ನಂತರ ಮಾತನಾಡಿದ ತಹಶೀಲ್ದಾರ್, ‘ಕೊರೊನಾ 2ನೇ ಅಲೆ ಎಲ್ಲೆಡೆ ವ್ಯಾಪಿಸುತ್ತಿರುವ ಕಾರಣ ಮಂಗಳವಾರ ರಾತ್ರಿಯಿಂದ 14 ದಿನ ಜನತಾ ಕರ್ಫ್ಯೂ ಘೋಷಿಸಲಾಗಿದೆ. ಬೆಂಗಳೂರಿನಿಂದ ಸರ್ಕಾರಿ ಹಾಗೂ ಖಾಸಗಿ ಬಸ್, ಕ್ರೂಸರ್, ಇತರ ವಾಹನಗಳಲ್ಲಿ ಆಗಮಿಸುವ ಕಾರ್ಮಿಕರನ್ನು ತಡೆದು ಕೋವಿಡ್ ಪರೀಕ್ಷೆ ಮಾಡಿ ಅವರುಗಳ ಗ್ರಾಮಗಳಿಗೆ ಕಳುಹಿಸಿಕೊಡಲಾಗುತ್ತಿದೆ’ ಎಂದು ತಿಳಿಸಿದರು.