<p><strong>ಯಾದಗಿರಿ: ‘</strong>ವಿಶ್ವಾರಾಧ್ಯರ ಆಧ್ಯಾತ್ಮಿಕ ಬದುಕಿನ ಚೇತನ ಶಕ್ತಿಯಾಗಿ ಬಸವಾಂಬೆ ತಾಯಿ ಅವರ ಬಾಳನ್ನು ಬೆಳಗಿದ್ದಾರೆ’ ಎಂದು ಅಬ್ಬೆತುಮಕೂರಿನ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಹೇಳಿದರು.</p>.<p>ಅಬ್ಬೆತುಮಕೂರಿನ ಮಠದಲ್ಲಿ ಈಚೆಗೆ ಬಸಮ್ಮ ತಾಯಿಯ ಜಾತ್ರೆ ಅಂಗವಾಗಿ ನಡೆದ ರಥೋತ್ಸವದ ಬಳಿಕದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ವಿಶ್ವಾರಾಧ್ಯರು ಈ ನಾಡು ಕಂಡ ಅಪರೂಪದ ಸಿದ್ಧಿ ಪುರುಷರು. ಅವರ ಸಿದ್ದಿಯ ಸಾಧನೆಯ ಪಥದಲ್ಲಿ ಪತ್ನಿ ಬಸಮ್ಮ ತಾಯಿ ಪಾತ್ರ ಬಹುಮುಖ್ಯವಾಗಿದೆ. ಸಿದ್ದಿಯ ಶಿಖರವನ್ನು ಮುಟ್ಟಲು ಬಸವಾಂಬೆ ಮೆಟ್ಟಿಲಾಗಿ ನಿಂತಿದ್ದರಿಂದಾಗಿ ಅದು ಸಾಧ್ಯವಾಯಿತು’ ಎಂದರು.</p>.<p>‘ಬಸಮ್ಮ ತಾಯಿ ಗಂಡನಿಗೆ ತಕ್ಕ ಮಡದಿಯಾಗಿದ್ದರು. ಅವರು ನಶ್ವರವಾದ ಬದುಕಿಗೆ ಅಂಟಿಕೊಳ್ಳಲಿಲ್ಲ. ಪತಿ ವಿಶ್ವಾರಾಧ್ಯರು ಪರಮೋನ್ನತ ಅಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿದಾಗ ತ್ಯಾಗಮಯಿಯಾದ ಬಸಮ್ಮ ತಾಯಿ, ಎಲ್ಲಾ ಹಂತದಲ್ಲಿಯೂ ಅವರಿಗೆ ಸಹ ಧರ್ಮಣಿಯಾಗಿ ನಿಂತಿದ್ದರು’ ಎಂದು ಹೇಳಿದರು.</p>.<p>‘ಸತಿಪತಿಗಳೊಂದಾದ ಭಕ್ತಿ ಹಿತವಾಗಿಪುದು ಶಿವಂಗೆ ಎನ್ನುವಂತೆ ವಿಶ್ವಾರಾಧ್ಯರು ಮತ್ತು ಬಸಮ್ಮ ತಾಯಿ ಯಾವತ್ತೂ ಮೋಹದ ಪಾಶಕ್ಕೆ ಒಳಗಾಗಲಿಲ್ಲ’ ಎಂದರು</p>.<p>ವಿಶ್ವಾರಾಧ್ಯರ ಮತ್ತು ಬಸಮ್ಮ ತಾಯಿಯ ಗದ್ದುಗೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಪ್ರಮುಖ ಬೀದಿಗಳಲ್ಲಿ ಪುರವಂತರ ಸೇವೆಯೊಂದಿಗೆ ಪಲ್ಲಕ್ಕಿ ಉತ್ಸವದ ಬಳಿಕ ಬಸಮ್ಮ ತಾಯಿಯ ರಥೋತ್ಸವ ಸಂಭ್ರಮದಿಂದ ಜರುಗಿತು.</p>.