<p>ಯಾದಗಿರಿ: ವಡಗೇರಾ ತಾಲ್ಲೂಕಿನ ಜೋಳದಡಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಯೋಜನೆಯಡಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಿತು.</p>.<p>ತಹಶೀಲ್ದಾರ್ ಸುರೇಶ ಅಂಕಲಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಆಭಾ ಕಾರ್ಡ್ಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಆದರೆ, ಬಹಳಷ್ಟು ಜನರು ಇದರ ಬಗ್ಗೆ ಆಸಕ್ತಿ ತೊರದೆ ಕೆಲವೇ ಕೆಲವು ಜನರು ಮಾತ್ರ ಇಲ್ಲಿಯವರೆಗೆ ಕಾರ್ಡ್ಗಳನ್ನು ಪಡೆದುಕೊಂಡಿದ್ದಾರೆ.</p>.<p>ಪ್ರತಿಯೊಬ್ಬರು ಆಭಾ ಕಾರ್ಡ್ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.</p>.<p>ಕಾರ್ಯಕ್ರಮದಲ್ಲಿ ಒಟ್ಟು 55 ಅರ್ಜಿಗಳು ಸ್ವೀಕೃತಿಯಾಗಿದ್ದು, ಎಸ್ಎಸ್ವೈ7, ಪಿಎಚ್ಪಿ 1, ಪಹಣಿ ತಿದ್ದುಪಡಿ 13 ಸೇರಿ ಒಟ್ಟು 21 ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಪಡಿಸಲಾಗಿದೆ. ಬಾಕಿ 34 ಅರ್ಜಿಗಳು ಉಳಿದಿವೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ<br />ನೀಡಿದರು.</p>.<p>ಗ್ರೇಡ್-2 ತಹಶೀಲ್ದಾರ್ ಪ್ರಕಾಶ ಹೊಸಮನಿ, ಉಪ ತಹಶೀಲ್ದಾರ್ ಸಂಗಮೇಶ ದೇಸಾಯಿ, ಕಂದಾಯ ನಿರೀಕ್ಷಕರಾದ ಗಿರೀಶ ರಾಯಕೋಟಿ, ಸಿದ್ಧಯ್ಯಸ್ವಾಮಿ, ಗ್ರಾಮ ಲೆಕ್ಕಿಗರಾದ ಬಸವರಾಜ ಮೂಡಗಿ, ಬಸವರಾಜ ವಾಲೀಕಾರ, ಸಿದ್ದಣ್ಣಗೌಡ<br />ಸೇರಿದಂತೆ ಗ್ರಾಮಸ್ಥರು, ಅಧಿಕಾರಿಗಳು ಇದ್ದರು.</p>.<p class="Briefhead">24 ಅರ್ಜಿ ಸ್ವೀಕೃತ, 12 ವಿಲೇವಾರಿ</p>.<p>ಗುರುಮಠಕಲ್: ತಾಲ್ಲೂಕಿನ ಯಲಸತ್ತಿ ಗ್ರಾಮದಲ್ಲಿ ಶನಿವಾರ ಜರುಗಿದ ತಾಲ್ಲೂಕು ಮಟ್ಟದ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಒಟ್ಟು 24 ಅರ್ಜಿಗಳು ಸ್ವೀಕೃತವಾಗಿದ್ದು, 12 ಅರ್ಜಿಗಳನ್ನು ಸ್ಥಳದಲ್ಲೇಲೆ ವಿಲೇವಾರಿ ಮಾಡಲಾಗಿದೆ.</p>.<p>ಸಂಧ್ಯಾ ಸುರಕ್ಷಾ 8, ವಿಧವಾ ವೇತನ 2, ಅಂಗವಿಕ ವೇತನ 2, ಪಂಚಾಯತ್ ರಾಜ್ 3, ಶಿಕ್ಷಣ 1, ಜೆಸ್ಕಾಂ 1, ಭೂಮಿ ಕೇಂದ್ರ 1, ಸಿಡಿಪಿಒ 2, ಸಾರಿಗೆ ಸಂಸ್ಥೆ 1, ದೇವಸ್ಥಾನ 1, ಲೋಕೋಪಯೋಗಿ 2 ಸೇರಿ ಒಟ್ಟು 24 ಅರ್ಜಿಗಳು ಸ್ವೀಕರಿಸಿದ್ದು, ವಿವಿಧ ಪಿಂಚಣಿ ಯೋಜನೆಗಳ 12 ಅರ್ಜಿಗಳನ್ನು ವಿಲೇವಾರಿ ಮಾಡಿ ಫಲಾನುಭವಿಗಳಿಗೆ ವಿತರಿಸಲಾಗಿದೆ. ಉಳಿದ ಅರ್ಜಿಗಳನ್ನು ಸಂಬಧಿತ ಇಲಾಖೆಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದು ತಹಶೀಲ್ದಾರ್ ಶರಣಬಸವ ರಾಣಪ್ಪ ಭರವಸೆ ನೀಡಿದರು.