ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಿವಕುಮಾರ ಉಪ್ಪಾರ ಕೊಲೆಯನ್ನು ಪೊಲೀಸರು ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾರೆ. ಅವರ ಪೋಷಕರಿಗೆ ಒತ್ತಡ ಹಾಕಿ ಆತ್ಮಹತ್ಯೆ ಎಂದು ಹೇಳಿಸಿದ್ದಾರೆ. ಆದರೆ, ಗೋ ರಕ್ಷಣೆ ಮಾಡುತ್ತಿದ್ದ ಶಿವಕುಮಾರ ವಿರುದ್ಧ ಸಂಚು ನಡೆಸಿ ಕೊಲೆ ಮಾಡಲಾಗಿದೆ‘ ಎಂದು ಆರೋಪಿಸಿದರು.