<p><strong>ಶಹಾಪುರ (ಯಾದಗಿರಿ ಜಿಲ್ಲೆ):</strong> ನಗರದ ಸಾರ್ವಜನಿಕ ಆಸ್ಪತ್ರೆಗೆ ತಡೆರಹಿತ ವಿದ್ಯುತ್ ಪೂರೈಕೆಯ ಬ್ಯಾಕ್ಅಪ್ ಜನರೇಟರ್ ಬಳಕೆಯಲ್ಲಿ ನೈಜ ವಿದ್ಯುತ್ ಅವಧಿ ಕಡಿತಕ್ಕಿಂತ 340 ಗಂಟೆ ಹೆಚ್ಚುವರಿಯಾಗಿ ನಮೂದಿಸಿ ಹಣ ದುರ್ಬಳಕೆ ಮಾಡಿಕೊಂಡಿದ್ದು ಆರ್ಟಿಐ ಮಾಹಿತಿಯಿಂದ ಗೊತ್ತಾಗಿದೆ.</p>.<p>ಮಾಹಿತಿ ಹಕ್ಕು (ಆರ್ಟಿಐ) ಕಾರ್ಯಕರ್ತ ನಬಿ ಪಟೇಲ್ ಅವರು ಆಸ್ಪತ್ರೆಗೆ ವಿದ್ಯುತ್ ಕಡಿತ ಮಾಡಿದ್ದ ಅವಧಿಯ ಮಾಹಿತಿ ಕೋರಿ ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಗೆ (ಜೆಸ್ಕಾಂ) ಅರ್ಜಿ ಸಲ್ಲಿಸಿದ್ದರು.</p>.<p>ಆಸ್ಪತ್ರೆಗೆ 2025ರ ಫೆಬ್ರುವರಿ 1ರಿಂದ ಅಕ್ಟೋಬರ್ 31ರ ನಡುವೆ (9 ತಿಂಗಳು) 182 ಗಂಟೆ ವಿದ್ಯುತ್ ಸ್ಥಗಿತಗೊಂಡಿದ್ದಾಗಿ ಜೆಸ್ಕಾಂ ಮಾಹಿತಿ ನೀಡಿದೆ. ಆದರೆ, ಸರ್ಕಾರಿ ಅಸ್ಪತ್ರೆಯಲ್ಲಿನ ಲಾಗ್ ಬುಕ್ನಲ್ಲಿ ಅದೇ ಅವಧಿಯಲ್ಲಿ 522 ಗಂಟೆ ವಿದ್ಯುತ್ ಸ್ಥಗಿತಗೊಂಡಿದ್ದಾಗಿ ನಮೂದಿಸಲಾಗಿದೆ.</p>.<p>‘ವಿದ್ಯುತ್ ಪೂರೈಕೆಯಲ್ಲಿ ಜೆಸ್ಕಾಂ 182 ಗಂಟೆ ವ್ಯತ್ಯಯ ಮಾಡಿದ್ದರೆ, ಆಸ್ಪತ್ರೆಯ ಕೆಲ ಅಧಿಕಾರಿಗಳು 340 ಗಂಟೆಗಳನ್ನು ಸೇರ್ಪಡೆ ಮಾಡಿ 522 ಗಂಟೆಗಳ ತಪ್ಪು ದಾಖಲೆ ನಮೂದಿಸಿದ್ದಾರೆ. ಹೆಚ್ಚುವರಿ ಅವಧಿಯ ಜನರೇಟರ್ ಚಾಲನೆಗಾಗಿ 4,420 ಲೀಟರ್ ಡಿಸೇಲ್ ಬಳಸಿದ್ದಾಗಿ ನಮೂದಿಸಿ ₹4.4 ಲಕ್ಷ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಅರ್ಜಿದಾರ ನಬಿ ಪಟೇಲ್ ದೂರಿದ್ದಾರೆ. </p>.<p>‘ಖಾಸಗಿ ಪೆಟ್ರೋಲ್ ಬಂಕ್ನಿಂದ ಡೀಸೆಲ್ ಖರೀದಿಸಿದ ಬಗ್ಗೆ ಕೈ ಬರಹದಿಂದ ಪಡೆದ ರಸೀದಿಯನ್ನು ಕಡತದಲ್ಲಿ ಸೇರ್ಪಡೆ ಮಾಡಿರುವುದು ಸಹ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ’ ಎನ್ನುತ್ತಾರೆ ನಬಿ.