ಪಟ್ಟಣದಲ್ಲಿ ಬಾಣಂತಿಯರಿಗೆ ತೊಂದರೆ, ಗರ್ಭವತಿಯರ ಹಾರೈಕೆ, ಹೆರಿಗೆಗಾಗಿ ಯಾವಾಗ ಕರೆ ಮಾಡಿದರೂ ತಮ್ಮ ಆಟೊದಲ್ಲಿ ಉಚಿತ ಸೇವೆ ನೀಡುತ್ತಾರೆ. ‘ಬಡತನ, ಸಿರಿತನ ಬಂದುಹೋಗುತ್ತೆ. ಹಣ ಕಳೆದರೆ ಮತ್ತೆ ಸಂಪಾದಿಸಬಹುದು. ಆದರೆ, ಜೀವ ಹೋದರೆ ಮತ್ತೆ ಬರುವುದಿಲ್ಲ. ಸಾವು-ಬದುಕಿನ ಸಂದರ್ಭದಲ್ಲೂ ಹಣದ ಕುರಿತು ಚಿಂತಿಸುವುದು ಹೇಗೆ? ಜೀವ ಉಳಿದರೆ ಸಾಕು’ ಎನ್ನುತ್ತಾರೆ ನಾರಾಯಣ.