<p><strong>ವಡಗೇರಾ:</strong> ಕಣೇಕಲ್ ಗ್ರಾಮದ ರೈತರು ಬೆಳೆದ ತರಕಾರಿಯನ್ನು ಚಿತ್ರನಟ ಉಪೇಂದ್ರ ಖರೀದಿಸಿ ಅಭಿಮಾನಿಗಳ ಮೂಲಕ ಪಟ್ಟಣದಲ್ಲಿರುವ ಬಡವರಿಗೆ ನೀಡಿದ್ದಾರೆ.</p>.<p>ರೈತರೇ ನಿಗದಿಮಾಡಿದ ಬೆಲೆಗೆ 500 ಕೆಜಿ ಟೊಮೆಟೊ, 500 ಕೆಜಿ ಈರುಳ್ಳಿ, 500 ಕೆಜಿ ಬದನೆಕಾಯಿಗೆ ₹15,000 ಹಣ ಕೊಟ್ಟು ಅಭಿಮಾನಿಗಳು ತರಕಾರಿ ವಿತರಣೆ ಮಾಡಿದ್ದಾರೆ.</p>.<p>ಜಿಲ್ಲೆಯಾದ್ಯಂತ ಮೇ 28ರ ವರೆಗೆ ಸಂಪೂರ್ಣ ಲಾಕ್ಡೌನ್ ಜಾರಿ ಮಾಡಲಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿ ತರಕಾರಿಗಳನ್ನು ಬೀದಿಗೆ ಹಾಕುವ ಪರಿಸ್ಥಿತಿ ಉಂಟಾಗಿತ್ತು. ಇದನ್ನು ಗಮನಿಸಿದ ಉಪೇಂದ್ರ ಅವರು ಅಭಿಮಾನಿಗಳಿಗೆ ಹಣ ನೀಡಿ ರೈತರ ಸಂಕಷ್ಟಕ್ಕೆ ನೆರವಾಗಿದ್ದಾರೆ.</p>.<p>ಉಪೇಂದ್ರ ಅಭಿಮಾನಿ ಬಳಗದ ಅಧ್ಯಕ್ಷ ಸಾಬರೆಡ್ಡಿ ಉಪ್ಪಿ ಮಾತನಾಡಿ, ರೈತರಿಂದ ತರಕಾರಿ ಖರೀದಿಸಿ ಬಡ ಕುಟುಂಬಗಳಿಗೆ ಉಚಿತವಾಗಿ ನೀಡಬೇಕು ಎಂದು ಉಪೇಂದ್ರ ಅವರು ಹಣಕಾಸಿನ ನೆರವು ನೀಡಿದ್ದರು. ಅದರಂತೆ ಈ ಕಾರ್ಯ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.</p>.<p>ಮುಖಂಡರಾದ ಸಿದ್ದನಗೌಡ ಕಾಡಂನೊರ, ಭಾಷುಮಿಯಾ ನಾಯ್ಕೋಡಿ, ಚಂದ್ರಕಲಾ ಬಾಗೂರ, ಮಲ್ಲಣ್ಣ ನೀಲಹಳ್ಳಿ, ಸಂತೋಷ್ ಬೊಜ್ಜಿ, ಫಕೀರ್ ಅಹಮದ್, ನಿಂಗು ಜಡಿ, ಶರಣು ಇಟಗಿ, ಸೈಯದ್ ಕಾರ್ಪೆಂಟರ್, ಮೈಮುದ್ ಸಾಬ್, ಯಲ್ಲಪ್ಪ, ನಿಂಗಣ್ಣ ಬೂದಿನಾಳ, ಅಂಜು ಉಪ್ಪಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಡಗೇರಾ:</strong> ಕಣೇಕಲ್ ಗ್ರಾಮದ ರೈತರು ಬೆಳೆದ ತರಕಾರಿಯನ್ನು ಚಿತ್ರನಟ ಉಪೇಂದ್ರ ಖರೀದಿಸಿ ಅಭಿಮಾನಿಗಳ ಮೂಲಕ ಪಟ್ಟಣದಲ್ಲಿರುವ ಬಡವರಿಗೆ ನೀಡಿದ್ದಾರೆ.</p>.<p>ರೈತರೇ ನಿಗದಿಮಾಡಿದ ಬೆಲೆಗೆ 500 ಕೆಜಿ ಟೊಮೆಟೊ, 500 ಕೆಜಿ ಈರುಳ್ಳಿ, 500 ಕೆಜಿ ಬದನೆಕಾಯಿಗೆ ₹15,000 ಹಣ ಕೊಟ್ಟು ಅಭಿಮಾನಿಗಳು ತರಕಾರಿ ವಿತರಣೆ ಮಾಡಿದ್ದಾರೆ.</p>.<p>ಜಿಲ್ಲೆಯಾದ್ಯಂತ ಮೇ 28ರ ವರೆಗೆ ಸಂಪೂರ್ಣ ಲಾಕ್ಡೌನ್ ಜಾರಿ ಮಾಡಲಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿ ತರಕಾರಿಗಳನ್ನು ಬೀದಿಗೆ ಹಾಕುವ ಪರಿಸ್ಥಿತಿ ಉಂಟಾಗಿತ್ತು. ಇದನ್ನು ಗಮನಿಸಿದ ಉಪೇಂದ್ರ ಅವರು ಅಭಿಮಾನಿಗಳಿಗೆ ಹಣ ನೀಡಿ ರೈತರ ಸಂಕಷ್ಟಕ್ಕೆ ನೆರವಾಗಿದ್ದಾರೆ.</p>.<p>ಉಪೇಂದ್ರ ಅಭಿಮಾನಿ ಬಳಗದ ಅಧ್ಯಕ್ಷ ಸಾಬರೆಡ್ಡಿ ಉಪ್ಪಿ ಮಾತನಾಡಿ, ರೈತರಿಂದ ತರಕಾರಿ ಖರೀದಿಸಿ ಬಡ ಕುಟುಂಬಗಳಿಗೆ ಉಚಿತವಾಗಿ ನೀಡಬೇಕು ಎಂದು ಉಪೇಂದ್ರ ಅವರು ಹಣಕಾಸಿನ ನೆರವು ನೀಡಿದ್ದರು. ಅದರಂತೆ ಈ ಕಾರ್ಯ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.</p>.<p>ಮುಖಂಡರಾದ ಸಿದ್ದನಗೌಡ ಕಾಡಂನೊರ, ಭಾಷುಮಿಯಾ ನಾಯ್ಕೋಡಿ, ಚಂದ್ರಕಲಾ ಬಾಗೂರ, ಮಲ್ಲಣ್ಣ ನೀಲಹಳ್ಳಿ, ಸಂತೋಷ್ ಬೊಜ್ಜಿ, ಫಕೀರ್ ಅಹಮದ್, ನಿಂಗು ಜಡಿ, ಶರಣು ಇಟಗಿ, ಸೈಯದ್ ಕಾರ್ಪೆಂಟರ್, ಮೈಮುದ್ ಸಾಬ್, ಯಲ್ಲಪ್ಪ, ನಿಂಗಣ್ಣ ಬೂದಿನಾಳ, ಅಂಜು ಉಪ್ಪಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>