<p><strong>ಯಾದಗಿರಿ:</strong> ದೀಪಾವಳಿ ಅಂಗವಾಗಿ ನಗರದ ಗಾಂಧಿ ವೃತ್ತದಲ್ಲಿ ವ್ಯಾಪಾರ ವಹಿವಾಟು ಶನಿವಾರ ಜೋರಾಗಿ ನಡೆಯಿತು. ಅಲ್ಲದೆ ನಗರದ ವಿವಿಧ ಪ್ರಮುಖ ವೃತ್ತಗಳಲ್ಲಿಯೂ ಹಣತೆ, ಹೂವು, ಹಣ್ಣು ವ್ಯಾಪಾರ ಭರ್ಜರಿಯಾಗಿ ನಡೆಯಿತು.</p>.<p>ಹಬ್ಬಕ್ಕೆ ಬೇಕಾಗಿರುವ ಸಾಮಗ್ರಿಗೆ ಗಣನೀಯವಾಗಿ ಬೆಲೆ ಏರಿಕೆಯಾಗಿದ್ದು, ಇದನ್ನು ಲೆಕ್ಕಿಸದೆ ಗ್ರಾಹಕರು ಖರೀದಿಯಲ್ಲಿ ತೊಡಗಿಸಿಕೊಂಡಿದ್ದರು.</p>.<p>ಭಾನುವಾರ ದೀಪಾವಳಿ ಅಮ್ಯಾವಾಸೆ ಇದ್ದು, ಪೂಜೆಗಾಗಿ ಶನಿವಾರವೂ ಭರ್ಜರಿ ಖರೀದಿ ನಡೆದಿತ್ತು. ಗಾಂಧಿ ವೃತ್ತದಲ್ಲಿ ಕೋವಿಡ್ ನಿಯಮ ಗಾಳಿಗೆ ತೂರಿ, ಪರಸ್ಪರ ಅಂತರ ಮರೆತು ಖರೀದಿಯಲ್ಲಿ ಗ್ರಾಹಕರು, ವ್ಯಾಪಾರಿಗಳು ತೊಡಗಿಸಿಕೊಂಡಿದ್ದರು. ಬಹುತೇಕ ಜನ ಮಾಸ್ಕ್ ಧರಿಸಿರಲಿಲ್ಲ.</p>.<p class="Subhead">ಸಂಚಾರ ದಟ್ಟಣೆ: ಗಾಂಧಿ ವೃತ್ತದಿಂದ ಮಹಾತ್ಮಗಾಂಧಿ ಮಾರುಕಟ್ಟೆವರೆಗೆ ಸಂಚಾರ ದಟ್ಟಣೆ ಉಂಟಾಗಿತ್ತು. ದ್ವಿಚಕ್ರ ವಾಹನಗಳನ್ನುಎಲ್ಲೆಂದರೆಲ್ಲೆ ನಿಲ್ಲಿಸಿದ್ದರಿಂದ ವ್ಯಾಪಾರಿಗಳು, ಗ್ರಾಹಕರು ಪರದಾಡಿದರು.</p>.<p class="Subhead">ಚೌಕಾಶಿಗೆ ಇಳಿದ ಗ್ರಾಹಕರು: ಹಬ್ಬದ ಅಂಗವಾಗಿ ಅಗತ್ಯ ವಸ್ತು ಸೇರಿದಂತೆ ಪೂಜೆ ಸಾಮಗ್ರಿಗಳು ಬೆಲೆ ಏರಿಕೆಯಾಗಿದ್ದವು. ಪ್ರಮುಖವಾಗಿ ಹೂವು, ಹಣ್ಣು, ಬಾಳೆ ದಿಂಡು, ಹಣತೆ ಖರೀದಿಸುವವರು ಚೌಕಾಶಿಗೆ ಇಳಿದಿದ್ದರು. ಬೆಲೆ ಕಡಿಮೆ ಮಾಡುವಂತೆ ಗ್ರಾಹಕರು ವ್ಯಾಪಾರಿಗಳಿಗೆ ದುಂಬಾಲು ಬೀಳುವುದು ಕಂಡು ಬಂತು.</p>.<p class="Subhead">ಹೂ, ಕಾಯಿಗೆ ಬೇಡಿಕೆ: ಹೂವಿಗೆ ತುಂಬಾ ಬೇಡಿಕೆ ಬಂದಿದೆ. ಅದರಲ್ಲೂ ಚೆಂಡು ಹೂವು ಕೆ.ಜಿಗೆ ₹200ಗೆ ಮಾರಾಟವಾಗುತ್ತಿದೆ. ಶುಕ್ರವಾರ ಇದೇ ಹೂವು ₹150ಗೆ ಕೆ.ಜಿ ಇತ್ತು. ಭಾನುವಾರ ಮತ್ತಷ್ಟು ಬೆಲೆ ಹೆಚ್ಚಾಗುವ ಸಂಭವವಿದೆ ಎಂದು ವ್ಯಾಪಾರಿ ಮಹಮ್ಮದ್ ಖಾಜಾ ತಿಳಿಸಿದರು.