ಚಿಕನಳ್ಳಿ ಗ್ರಾಮದ ಬಳಿ ಇರುವ ಹಿರೇ ಹಳ್ಳಕ್ಕೆ ಈ ಸೇತುವೆ ನಿರ್ಮಿಸಲಾಗಿತ್ತು. ಆದರೆ, ಕಳೆದ ಒಂದು ವಾರದಿಂದ ಸುರಿದ ಅಪಾರ ಮಳೆಯಿಂದಾಗಿ ಈ ಸೇತುವೆ ಕೊಚ್ಚಿಹೋಗಿದೆ. ದ್ವಿಚಕ್ರ ವಾಹನ ಸೇರಿದಂತೆ ಯಾವುದೇ ವಾಹನಗಳ ಸಂಚಾರಕ್ಕೂ ತೊಂದರೆ ಪಡುವಂತಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ಜನರು ತೊಂದರೆ ಪಡುವಂತಾಗಿದೆ. ತಾತ್ಕಾಲಿಕವಾಗಿ ಈ ಸೇತುವೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಶಾಶ್ವತ ಸುಸಜ್ಜಿತ ಸೇತುವೆ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದು ಶಂಕರ ಜಾಧವ, ಮೌನೇಶ ಪೂಜಾರಿ, ಸಾಹೇಬಲಾಲ, ಬಸಯ್ಯ ಮುತ್ಯಾ ನಂದಿಕೋಲ ಒತ್ತಾಯಿಸಿದ್ದಾರೆ.