ಯಾದಗಿರಿ ತಾಲ್ಲೂಕಿನ ಏಕಲವ್ಯ ಮಾದರಿ ವಸತಿ ಶಾಲೆಯ ಕಟ್ಟಡ ಕಾಮಗಾರಿ ಪರಿಶೀಲಿಸಿದರು. ನಂತರ ಬಂದಳ್ಳಿ ಗ್ರಾಮಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶೌಚಾಲಯ ಬಳಕೆ ಬಗ್ಗೆ ಮಾಹಿತಿ ಕೇಳಿದರು. ಆ ಸಮಯದಲ್ಲಿಮಹಿಳೆಯೊಬ್ಬಳು ‘ನಾವು ಹಳ್ಳದ ಕಡೆ ಬಹಿರ್ದೆಸೆಗೆ ಹೋಗುತ್ತೇವೆಂದರು.’ಆ ವಿಚಾರಕ್ಕೆ ಪ್ರತಿಕ್ರಿಯಿಸಿದವಿಜಯ್ ಭಾಸ್ಕರ್, ‘ಕಟ್ಟಿಸಿರುವ ಶೌಚಾಲಯಬಳಕೆ ಮಾಡದಿದ್ದರೆ ಪಡಿತರ ಹಾಗೂ ವಿದ್ಯುತ್ ಕಟ್ ಮಾಡಲಾಗುತ್ತದೆ. ಶೌಚಾಲಯ ಬಳಕೆ ಮಾಡದಿದ್ದರೆ ಸರ್ಕಾರ ಹಣ ವಾಪಸ್ ಪಡೆಯುತ್ತದೆ’ಎಂದು ಹೇಳಿದರು.