</p>.<p>ಮಲ್ಲಿಗೆ ಹೂವು ಕೆ.ಜಿ ₹1,200 ಇದ್ದು, ₹40ರಿಂದ ₹50ಗೆ ಒಂದು ಮೊಳ ಇದೆ.</p>.<p>ತೆಂಗಿನಕಾಯಿಗೂ ಹೆಚ್ಚಿನ ಬೇಡಿಕೆ ಇದೆ. ಸಣ್ಣ ಗಾತ್ರದ ಕಾಯಿಗೆ ₹20 ಇದ್ದು, ಗ್ರಾಹಕರು ಖರೀದಿಗೆ ಮುಗಿ ಬಿದ್ದಿದ್ದರು. ಬಾಳೆ ದಿಂಡು ಅನ್ನು ಗಾಂಧಿ ವೃತ್ತದ ಸುತ್ತಮುತ್ತ ವ್ಯಾಪಾರಕ್ಕೆ ಇಡಲಾಗಿತ್ತು. ಸಣ್ಣಗಾತ್ರದ ತೆಂಗಿನಕಾಯಿ ₹70, 50ಗೆ ಒಂದು ಮಾರಾಟವಾದವು. ತೆಂಗಿನ ಗರಿ ಜೋಡಿಗೆ ₹200 ರಂತೆ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದರು. ಮಾವಿನ ಎಲೆ ಎರಡು ಚಿಕ್ಕ ಕೊಂಬುಗಳಿಗೆ ₹20 ಜೋಡಿಯಂತೆ ಮಾರಾಟ ಮಾಡುತ್ತಿದ್ದರು.ಬಾಳೆಹಣ್ಣು ಡಜನ್ಗೆ ₹40 ದರ ಇದೆ.</p>.<p>ನಗರದ ಸುಭಾಷ ಚಂದ್ರ ಬೋಸ್ ವೃತ್ತದ ಸಮೀಪದ ಬಾಳೆ ದಿಂಡು ಹಾಗೂ ತೆಂಗಿನ ಗರಿಗಳನ್ನು ಗುಡ್ಡೆಹಾಕಿ ವ್ಯಾಪಾರಕ್ಕೆ ಇಡಲಾಗಿತ್ತು.</p>.<p class="Subhead">ಸಿಹಿ ತಿನಿಸಿಗೂ ಬೇಡಿಕೆ: ಹಬ್ಬದ ಅಂಗವಾಗಿ ಸಿಹಿ ತಿನಿಸಿಗೂ ಬೇಡಿಕೆ ಹೆಚ್ಚಾಗಿದೆ. ಹೆಚ್ಚಾಗಿ ಪೇಡಾ ಮಾರಾಟವಾಗುತ್ತಿದ್ದು, ಕೆ.ಜಿಗೆ ₹400 ದರ ಇದೆ. ಇದರ ಜೊತೆಗೆ ಜೀಲೆಬಿಯೂ ಮಾರಾಟವಾಗುತ್ತಿದೆ. ಬೂಂದಿ ₹100 ಕೆ.ಜಿ, ಕಾರಾ ₹100 ಕೆ.ಜಿ ಇದೆ. ಖಾರಾ ಪದಾರ್ಥ ₹240ಗೆ ಕೆ.ಜಿ ಇದೆ.</p>.<p class="Subhead">***</p>.<p class="Subhead">ಚೆಂಡೂ ಹೂವು ನೆರೆಯ ಕಲಬುರ್ಗಿ, ವಿಜಯಪುರದಿಂದ ತಂದಿದ್ದೇವೆ. ದಿನದಿಂದ ದಿನಕ್ಕೆ ದರದಲ್ಲಿ ಏರಿಕೆಯಾಗುತ್ತಿದೆ<br />ಮಹಮದ್ ಖಾಜಾ, ಹೂವಿನ ವ್ಯಾಪಾರಿ</p>.<p class="Subhead">***</p>.<p class="Subhead">ನಿನ್ನೆ, ಮೊನ್ನೆಗಿಂತ ಶನಿವಾರ ವ್ಯಾಪಾರ ಚೆನ್ನಾಗಿದೆ. ಗ್ರಾಹಕರು ಮಣ್ಣಿನ ಹಣತೆ ತೆಗೆದುಕೊಂಡು ಹೋಗುತ್ತಿದ್ದಾರೆ ಮಹಾದೇವಮ್ಮ, ಹಣತೆ ವ್ಯಾಪಾರಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ದೀಪಾವಳಿ ಅಂಗವಾಗಿ ನಗರದ ಗಾಂಧಿ ವೃತ್ತದಲ್ಲಿ ವ್ಯಾಪಾರ ವಹಿವಾಟು ಶನಿವಾರ ಜೋರಾಗಿ ನಡೆಯಿತು. ಅಲ್ಲದೆ ನಗರದ ವಿವಿಧ ಪ್ರಮುಖ ವೃತ್ತಗಳಲ್ಲಿಯೂ ಹಣತೆ, ಹೂವು, ಹಣ್ಣು ವ್ಯಾಪಾರ ಭರ್ಜರಿಯಾಗಿ ನಡೆಯಿತು.