</p>.<p>‘ಈ ಹಿಂದೆ ಆಸ್ಪತ್ರೆಯ ತಾಲ್ಲೂಕು ಆಡಳಿತಾಧಿಕಾರಿಯಾಗಿದ್ದ ಡಾ.ಪದ್ಮಾನಂದ ಗಾಯಕವಾಡ ಹಾಗೂ ಡಾ.ಪ್ರಭುಲಿಂಗ ಮಾನಕರ್ (ನಾಲ್ಕು ದಿನ ಸೇವೆ) ಅವರ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಸಾರ್ವಜನಿಕರ ಹಣ ದುರ್ಬಳಕೆಯಾಗಿದ್ದು, ಈ ಬಗ್ಗೆ ಲೋಕಾಯುಕ್ತರು ಸಮಗ್ರ ತನಿಖೆ ನಡೆಸಬೇಕು’ ಎನ್ನುತ್ತಾರೆ ನಗರದ ನಿವಾಸಿ ಮಾನಪ್ಪ ಹಡಪದ.</p>.<p>ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಾಲ್ಲೂಕು ಆಸ್ಪತ್ರೆಯ ಈ ಹಿಂದಿನ ಆಡಳಿತಾಧಿಕಾರಿ ಡಾ.ಪದ್ಮಾನಂದ ಗಾಯಕವಾಡ, ‘ಆಸ್ಪತ್ರೆಯಲ್ಲಿ ಎರಡು ಜನರೇಟರ್ಗಳಿದ್ದು, ದಾಖಲೆಯಲ್ಲಿ ಒಂದು ಜನರೇಟರ್ ಮಾತ್ರ ನಮೂದಿಸಲಾಗಿದೆ. ಮೂರು ದಿನ ವಿದ್ಯುತ್ ಸಂಪರ್ಕ ಸ್ಥಗಿತವಾಗಿತ್ತು. ಈ ಬಗ್ಗೆ ಡಿಎಚ್ಒ ಅವರಿಗೆ ಮಾಹಿತಿ ನೀಡಿರುವೆ’ ಎಂದರು.</p>.<div><blockquote>ಆರ್ಟಿಐನಡಿ ನೀಡಲಾದ ವಿದ್ಯುತ್ ಸಂಬಂಧಿ ಮಾಹಿತಿಯಲ್ಲಿನ ವ್ಯತ್ಯಾಸದ ಬಗ್ಗೆ ದೂರು ಬಂದಿದೆ. ಈ ಕುರಿತ ದಾಖಲೆಗಳನ್ನು ಪರಿಶೀಲನೆ ಮಾಡಲಾಗುವುದು </blockquote><span class="attribution">ಡಾ.ಯಲ್ಲಪ್ಪ ಹುಲಿಕಲ್, ಶಹಾಪುರ ತಾಲ್ಲೂಕು ಆಡಳಿತ ವೈದ್ಯಾಧಿಕಾರಿ</span></div>.<div><blockquote>ಡಿಸೇಲ್ ಬಳಕೆಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸಾರ್ವಜನಿಕ ಹಣ ದುರ್ಬಳಕೆ ಮಾಡಿಕೊಂಡ ವೈದ್ಯರ ವಿರುದ್ಧ ಕಾನೂನು ಕ್ರಮ ಕೈಕೊಳ್ಳಬೇಕು. </blockquote><span class="attribution">ನಬಿ ಪಟೇಲ್, ಆರ್ಟಿಐ ಅರ್ಜಿದಾರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಹಾಪುರ (ಯಾದಗಿರಿ ಜಿಲ್ಲೆ):</strong> ನಗರದ ಸಾರ್ವಜನಿಕ ಆಸ್ಪತ್ರೆಗೆ ತಡೆರಹಿತ ವಿದ್ಯುತ್ ಪೂರೈಕೆಯ ಬ್ಯಾಕ್ಅಪ್ ಜನರೇಟರ್ ಬಳಕೆಯಲ್ಲಿ ನೈಜ ವಿದ್ಯುತ್ ಅವಧಿ ಕಡಿತಕ್ಕಿಂತ 340 ಗಂಟೆ ಹೆಚ್ಚುವರಿಯಾಗಿ ನಮೂದಿಸಿ ಹಣ ದುರ್ಬಳಕೆ ಮಾಡಿಕೊಂಡಿದ್ದು ಆರ್ಟಿಐ ಮಾಹಿತಿಯಿಂದ ಗೊತ್ತಾಗಿದೆ.</p>.<p>ಮಾಹಿತಿ ಹಕ್ಕು (ಆರ್ಟಿಐ) ಕಾರ್ಯಕರ್ತ ನಬಿ ಪಟೇಲ್ ಅವರು ಆಸ್ಪತ್ರೆಗೆ ವಿದ್ಯುತ್ ಕಡಿತ ಮಾಡಿದ್ದ ಅವಧಿಯ ಮಾಹಿತಿ ಕೋರಿ ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಗೆ (ಜೆಸ್ಕಾಂ) ಅರ್ಜಿ ಸಲ್ಲಿಸಿದ್ದರು.</p>.<p>ಆಸ್ಪತ್ರೆಗೆ 2025ರ ಫೆಬ್ರುವರಿ 1ರಿಂದ ಅಕ್ಟೋಬರ್ 31ರ ನಡುವೆ (9 ತಿಂಗಳು) 182 ಗಂಟೆ ವಿದ್ಯುತ್ ಸ್ಥಗಿತಗೊಂಡಿದ್ದಾಗಿ ಜೆಸ್ಕಾಂ ಮಾಹಿತಿ ನೀಡಿದೆ. ಆದರೆ, ಸರ್ಕಾರಿ ಅಸ್ಪತ್ರೆಯಲ್ಲಿನ ಲಾಗ್ ಬುಕ್ನಲ್ಲಿ ಅದೇ ಅವಧಿಯಲ್ಲಿ 522 ಗಂಟೆ ವಿದ್ಯುತ್ ಸ್ಥಗಿತಗೊಂಡಿದ್ದಾಗಿ ನಮೂದಿಸಲಾಗಿದೆ.</p>.<p>‘ವಿದ್ಯುತ್ ಪೂರೈಕೆಯಲ್ಲಿ ಜೆಸ್ಕಾಂ 182 ಗಂಟೆ ವ್ಯತ್ಯಯ ಮಾಡಿದ್ದರೆ, ಆಸ್ಪತ್ರೆಯ ಕೆಲ ಅಧಿಕಾರಿಗಳು 340 ಗಂಟೆಗಳನ್ನು ಸೇರ್ಪಡೆ ಮಾಡಿ 522 ಗಂಟೆಗಳ ತಪ್ಪು ದಾಖಲೆ ನಮೂದಿಸಿದ್ದಾರೆ. ಹೆಚ್ಚುವರಿ ಅವಧಿಯ ಜನರೇಟರ್ ಚಾಲನೆಗಾಗಿ 4,420 ಲೀಟರ್ ಡಿಸೇಲ್ ಬಳಸಿದ್ದಾಗಿ ನಮೂದಿಸಿ ₹4.4 ಲಕ್ಷ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಅರ್ಜಿದಾರ ನಬಿ ಪಟೇಲ್ ದೂರಿದ್ದಾರೆ. </p>.<p>‘ಖಾಸಗಿ ಪೆಟ್ರೋಲ್ ಬಂಕ್ನಿಂದ ಡೀಸೆಲ್ ಖರೀದಿಸಿದ ಬಗ್ಗೆ ಕೈ ಬರಹದಿಂದ ಪಡೆದ ರಸೀದಿಯನ್ನು ಕಡತದಲ್ಲಿ ಸೇರ್ಪಡೆ ಮಾಡಿರುವುದು ಸಹ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ’ ಎನ್ನುತ್ತಾರೆ ನಬಿ.