‘ಶಿಕ್ಷಣ ಎಂಬುದು ನಿರಂತರವಾಗಿ ಹರಿಯುವ ಝರಿ ಇದ್ದಂತೆ. ಜ್ಞಾನಕ್ಕೆ ಬಡವ, ಶ್ರೀಮಂತ ಎಂಬ ಬೇಧವಿಲ್ಲ. ಬಾಲ್ಯಾವಸ್ಥೆಯಲ್ಲಿದ್ದಾಗ ನಾವೆಲ್ಲರೂ ಕೂಡಿ ಆಟವಾಡಿ ಶಿಕ್ಷಣ ಪಡೆಯುತ್ತೇವೆ. ಆದರೆ, ದೊಡ್ಡವರಾಗುತ್ತಿದ್ದಂತೆ ನಾನು ಶ್ರೀಮಂತ, ನೀನು ಬಡವ ಎಂಬ ಭಾವನೆ ಮೂಡುತ್ತದೆ. ಜ್ಞಾನ ಪಡೆದುಕೊಳ್ಳುವ ನಾವುಗಳು ಎಲ್ಲರನ್ನೂ ಒಂದೇ ರೀತಿಯಿಂದ ಕಾಣುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಶಿಕ್ಷಣ ಪಡೆದಿದ್ದಕ್ಕೆ ಸಾರ್ಥಕವಾಗುತ್ತದೆ’ ಎಂದರು.