<p>ಬಿಜೆಪಿ ಮುಖಂಡ ಮಹೇಶರೆಡ್ಡಿ ಮುದ್ನಾಳ, ಚನ್ನಪ್ಪಗೌಡ ಮೂಸಂಬಿ, ಸುಭಾಷ್ ಚಂದ್ರ ಕೌಲಗಿ ಸೇರಿದಂತೆ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ: ‘</strong>ವಿಶ್ವಾರಾಧ್ಯರ ಆಧ್ಯಾತ್ಮಿಕ ಬದುಕಿನ ಚೇತನ ಶಕ್ತಿಯಾಗಿ ಬಸವಾಂಬೆ ತಾಯಿ ಅವರ ಬಾಳನ್ನು ಬೆಳಗಿದ್ದಾರೆ’ ಎಂದು ಅಬ್ಬೆತುಮಕೂರಿನ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಹೇಳಿದರು.</p>.<p>ಅಬ್ಬೆತುಮಕೂರಿನ ಮಠದಲ್ಲಿ ಈಚೆಗೆ ಬಸಮ್ಮ ತಾಯಿಯ ಜಾತ್ರೆ ಅಂಗವಾಗಿ ನಡೆದ ರಥೋತ್ಸವದ ಬಳಿಕದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ವಿಶ್ವಾರಾಧ್ಯರು ಈ ನಾಡು ಕಂಡ ಅಪರೂಪದ ಸಿದ್ಧಿ ಪುರುಷರು. ಅವರ ಸಿದ್ದಿಯ ಸಾಧನೆಯ ಪಥದಲ್ಲಿ ಪತ್ನಿ ಬಸಮ್ಮ ತಾಯಿ ಪಾತ್ರ ಬಹುಮುಖ್ಯವಾಗಿದೆ. ಸಿದ್ದಿಯ ಶಿಖರವನ್ನು ಮುಟ್ಟಲು ಬಸವಾಂಬೆ ಮೆಟ್ಟಿಲಾಗಿ ನಿಂತಿದ್ದರಿಂದಾಗಿ ಅದು ಸಾಧ್ಯವಾಯಿತು’ ಎಂದರು.</p>.<p>‘ಬಸಮ್ಮ ತಾಯಿ ಗಂಡನಿಗೆ ತಕ್ಕ ಮಡದಿಯಾಗಿದ್ದರು. ಅವರು ನಶ್ವರವಾದ ಬದುಕಿಗೆ ಅಂಟಿಕೊಳ್ಳಲಿಲ್ಲ. ಪತಿ ವಿಶ್ವಾರಾಧ್ಯರು ಪರಮೋನ್ನತ ಅಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿದಾಗ ತ್ಯಾಗಮಯಿಯಾದ ಬಸಮ್ಮ ತಾಯಿ, ಎಲ್ಲಾ ಹಂತದಲ್ಲಿಯೂ ಅವರಿಗೆ ಸಹ ಧರ್ಮಣಿಯಾಗಿ ನಿಂತಿದ್ದರು’ ಎಂದು ಹೇಳಿದರು.</p>.<p>‘ಸತಿಪತಿಗಳೊಂದಾದ ಭಕ್ತಿ ಹಿತವಾಗಿಪುದು ಶಿವಂಗೆ ಎನ್ನುವಂತೆ ವಿಶ್ವಾರಾಧ್ಯರು ಮತ್ತು ಬಸಮ್ಮ ತಾಯಿ ಯಾವತ್ತೂ ಮೋಹದ ಪಾಶಕ್ಕೆ ಒಳಗಾಗಲಿಲ್ಲ’ ಎಂದರು</p>.<p>ವಿಶ್ವಾರಾಧ್ಯರ ಮತ್ತು ಬಸಮ್ಮ ತಾಯಿಯ ಗದ್ದುಗೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಪ್ರಮುಖ ಬೀದಿಗಳಲ್ಲಿ ಪುರವಂತರ ಸೇವೆಯೊಂದಿಗೆ ಪಲ್ಲಕ್ಕಿ ಉತ್ಸವದ ಬಳಿಕ ಬಸಮ್ಮ ತಾಯಿಯ ರಥೋತ್ಸವ ಸಂಭ್ರಮದಿಂದ ಜರುಗಿತು.</p>.<p>ಬಿಜೆಪಿ ಮುಖಂಡ ಮಹೇಶರೆಡ್ಡಿ ಮುದ್ನಾಳ, ಚನ್ನಪ್ಪಗೌಡ ಮೂಸಂಬಿ, ಸುಭಾಷ್ ಚಂದ್ರ ಕೌಲಗಿ ಸೇರಿದಂತೆ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>