಾನಮಠದ ಸಂಗನಬಸವ ಶಿವಾಚಾರ್ಯರು ತಿಳಿಸಿದರು.</p>.<p>ನಗರದ ಹೊರವಲಯದಲ್ಲಿರುವ ಶ್ರೀಶೈಲ ಮಲ್ಲಿಕಾರ್ಜುನ್ ಫೌಂಡೇಶನ್ ಆಶ್ರಯದಲ್ಲಿರುವ ಶ್ರೀಶೈಲ ಮಲ್ಲಿಕಾರ್ಜುನ ಅನಾಥಾಶ್ರಮದಲ್ಲಿ ಭಾನುವಾರ 2ನೇ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.</p>.<p>ತಂದೆ-ತಾಯಿ, ಬಂಧು-ಬಳಗ ಪ್ರೀತಿಯಿಂದ ವಂಚಿತರಾದ ಮಕ್ಕಳ ಭವಿಷ್ಯ ರೂಪಿಸುವ ಕಾರ್ಯದಲ್ಲಿ ತೊಡಗಿರುವ ರೇಣುಕಾ ಹುಗ್ಗಿ ಅವರ ಕುಟುಂಬದ ಸದಸ್ಯರ ಕಾರ್ಯ ಮೆಚ್ಚುವಂತದ್ದು. ಅವರ ಕಾರ್ಯಕ್ಕೆ ಯಶಸ್ಸು ಸಿಗಲಿ, ಮುಂಬರುವ ದಿನಗಳಲ್ಲಿ ಇಲ್ಲಿನ 16 ಮಕ್ಕಳು ಉತ್ತಮ ಶಿಕ್ಷಣ ಸೌಲಭ್ಯ ಪಡೆದು ಪ್ರತಿಭಾವಂತರಾಗಲೆಂದು ತಿಳಿಸಿದರು.</p>.<p>ಗುರುಕಾಮ, ಚನ್ನಪ್ಪಗೌಡ ಶಿರವಾಳ, ಸುಧೀರ ಚಿಂಚೋಳಿ, ಡಾ.ಮೌನೇಶ ಕೆಂಭಾವಿ, ಮರೆಪ್ಪ.ಎಂ.ಪ್ಯಾಟಿ ,ಪ್ರಶಾಂತ ದೊಡ್ಡಮನಿ, ತಿಪ್ಪಣ್ಣ ಕ್ಯಾತನಾಳ, ಡಾ.ಜಗದೀಶ ಉಪ್ಪಿನ, ರವಿ ಮೋಟಗಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಹಾಪುರ</strong>: ಸಾಧನೆಗಳ ಪರಿಪೂರ್ಣತೆಗೆ ಇಚ್ಛಾಶಕ್ತಿ ಹಾಗೂ ನಿರಂತರ ಪರಿಶ್ರಮ ಅಗತ್ಯವಾಗಿದೆ. ಸತತ ಪ್ರಯತ್ನದ ದಾರಿ ಹಿಡಿದರೆ ಯಶಸ್ಸು ನಿಶ್ಚಿತವಾಗಿ ದೊರಕುತ್ತದೆ ಎಂದು ದಂಡಗುಂಡ ಸಂಸ್ಥಾನಮಠದ ಸಂಗನಬಸವ ಶಿವಾಚಾರ್ಯರು ತಿಳಿಸಿದರು.</p>.<p>ನಗರದ ಹೊರವಲಯದಲ್ಲಿರುವ ಶ್ರೀಶೈಲ ಮಲ್ಲಿಕಾರ್ಜುನ್ ಫೌಂಡೇಶನ್ ಆಶ್ರಯದಲ್ಲಿರುವ ಶ್ರೀಶೈಲ ಮಲ್ಲಿಕಾರ್ಜುನ ಅನಾಥಾಶ್ರಮದಲ್ಲಿ ಭಾನುವಾರ 2ನೇ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.</p>.<p>ತಂದೆ-ತಾಯಿ, ಬಂಧು-ಬಳಗ ಪ್ರೀತಿಯಿಂದ ವಂಚಿತರಾದ ಮಕ್ಕಳ ಭವಿಷ್ಯ ರೂಪಿಸುವ ಕಾರ್ಯದಲ್ಲಿ ತೊಡಗಿರುವ ರೇಣುಕಾ ಹುಗ್ಗಿ ಅವರ ಕುಟುಂಬದ ಸದಸ್ಯರ ಕಾರ್ಯ ಮೆಚ್ಚುವಂತದ್ದು. ಅವರ ಕಾರ್ಯಕ್ಕೆ ಯಶಸ್ಸು ಸಿಗಲಿ, ಮುಂಬರುವ ದಿನಗಳಲ್ಲಿ ಇಲ್ಲಿನ 16 ಮಕ್ಕಳು ಉತ್ತಮ ಶಿಕ್ಷಣ ಸೌಲಭ್ಯ ಪಡೆದು ಪ್ರತಿಭಾವಂತರಾಗಲೆಂದು ತಿಳಿಸಿದರು.</p>.<p>ಗುರುಕಾಮ, ಚನ್ನಪ್ಪಗೌಡ ಶಿರವಾಳ, ಸುಧೀರ ಚಿಂಚೋಳಿ, ಡಾ.ಮೌನೇಶ ಕೆಂಭಾವಿ, ಮರೆಪ್ಪ.ಎಂ.ಪ್ಯಾಟಿ ,ಪ್ರಶಾಂತ ದೊಡ್ಡಮನಿ, ತಿಪ್ಪಣ್ಣ ಕ್ಯಾತನಾಳ, ಡಾ.ಜಗದೀಶ ಉಪ್ಪಿನ, ರವಿ ಮೋಟಗಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>