ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಹಾದೇವಪ್ಪಗೌಡ ಬಿರಾದಾರ ಧ್ವಜಾರೋಹಣ ಮಾಡಿ ಮಾತನಾಡಿ, ಅಸಂಖ್ಯಾತ ಹೋರಾಟಗಾರರ ಹೋರಾಟದ ಫಲವಾಗಿ ಕಲ್ಯಾಣ ಕರ್ನಾಟಕ ಪ್ರದೇಶವು ಸೆಪ್ಟಂಬರ್ 17ರಂದು ಸ್ವಾತಂತ್ರ್ಯ ಪಡೆಯಿತು. ಈ ಹೋರಾಟದಲ್ಲಿ ದುಮ್ಮದ್ರಿ ಶರಣಗೌಡ, ಅಚ್ಚಪ್ಪಗೌಡ, ಕೋಳೂರ ವಿರುಪಾಕ್ಷಪ್ಪಗೌಡ, ಮಹಾಂತಗೌಡ, ನಿಂಗನಗೌಡರು ಸೇರಿದಂತೆ ಸಾಕಷ್ಟು ನಾಯಕರು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ್ದಾರೆ ಎಂದು ಹೋರಾಟಗಾರರನ್ನು ಸ್ಮರಿಸಿದರು.