</p>.<p>ಸಿಡಿಪಿಒ ವನಜಾಕ್ಷಿ ಬೆಂಡಗೇರಿ, ಕೃಷಿ ಅಧಿಕಾರಿ ಮಹಿಪಾಲರೆಡ್ಡಿ ತಮ್ಮ ಇಲಾಖೆಗಳಲ್ಲಿ ಸಿಗುವ ಸೌಲಭ್ಯಗಳು, ಯೋಜನೆಗಳು ಹಾಗೂ ಸದ್ಯ ಅವರುಗಳ ಗುರಿ ಕುರಿತು ಮಾಹಿತಿ ನೀಡಿದರು.</p>.<p>ಆರೋಗ್ಯ ಇಲಾಖೆಯ ಸಿಬ್ಬಂದಿ ಆನೆಕಾಲು ರೋಗದ ಕುರಿತು ಜಾಗೃತಿ ಮೂಡಿಸಿ ಮಾತ್ರೆ<br />ವಿತರಿಸಿದರು.</p>.<p>ಗ್ರೇಡ್-2 ತಹಶೀಲ್ದಾರ್ ನರಸಿಂಹಸ್ವಾಮಿ, ಉಪ ತಹಶೀಲ್ದಾರ್ ಬಸವರಾಜ ಸಜ್ಜನ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾ, ಉಪಾಧ್ಯಕ್ಷೆ ಮಾಣಿಕಮ್ಮ, ಕಂದಾಯ ನಿರೀಕ್ಷಕ ಭೀಮಸೇನರಾವ ಪಾಟೀಲ, ಪಿಡಿಒ ಶರಣಪ್ಪ ಮೈಲಾರಿ ಸೇರಿದಂತೆ ಜೆಸ್ಕಾಂ, ಆರೋಗ್ಯ ಅಧಿಕಾರಿಗಳು, ಗ್ರಾಮಲೆಕ್ಕಿಗರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯಾದಗಿರಿ: ವಡಗೇರಾ ತಾಲ್ಲೂಕಿನ ಜೋಳದಡಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಯೋಜನೆಯಡಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಿತು.</p>.<p>ತಹಶೀಲ್ದಾರ್ ಸುರೇಶ ಅಂಕಲಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಆಭಾ ಕಾರ್ಡ್ಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಆದರೆ, ಬಹಳಷ್ಟು ಜನರು ಇದರ ಬಗ್ಗೆ ಆಸಕ್ತಿ ತೊರದೆ ಕೆಲವೇ ಕೆಲವು ಜನರು ಮಾತ್ರ ಇಲ್ಲಿಯವರೆಗೆ ಕಾರ್ಡ್ಗಳನ್ನು ಪಡೆದುಕೊಂಡಿದ್ದಾರೆ.</p>.<p>ಪ್ರತಿಯೊಬ್ಬರು ಆಭಾ ಕಾರ್ಡ್ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.</p>.<p>ಕಾರ್ಯಕ್ರಮದಲ್ಲಿ ಒಟ್ಟು 55 ಅರ್ಜಿಗಳು ಸ್ವೀಕೃತಿಯಾಗಿದ್ದು, ಎಸ್ಎಸ್ವೈ7, ಪಿಎಚ್ಪಿ 1, ಪಹಣಿ ತಿದ್ದುಪಡಿ 13 ಸೇರಿ ಒಟ್ಟು 21 ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಪಡಿಸಲಾಗಿದೆ. ಬಾಕಿ 34 ಅರ್ಜಿಗಳು ಉಳಿದಿವೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ<br />ನೀಡಿದರು.