ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪತ್ರಿಕಾಧರ್ಮ ಉಳಿಸಲು ಒಗ್ಗಟ್ಟು ಅಗತ್ಯ’

Last Updated 7 ಜುಲೈ 2019, 12:54 IST
ಅಕ್ಷರ ಗಾತ್ರ

ಯಾದಗಿರಿ: ‘ಪತ್ರಿಕಾ ಧರ್ಮ ಉಳಿಸಲು ಪತ್ರಕರ್ತರು ಒಗ್ಗೂಡಿ ಶ್ರಮಿಸಬೇಕಾದ ಅಗತ್ಯ ಇದೆ’ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಜಿ. ಸಿದ್ದೇಶ್ವರಪ್ಪ ಅಭಿಪ್ರಾಯಪಟ್ಟರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಭಾನುವಾರ ನಡೆದ ಪತ್ರಿಕಾ ದಿನಾಚರಣೆ, ಪತ್ರಿಕಾ ವಿತರಕರಿಗೆ ಜರ್ಕಿನ್ ವಿತರಣೆ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

‘ಪತ್ರಿಕೋದ್ಯಮ ಇಂದು ಸಂಕೀರ್ಣ ಕಾಲಘಟ್ಟದಲ್ಲಿದ್ದು, ಎಲೆಕ್ಟ್ರಾನಿಕ್‌ ಮತ್ತು ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ಅಸ್ತಿತ್ವಕ್ಕಾಗಿ ಹೋರಾಡಬೇಕಾದ ಪರಿಸ್ಥಿತಿ ಬಂದಿದೆ. ಆದರೂ ಪತ್ರಿಕೆಗೆ ತನ್ನದೇ ಆದ ಮಹತ್ವ ಉಳಿಸಿಕೊಂಡಿದೆ’ಎಂದರು.

‘ಮಾಧ್ಯಮಗಳ ಹೆಸರಿನ ಕೆಲವು ಖೊಟ್ಟಿ ವ್ಯಕ್ತಿಗಳು ಮಾಧ್ಯಮದವರು ಎಂದು ಹೇಳಿ ನುಸುಳಿ ಮಾಧ್ಯಮಗಳ ವಾತಾವರಣ ಕೆಡಿಸುವ ಯತ್ನದಲ್ಲಿರುವವರ ಕುರಿತು ಪತ್ರಕರ್ತರು ಮತ್ತು ನಾವು ಎಲ್ಲರೂ ಜಾಗೃತರಾಗಿರಬೇಕು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಂ.ಜಗದೀಶ ಮಾತನಾಡಿ, ’ಪತ್ರಿಕಾ ಭವನದ ಸಮಸ್ಯೆಗಳನ್ನು ವಾರ್ತಾ ಇಲಾಖೆಗೆ ಸಲ್ಲಿಸಿದ್ದು, ಜಿಲ್ಲಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಸಮಸ್ಯೆಗಳನ್ನು ಪರಿಹರಿಸಿ ಕೊಡಬೇಕೆಂದು’ ಮನವಿ ಮಾಡಿದರು.

’ಪತ್ರಿಕಾ ಭವನ ₹ 70 ಲಕ್ಷ ವೆಚ್ಚ ಮಾಡಿ ಕಟ್ಟಿಸಿದ್ದು, ಸಾರ್ಥಕವಾಗಬೇಕಾದರೆ ಇನ್ನಷ್ಟು ಅದಕ್ಕೆ ಆಧುನಿಕ ಸ್ಪರ್ಶ ನೀಡಲು ಆಗುವ ವೆಚ್ಚವನ್ನು ಜಿಲ್ಲಾಡಳಿತ ವಾರ್ತಾ ಇಲಾಖೆ ಭರಿಸಿ ತಕ್ಷಣ ಕಾರ್ಯಕ್ಕೆ ಚಾಲನೆ ನೀಡಬೇಕು. ಪತ್ರಕರ್ತರ ಸಂಘದ ಕೆಲವೇ ಬೇಡಿಕೆಗಳನ್ನು ಜಿಲ್ಲಾಡಳಿತ ಈಡೇರಿಸಬೇಕೆಂದು’ ಮನವಿ ಮಾಡಿದರು.

ಹಿರಿಯ ಪತ್ರಕರ್ತ ಅನಿಲ್ ದೇಶಪಾಂಡೆ ಮಾತನಾಡಿ, ’ಮಾಧ್ಯಮಗಳ ಜವಾಬ್ದಾರಿ ಇಂದು ಹೆಚ್ಚಾಗಿದ್ದು, ಇದನ್ನು ಅರಿತು ನಡೆಯಬೇಕಿದೆ’ ಎಂದು ಕಿವಿಮಾತು ಹೇಳಿದರು.

ಪತ್ರಿಕಾ ವಿತರಕರಾದ ಸಂತೋಷ, ಅಮರಯ್ಯ ಸ್ವಾಮಿ, ಮಾಸೂದ ಅಹಮ್ಮದ್, ಅದೀರ ಪಾಷಾ, ಮಹೆಬೂಬ ಅಲಿ, ನವಾಬ ಅಹಮ್ಮದ್, ನತುಲ್, ಮೋನೇಶ, ರಾಜು, ಸಾಬರೆಡ್ಡಿ ಅವರಿಗೆ ಸಂಘದ ವತಿಯಿಂದ ಜರ್ಕಿನ್‌ಗಳನ್ನು ವಿತರಿಸಲಾಯಿತು.

ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಇಂದುಧರ ಸಿನ್ನೂರು ಇದ್ದರು. ವೈಜನಾಥ ಹಿರೇಮಠ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ರವಿಂದ್ರ ಕುಲಕರ್ಣಿ ಪ್ರಾರ್ಥನಾ ಗೀತೆ ಹಾಡಿದರು. ಕುಮಾರಸ್ವಾಮಿ ಕಲಾಲ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT