ಕರ್ತವ್ಯಕ್ಕೆ ಅಡ್ಡಿ; ದೂರು ದಾಖಲು: ತಾಲ್ಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಮಾಡುತ್ತಿರುವಾಗ ಗ್ರಾಮದ ಕೆಲ ಕಿಡಗೇಡಿಗಳು ಸರ್ಕಾರಿ ಆಸ್ತಿಯನ್ನು ನಷ್ಟ ಮಾಡುವುದರ ಜೊತೆಗೆ ಕಲ್ಲು ತೂರಾಟ ಮಾಡಿ ಸಾರ್ವಜನಿಕ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಶಹಾಪುರ ಠಾಣೆಯ ಪಿಎಸ್ಐ ಚಂದ್ರಕಾಂತ ಮೆಕಾಲೆ ದೂರು ದಾಖಲಿಸಿದ್ದಾರೆ. ಸದರಿ ಘಟನೆಯಲ್ಲಿ 20ರಿಂದ 25 ಜನ ಇದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.