</p>.<p>‘ಈ ಹಿಂದೆ ಆಸ್ಪತ್ರೆಯ ತಾಲ್ಲೂಕು ಆಡಳಿತಾಧಿಕಾರಿಯಾಗಿದ್ದ ಡಾ.ಪದ್ಮಾನಂದ ಗಾಯಕವಾಡ ಹಾಗೂ ಡಾ.ಪ್ರಭುಲಿಂಗ ಮಾನಕರ್ (ನಾಲ್ಕು ದಿನ ಸೇವೆ) ಅವರ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಸಾರ್ವಜನಿಕರ ಹಣ ದುರ್ಬಳಕೆಯಾಗಿದ್ದು, ಈ ಬಗ್ಗೆ ಲೋಕಾಯುಕ್ತರು ಸಮಗ್ರ ತನಿಖೆ ನಡೆಸಬೇಕು’ ಎನ್ನುತ್ತಾರೆ ನಗರದ ನಿವಾಸಿ ಮಾನಪ್ಪ ಹಡಪದ.</p>.<p>ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಾಲ್ಲೂಕು ಆಸ್ಪತ್ರೆಯ ಈ ಹಿಂದಿನ ಆಡಳಿತಾಧಿಕಾರಿ ಡಾ.ಪದ್ಮಾನಂದ ಗಾಯಕವಾಡ, ‘ಆಸ್ಪತ್ರೆಯಲ್ಲಿ ಎರಡು ಜನರೇಟರ್ಗಳಿದ್ದು, ದಾಖಲೆಯಲ್ಲಿ ಒಂದು ಜನರೇಟರ್ ಮಾತ್ರ ನಮೂದಿಸಲಾಗಿದೆ. ಮೂರು ದಿನ ವಿದ್ಯುತ್ ಸಂಪರ್ಕ ಸ್ಥಗಿತವಾಗಿತ್ತು. ಈ ಬಗ್ಗೆ ಡಿಎಚ್ಒ ಅವರಿಗೆ ಮಾಹಿತಿ ನೀಡಿರುವೆ’ ಎಂದರು.</p>.<div><blockquote>ಆರ್ಟಿಐನಡಿ ನೀಡಲಾದ ವಿದ್ಯುತ್ ಸಂಬಂಧಿ ಮಾಹಿತಿಯಲ್ಲಿನ ವ್ಯತ್ಯಾಸದ ಬಗ್ಗೆ ದೂರು ಬಂದಿದೆ. ಈ ಕುರಿತ ದಾಖಲೆಗಳನ್ನು ಪರಿಶೀಲನೆ ಮಾಡಲಾಗುವುದು </blockquote><span class="attribution">ಡಾ.ಯಲ್ಲಪ್ಪ ಹುಲಿಕಲ್, ಶಹಾಪುರ ತಾಲ್ಲೂಕು ಆಡಳಿತ ವೈದ್ಯಾಧಿಕಾರಿ</span></div>.<div><blockquote>ಡಿಸೇಲ್ ಬಳಕೆಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸಾರ್ವಜನಿಕ ಹಣ ದುರ್ಬಳಕೆ ಮಾಡಿಕೊಂಡ ವೈದ್ಯರ ವಿರುದ್ಧ ಕಾನೂನು ಕ್ರಮ ಕೈಕೊಳ್ಳಬೇಕು. </blockquote><span class="attribution">ನಬಿ ಪಟೇಲ್, ಆರ್ಟಿಐ ಅರ್ಜಿದಾರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>