<p>ಶಹಾಪುರ: ಕಳೆದ ಎರಡು ವರ್ಷ ಕೋವಿಡ್ ಕಾರಣದಿಂದ ಹಬ್ಬದ ಕಳೆಯನ್ನು ನುಂಗಿತ್ತು. ಪ್ರಸಕ್ತ ವರ್ಷ ಮುಸ್ಲಿಂ ಸಮುದಾಯದವರು ಈದ್ ಉಲ್ ಫಿತ್ರ್ ಅನ್ನು ಸಂಭ್ರಮದಿಂದ ಆಚರಿಸಿದರು.</p>.<p>ಬೆಳಿಗ್ಗೆ ನಗರದ ಈದ್ಗಾ ಮೈದಾನಕ್ಕೆ ತೆರಳಿದ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಮಾಡಿ ನಂತರ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಅದರಲ್ಲಿ ಮುಸ್ಲಿಂ ಸಮುದಾಯದ ಮನೆಗಳಿಗೆ ಹಿಂದೂಗಳು ಮನೆಗೆ ತೆರಳಿ ಸುರಕುರುಮಾ ಸವಿದರು.</p>.<p>ಅದರಲ್ಲಿ ಪ್ರಸಕ್ತ ವರ್ಷ ಬಸವ ಜಯಂತಿಯು ಒಂದೇ ದಿನ ಆಗಮಿಸಿದ್ದರಿಂದ 2 ಸಮುದಾಯಗಳಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಯ ಭರವಸೆಯ ಆಲಿಂಗನವು ಕಾಣಿಸುತ್ತಿತ್ತು. ಬೆಳಿಗ್ಗೆ ಮುಸ್ಲಿಮರು ಹಬ್ಬ ಆಚರಿಸಿದರೆ ಸಂಜೆ ಹಿಂದೂ ಸಮಾಜದ ಬಸವಣ್ಣನವರ ಭಾವಚಿತ್ರದ ಮೆರವಣಿಗೆ ಎಲ್ಲೆಡೆ ಕಾಣಿಸಿತು.</p>.<p>ಮುಖಂಡರಾದ ಗೌಸ ಮೈನುದ್ದೀನ ಖಾಜಿ, ಸೈಯಾದ್ದುದ್ದೀನ್ ಖಾದ್ರಿ, ಎಮ್.ಡಿ ಸಲೀಂ ಸಂಗ್ರಾಂ, ಸಯ್ಯದ ಖಾಲಿದ, ಯೂಸೂಫ್ ಸಿದ್ದಕಿ, ನಿಜಾಮುದ್ದಿನ ಜಮಖಂಡಿ,ಸಯ್ಯದ ಇಬ್ರಾಹಿಂಸಾಬ್ ಜಮದಾರ, ಮಹ್ಮದ ಗೌಸ್ ಗೋಗಿ, ನಬಿಸಾಬ್ ಶಿರವಾಳ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಹಾಪುರ: ಕಳೆದ ಎರಡು ವರ್ಷ ಕೋವಿಡ್ ಕಾರಣದಿಂದ ಹಬ್ಬದ ಕಳೆಯನ್ನು ನುಂಗಿತ್ತು. ಪ್ರಸಕ್ತ ವರ್ಷ ಮುಸ್ಲಿಂ ಸಮುದಾಯದವರು ಈದ್ ಉಲ್ ಫಿತ್ರ್ ಅನ್ನು ಸಂಭ್ರಮದಿಂದ ಆಚರಿಸಿದರು.</p>.<p>ಬೆಳಿಗ್ಗೆ ನಗರದ ಈದ್ಗಾ ಮೈದಾನಕ್ಕೆ ತೆರಳಿದ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಮಾಡಿ ನಂತರ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಅದರಲ್ಲಿ ಮುಸ್ಲಿಂ ಸಮುದಾಯದ ಮನೆಗಳಿಗೆ ಹಿಂದೂಗಳು ಮನೆಗೆ ತೆರಳಿ ಸುರಕುರುಮಾ ಸವಿದರು.</p>.<p>ಅದರಲ್ಲಿ ಪ್ರಸಕ್ತ ವರ್ಷ ಬಸವ ಜಯಂತಿಯು ಒಂದೇ ದಿನ ಆಗಮಿಸಿದ್ದರಿಂದ 2 ಸಮುದಾಯಗಳಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಯ ಭರವಸೆಯ ಆಲಿಂಗನವು ಕಾಣಿಸುತ್ತಿತ್ತು. ಬೆಳಿಗ್ಗೆ ಮುಸ್ಲಿಮರು ಹಬ್ಬ ಆಚರಿಸಿದರೆ ಸಂಜೆ ಹಿಂದೂ ಸಮಾಜದ ಬಸವಣ್ಣನವರ ಭಾವಚಿತ್ರದ ಮೆರವಣಿಗೆ ಎಲ್ಲೆಡೆ ಕಾಣಿಸಿತು.</p>.<p>ಮುಖಂಡರಾದ ಗೌಸ ಮೈನುದ್ದೀನ ಖಾಜಿ, ಸೈಯಾದ್ದುದ್ದೀನ್ ಖಾದ್ರಿ, ಎಮ್.ಡಿ ಸಲೀಂ ಸಂಗ್ರಾಂ, ಸಯ್ಯದ ಖಾಲಿದ, ಯೂಸೂಫ್ ಸಿದ್ದಕಿ, ನಿಜಾಮುದ್ದಿನ ಜಮಖಂಡಿ,ಸಯ್ಯದ ಇಬ್ರಾಹಿಂಸಾಬ್ ಜಮದಾರ, ಮಹ್ಮದ ಗೌಸ್ ಗೋಗಿ, ನಬಿಸಾಬ್ ಶಿರವಾಳ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>