ಯಾದಗಿರಿ: ಒಣ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯನ್ನು ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.
ಆಶನಾಳ ಗ್ರಾಮದ ಹನುಮಂತ ನಾಡಪಣ್ಣ ಮೇದ ಬಂಧಿತ. ₹29,530 ಮೌಲ್ಯದ 7 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಹಣಮಂತ ಹಾಗೂ ಆತನ ಸ್ನೇಹಿತ ಗಾಜರಕೋಟ್ ಗ್ರಾಮದಿಂದ ಆಶನಾಳಗೆ ಒಣ ಗಾಂಜಾ ಸಾಗಿಸುತ್ತಿರುವ ಮಾಹಿತಿ ಮೇರೆಗೆ ಬೆಳಗೆರೆ ಕ್ರಾಸ್ ಬಳಿ ಗ್ರಾಮೀಣ ಪೊಲೀಸರು ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.