ಗುರುಮಠಕಲ್: ವಚನ ಸಾಹಿತ್ಯಕ್ಕೆ ದೇವರ ದಾಸಿಮಯ್ಯ ಅವರು ಭದ್ರವಾದಬುನಾದಿ ಹಾಕಿದರು ಎಂದು ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ ಹೇಳಿದರು.
ಇಲ್ಲಿನ ಪುರಸಭೆ ಆವರಣದಲ್ಲಿ ನಡೆದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಬಸವಾದಿ ಶರಣರು ವಚನ ಚಳವಳಿ ಆರಂಭಿಸಿ, ಜನ ಸಾಮಾನ್ಯರಿಗೆ ಅರ್ಥ ಆಗುವಂತೆ ರಚಿಸಿದರು. ಈ ಮೂಲಕ ಸಾಮಾಜಿಕ ಸುಧಾರಣೆಗೆ ಯತ್ನಿಸಿದ್ದರು. ಇದಕ್ಕೆ ಅಡಿಪಾಯ ಹಾಕಿದ್ದವರು ದೇವರ ದಾಸಿಮಯ್ಯ ಎಂದರು.
ದಾಸಿಮಯ್ಯ ತಮ್ಮ ವಚನಗಳಲ್ಲಿ ತಾತ್ವಿಕ ಚಿಂತನೆಗಳ ಹೊಸ ಮಾರ್ಗವ ತೋರಿಸಿಕೊಟ್ಟ ದಾರ್ಶನಿಕ. ರಾಮನಾಥ ಅಂಕಿತನಾಮದೊಂದಿಗೆ ಅವರು ಬರೆದ ವಚನಗಳಲ್ಲಿ ಮೌಢ್ಯ, ಡಾಂಭಿಕತೆಯನ್ನು ಖಂಡಿಸಿ, ಸಾಮಾಜಿಕ ಕಳಕಳಿಯನ್ನು ಭಿತ್ತಿದ್ದರು ಎಂದು ತಿಳಿಸಿದರು.