ರೈತಾಪಿ ವರ್ಗ ಕುಟುಂಬ ಮತ್ತು ಸ್ನೇಹಿತರ ಜೊತೆಗೂಡಿ ತಮ್ಮ ಹೊಲಗಳಿಗೆ ತೆರಳಿ ಪಾಂಡವರ ರೂಪದಲ್ಲಿ 5 ಕಲ್ಲುಗಳನ್ನು ಬನ್ನಿ ಮರದ ಪಕ್ಕ ಇಟ್ಟು ಪೂಜೆ ಸಲ್ಲಿಸಿದರು. ಭೂಮಿ ತಾಯಿಗೆ ಸೀರೆ ಅರ್ಪಿಸಿ ತಾವು ಮನೆಯಿಂದ ತೆಗೆದುಕೊಂಡ ಬಂದಿದ್ದ ಆಹಾರ ಪದಾರ್ಥಗಳಾದ ಸಜ್ಜೆ ರೊಟ್ಟಿ, ಶೇಂಗಾ ಹೋಳಿಗೆ, ಕಡಬು, ಬದನೆಕಾಯಿ, ಪುಂಡೆಪಲ್ಲೆ ಅನ್ನ, ಸಾರು, ಒಂದೆ ತಟ್ಟೆಯಲ್ಲಿ ಕಲುಕಿ ಜಮೀನಿನ ಸುತ್ತೆಲ್ಲಾ ಚರಗಾ ಚೆಲ್ಲಿ ಫಸಲು ಚನ್ನಾಗಿ ಇರಲಿ ಎಂದು ಪ್ರಾರ್ಥಿಸಿದರು.