‘ತಾಲ್ಲೂಕಿನ ಗೌಡೂರ ಗ್ರಾಮದ ಬಳಿ ಶನಿವಾರ ಟಿಪ್ಪರ್ನಲ್ಲಿ ಮರಳು ತುಂಬಿಕೊಳ್ಳುವಾಗ ಕಾನ್ಸ್ಟೆಬಲ್ ಆನಂದ, ಶರಣು, ಮರೆಪ್ಪ ಎಂಬುವರು ಪಿಎಸ್ಐ ಸಂಗಮೇಶ ಅಂಗಡಿ ಕರೆದಿದ್ದಾರೆ ಎಂದು ಕರೆದೊಯ್ದು ಜೇಬಿನಲ್ಲಿದ್ದ ₹ 64 ಸಾವಿರ ಕಸಿದುಕೊಂಡಿದ್ದಾರೆ. ನಂತರ ಕೆಳಗಡೆ ಬಿದ್ದ ₹ 75 ಸಾವಿರ ಮೌಲ್ಯದ 15 ಗ್ರಾಂ ಚಿನ್ನದ ಸರ ತೆಗೆದುಕೊಂಡಿದ್ದಾರೆ. ಆನಂದ ಎಂಬುವರು ಟಿಪ್ಪರ್ ಚಾಲನೆ ಮಾಡಿಕೊಂಡು ಮುಂದೆ ಸಾಗಿದರೆ, ಅದರ ಹಿಂದೆ ಕಾರಿನಲ್ಲಿ ಕೂರಿಸಿಕೊಂಡು ಜೇವರ್ಗಿ ಠಾಣೆ ಹತ್ತಿರ ಬಿಟ್ಟು ಹೋಗಿದ್ದಾರೆ’ ಎಂದು ಟಿಪ್ಪರ್ ಚಾಲಕ ಹಣಮಂತರಾಯ ಮಕಾಶಿ ದೂರಿನಲ್ಲಿ ತಿಳಿಸಿದ್ದಾರೆ.