</p>.<p>ಗ್ರೇಡ್-2 ತಹಶೀಲ್ದಾರ್ ಪ್ರಕಾಶ ಹೊಸಮನಿ, ಉಪ ತಹಶೀಲ್ದಾರ್ ಸಂಗಮೇಶ ದೇಸಾಯಿ, ಕಂದಾಯ ನಿರೀಕ್ಷಕರಾದ ಗಿರೀಶ ರಾಯಕೋಟಿ, ಸಿದ್ಧಯ್ಯಸ್ವಾಮಿ, ಗ್ರಾಮ ಲೆಕ್ಕಿಗರಾದ ಬಸವರಾಜ ಮೂಡಗಿ, ಬಸವರಾಜ ವಾಲೀಕಾರ, ಸಿದ್ದಣ್ಣಗೌಡ<br />ಸೇರಿದಂತೆ ಗ್ರಾಮಸ್ಥರು, ಅಧಿಕಾರಿಗಳು ಇದ್ದರು.</p>.<p class="Briefhead">24 ಅರ್ಜಿ ಸ್ವೀಕೃತ, 12 ವಿಲೇವಾರಿ</p>.<p>ಗುರುಮಠಕಲ್: ತಾಲ್ಲೂಕಿನ ಯಲಸತ್ತಿ ಗ್ರಾಮದಲ್ಲಿ ಶನಿವಾರ ಜರುಗಿದ ತಾಲ್ಲೂಕು ಮಟ್ಟದ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಒಟ್ಟು 24 ಅರ್ಜಿಗಳು ಸ್ವೀಕೃತವಾಗಿದ್ದು, 12 ಅರ್ಜಿಗಳನ್ನು ಸ್ಥಳದಲ್ಲೇಲೆ ವಿಲೇವಾರಿ ಮಾಡಲಾಗಿದೆ.</p>.<p>ಸಂಧ್ಯಾ ಸುರಕ್ಷಾ 8, ವಿಧವಾ ವೇತನ 2, ಅಂಗವಿಕ ವೇತನ 2, ಪಂಚಾಯತ್ ರಾಜ್ 3, ಶಿಕ್ಷಣ 1, ಜೆಸ್ಕಾಂ 1, ಭೂಮಿ ಕೇಂದ್ರ 1, ಸಿಡಿಪಿಒ 2, ಸಾರಿಗೆ ಸಂಸ್ಥೆ 1, ದೇವಸ್ಥಾನ 1, ಲೋಕೋಪಯೋಗಿ 2 ಸೇರಿ ಒಟ್ಟು 24 ಅರ್ಜಿಗಳು ಸ್ವೀಕರಿಸಿದ್ದು, ವಿವಿಧ ಪಿಂಚಣಿ ಯೋಜನೆಗಳ 12 ಅರ್ಜಿಗಳನ್ನು ವಿಲೇವಾರಿ ಮಾಡಿ ಫಲಾನುಭವಿಗಳಿಗೆ ವಿತರಿಸಲಾಗಿದೆ. ಉಳಿದ ಅರ್ಜಿಗಳನ್ನು ಸಂಬಧಿತ ಇಲಾಖೆಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದು ತಹಶೀಲ್ದಾರ್ ಶರಣಬಸವ ರಾಣಪ್ಪ ಭರವಸೆ ನೀಡಿದರು.</p>.<p>ಸಿಡಿಪಿಒ ವನಜಾಕ್ಷಿ ಬೆಂಡಗೇರಿ, ಕೃಷಿ ಅಧಿಕಾರಿ ಮಹಿಪಾಲರೆಡ್ಡಿ ತಮ್ಮ ಇಲಾಖೆಗಳಲ್ಲಿ ಸಿಗುವ ಸೌಲಭ್ಯಗಳು, ಯೋಜನೆಗಳು ಹಾಗೂ ಸದ್ಯ ಅವರುಗಳ ಗುರಿ ಕುರಿತು ಮಾಹಿತಿ ನೀಡಿದರು.</p>.<p>ಆರೋಗ್ಯ ಇಲಾಖೆಯ ಸಿಬ್ಬಂದಿ ಆನೆಕಾಲು ರೋಗದ ಕುರಿತು ಜಾಗೃತಿ ಮೂಡಿಸಿ ಮಾತ್ರೆ<br />ವಿತರಿಸಿದರು.</p>.<p>ಗ್ರೇಡ್-2 ತಹಶೀಲ್ದಾರ್ ನರಸಿಂಹಸ್ವಾಮಿ, ಉಪ ತಹಶೀಲ್ದಾರ್ ಬಸವರಾಜ ಸಜ್ಜನ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾ, ಉಪಾಧ್ಯಕ್ಷೆ ಮಾಣಿಕಮ್ಮ, ಕಂದಾಯ ನಿರೀಕ್ಷಕ ಭೀಮಸೇನರಾವ ಪಾಟೀಲ, ಪಿಡಿಒ ಶರಣಪ್ಪ ಮೈಲಾರಿ ಸೇರಿದಂತೆ ಜೆಸ್ಕಾಂ, ಆರೋಗ್ಯ ಅಧಿಕಾರಿಗಳು, ಗ್ರಾಮಲೆಕ್ಕಿಗರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>