</p>.<p>ಹಬ್ಬಕ್ಕೆ ಬೇಕಾಗಿರುವ ಸಾಮಗ್ರಿಗೆ ಗಣನೀಯವಾಗಿ ಬೆಲೆ ಏರಿಕೆಯಾಗಿದ್ದು, ಇದನ್ನು ಲೆಕ್ಕಿಸದೆ ಗ್ರಾಹಕರು ಖರೀದಿಯಲ್ಲಿ ತೊಡಗಿಸಿಕೊಂಡಿದ್ದರು.</p>.<p>ಭಾನುವಾರ ದೀಪಾವಳಿ ಅಮ್ಯಾವಾಸೆ ಇದ್ದು, ಪೂಜೆಗಾಗಿ ಶನಿವಾರವೂ ಭರ್ಜರಿ ಖರೀದಿ ನಡೆದಿತ್ತು. ಗಾಂಧಿ ವೃತ್ತದಲ್ಲಿ ಕೋವಿಡ್ ನಿಯಮ ಗಾಳಿಗೆ ತೂರಿ, ಪರಸ್ಪರ ಅಂತರ ಮರೆತು ಖರೀದಿಯಲ್ಲಿ ಗ್ರಾಹಕರು, ವ್ಯಾಪಾರಿಗಳು ತೊಡಗಿಸಿಕೊಂಡಿದ್ದರು. ಬಹುತೇಕ ಜನ ಮಾಸ್ಕ್ ಧರಿಸಿರಲಿಲ್ಲ.</p>.<p class="Subhead">ಸಂಚಾರ ದಟ್ಟಣೆ: ಗಾಂಧಿ ವೃತ್ತದಿಂದ ಮಹಾತ್ಮಗಾಂಧಿ ಮಾರುಕಟ್ಟೆವರೆಗೆ ಸಂಚಾರ ದಟ್ಟಣೆ ಉಂಟಾಗಿತ್ತು. ದ್ವಿಚಕ್ರ ವಾಹನಗಳನ್ನುಎಲ್ಲೆಂದರೆಲ್ಲೆ ನಿಲ್ಲಿಸಿದ್ದರಿಂದ ವ್ಯಾಪಾರಿಗಳು, ಗ್ರಾಹಕರು ಪರದಾಡಿದರು.</p>.<p class="Subhead">ಚೌಕಾಶಿಗೆ ಇಳಿದ ಗ್ರಾಹಕರು: ಹಬ್ಬದ ಅಂಗವಾಗಿ ಅಗತ್ಯ ವಸ್ತು ಸೇರಿದಂತೆ ಪೂಜೆ ಸಾಮಗ್ರಿಗಳು ಬೆಲೆ ಏರಿಕೆಯಾಗಿದ್ದವು. ಪ್ರಮುಖವಾಗಿ ಹೂವು, ಹಣ್ಣು, ಬಾಳೆ ದಿಂಡು, ಹಣತೆ ಖರೀದಿಸುವವರು ಚೌಕಾಶಿಗೆ ಇಳಿದಿದ್ದರು. ಬೆಲೆ ಕಡಿಮೆ ಮಾಡುವಂತೆ ಗ್ರಾಹಕರು ವ್ಯಾಪಾರಿಗಳಿಗೆ ದುಂಬಾಲು ಬೀಳುವುದು ಕಂಡು ಬಂತು.</p>.<p class="Subhead">ಹೂ, ಕಾಯಿಗೆ ಬೇಡಿಕೆ: ಹೂವಿಗೆ ತುಂಬಾ ಬೇಡಿಕೆ ಬಂದಿದೆ. ಅದರಲ್ಲೂ ಚೆಂಡು ಹೂವು ಕೆ.ಜಿಗೆ ₹200ಗೆ ಮಾರಾಟವಾಗುತ್ತಿದೆ. ಶುಕ್ರವಾರ ಇದೇ ಹೂವು ₹150ಗೆ ಕೆ.ಜಿ ಇತ್ತು. ಭಾನುವಾರ ಮತ್ತಷ್ಟು ಬೆಲೆ ಹೆಚ್ಚಾಗುವ ಸಂಭವವಿದೆ ಎಂದು ವ್ಯಾಪಾರಿ ಮಹಮ್ಮದ್ ಖಾಜಾ ತಿಳಿಸಿದರು.</p>.<p>ಮಲ್ಲಿಗೆ ಹೂವು ಕೆ.ಜಿ ₹1,200 ಇದ್ದು, ₹40ರಿಂದ ₹50ಗೆ ಒಂದು ಮೊಳ ಇದೆ.</p>.<p>ತೆಂಗಿನಕಾಯಿಗೂ ಹೆಚ್ಚಿನ ಬೇಡಿಕೆ ಇದೆ. ಸಣ್ಣ ಗಾತ್ರದ ಕಾಯಿಗೆ ₹20 ಇದ್ದು, ಗ್ರಾಹಕರು ಖರೀದಿಗೆ ಮುಗಿ ಬಿದ್ದಿದ್ದರು. ಬಾಳೆ ದಿಂಡು ಅನ್ನು ಗಾಂಧಿ ವೃತ್ತದ ಸುತ್ತಮುತ್ತ ವ್ಯಾಪಾರಕ್ಕೆ ಇಡಲಾಗಿತ್ತು. ಸಣ್ಣಗಾತ್ರದ ತೆಂಗಿನಕಾಯಿ ₹70, 50ಗೆ ಒಂದು ಮಾರಾಟವಾದವು. ತೆಂಗಿನ ಗರಿ ಜೋಡಿಗೆ ₹200 ರಂತೆ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದರು. ಮಾವಿನ ಎಲೆ ಎರಡು ಚಿಕ್ಕ ಕೊಂಬುಗಳಿಗೆ ₹20 ಜೋಡಿಯಂತೆ ಮಾರಾಟ ಮಾಡುತ್ತಿದ್ದರು.ಬಾಳೆಹಣ್ಣು ಡಜನ್ಗೆ ₹40 ದರ ಇದೆ.</p>.<p>ನಗರದ ಸುಭಾಷ ಚಂದ್ರ ಬೋಸ್ ವೃತ್ತದ ಸಮೀಪದ ಬಾಳೆ ದಿಂಡು ಹಾಗೂ ತೆಂಗಿನ ಗರಿಗಳನ್ನು ಗುಡ್ಡೆಹಾಕಿ ವ್ಯಾಪಾರಕ್ಕೆ ಇಡಲಾಗಿತ್ತು.</p>.<p class="Subhead">ಸಿಹಿ ತಿನಿಸಿಗೂ ಬೇಡಿಕೆ: ಹಬ್ಬದ ಅಂಗವಾಗಿ ಸಿಹಿ ತಿನಿಸಿಗೂ ಬೇಡಿಕೆ ಹೆಚ್ಚಾಗಿದೆ. ಹೆಚ್ಚಾಗಿ ಪೇಡಾ ಮಾರಾಟವಾಗುತ್ತಿದ್ದು, ಕೆ.ಜಿಗೆ ₹400 ದರ ಇದೆ. ಇದರ ಜೊತೆಗೆ ಜೀಲೆಬಿಯೂ ಮಾರಾಟವಾಗುತ್ತಿದೆ. ಬೂಂದಿ ₹100 ಕೆ.ಜಿ, ಕಾರಾ ₹100 ಕೆ.ಜಿ ಇದೆ. ಖಾರಾ ಪದಾರ್ಥ ₹240ಗೆ ಕೆ.ಜಿ ಇದೆ.</p>.<p class="Subhead">***</p>.<p class="Subhead">ಚೆಂಡೂ ಹೂವು ನೆರೆಯ ಕಲಬುರ್ಗಿ, ವಿಜಯಪುರದಿಂದ ತಂದಿದ್ದೇವೆ. ದಿನದಿಂದ ದಿನಕ್ಕೆ ದರದಲ್ಲಿ ಏರಿಕೆಯಾಗುತ್ತಿದೆ<br />ಮಹಮದ್ ಖಾಜಾ, ಹೂವಿನ ವ್ಯಾಪಾರಿ</p>.<p class="Subhead">***</p>.<p class="Subhead">ನಿನ್ನೆ, ಮೊನ್ನೆಗಿಂತ ಶನಿವಾರ ವ್ಯಾಪಾರ ಚೆನ್ನಾಗಿದೆ. ಗ್ರಾಹಕರು ಮಣ್ಣಿನ ಹಣತೆ ತೆಗೆದುಕೊಂಡು ಹೋಗುತ್ತಿದ್ದಾರೆ ಮಹಾದೇವಮ್ಮ, ಹಣತೆ ವ್ಯಾಪಾರಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>