<p>ಹುಣಸಗಿ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ವಜ್ಜಲ, ಬಲಶೆಟ್ಟಿಹಾಳ, ಕೊಡೇಕಲ್ಲ, ನಾರಾಯಣಪುರ, ಮಾಳನೂರ, ಕಲ್ಲದೇವನಹಳ್ಳಿ ಸೇರಿದಂತೆ ಇತರ ಗ್ರಾಮಗಳಲ್ಲಿ ಕಲ್ಯಾಣ ಕರ್ನಾಟಕ ಉತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.</p>.<p>ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಹಾದೇವಪ್ಪಗೌಡ ಬಿರಾದಾರ ಧ್ವಜಾರೋಹಣ ಮಾಡಿ ಮಾತನಾಡಿ, ಅಸಂಖ್ಯಾತ ಹೋರಾಟಗಾರರ ಹೋರಾಟದ ಫಲವಾಗಿ ಕಲ್ಯಾಣ ಕರ್ನಾಟಕ ಪ್ರದೇಶವು ಸೆಪ್ಟಂಬರ್ 17ರಂದು ಸ್ವಾತಂತ್ರ್ಯ ಪಡೆಯಿತು. ಈ ಹೋರಾಟದಲ್ಲಿ ದುಮ್ಮದ್ರಿ ಶರಣಗೌಡ, ಅಚ್ಚಪ್ಪಗೌಡ, ಕೋಳೂರ ವಿರುಪಾಕ್ಷಪ್ಪಗೌಡ, ಮಹಾಂತಗೌಡ, ನಿಂಗನಗೌಡರು ಸೇರಿದಂತೆ ಸಾಕಷ್ಟು ನಾಯಕರು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ್ದಾರೆ ಎಂದು ಹೋರಾಟಗಾರರನ್ನು ಸ್ಮರಿಸಿದರು.</p>.<p>ಶಿಕ್ಷಕ ಗುರುನಾಥ ನಾವದಗಿ ವಿಶೇಷ ಉಪನ್ಯಾಸ ನೀಡಿದರು.</p>.<p>ಉಪಖಜಾನೆ ಅಧಿಕಾರಿ ಸಣ್ಣಕೆಪ್ಪ ಕೊಂಡಿಕಾರ್ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶವು ನಿಜಾಮ ಸರ್ಕಾರದಿಂದ ಮುಕ್ತಿ ಪಡಿದಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಇನ್ನೂ ಪ್ರಗತಿ ಸಾಧಿಸಬೇಕಿದೆ ಎಂದರು.</p>.<p>ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ದೇಸಾಯಿ, ಸಿಪಿಐ ದೌಲತ್.ಎನ್.ಕೆ, ಉಪ ತಹಶಿಲ್ದಾರ್ ಪ್ರವೀಣ ಸಜ್ಜನ್ ವೇದಿಕೆ ಮೇಲೆ ಇದ್ದರು. ನಾಗನಗೌಡ ಪಾಟೀಲ ನಿರೂಪಿಸಿದರು. ಅಮರೇಶ ಮಾಲಗತ್ತಿ ವಂದಿಸಿದರು.</p>.<p>ಇಲ್ಲಿನ ಸ್ವಾಮಿ ವಿವೇಕಾನಂದ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಉತ್ಸವದಲ್ಲಿ ಪ್ರಾಚಾರ್ಯ ಎಸ್.ಎಂ.ಕಿರಣಗಿ ಧ್ವಜಾರೋಹಣ ಮಾಡಿದರು. ಐಟಿಐ ಕಾಲೇಜು ಪ್ರಾಚಾರ್ಯ ಬಸವರಾಜ ಮರೋಳ, ಉಪನ್ಯಾಸಕರಾದ ಬಸವರಾಜ ತಳ್ಳಳ್ಳಿ, ನಿಂಗುನಾಯಕ, ಶರಣಪ್ಪ ಕಟ್ಟಿಮನಿ ಇದ್ದರು.<br />ಹುಣಸಗಿ ಪಟ್ಟಣ ಸಹಕಾರಿ ಸಂಘದಲ್ಲಿ ಅಧ್ಯಕ್ಷ ಬಸವರಾಜ ಮೇಲಿನಮನಿ ಧ್ವಜಾರೋಹಣ ಮಾಡಿದರು. ಬಳಿಕ ಮಾತನಾಡಿ, ಸರ್ಧಾರ್ ವಲ್ಲಭಬಾಯಿ ಪಟೇಲ ಅವರ ದಿಟ್ಟ ನಿಲುವಿನಿಂದಾಗಿ 33 ದಿನಗಳ ಹೋರಾಟದ ಫಲವಾಗಿ ಈ ಭಾಗದ ಸ್ವಾತಂತ್ರ್ಯವಾಯಿತು ಎಂದರು.</p>.<p>ಸಂಸ್ಥೆಯ ಪದ್ಮಾವತಿ ದೇಶಪಾಂಡೆ, ಚಂದ್ರಶೇಖರ ದೇಸಾಯಿ, ಗುರುಲಿಂಗಪ್ಪ ಸಜ್ಜನ, ಅಮರೇಶ ವೈಲಿ, ದೇವು ಬೈಚಬಾಳ, ಮಹಾಂತೇಶ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಣಸಗಿ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ವಜ್ಜಲ, ಬಲಶೆಟ್ಟಿಹಾಳ, ಕೊಡೇಕಲ್ಲ, ನಾರಾಯಣಪುರ, ಮಾಳನೂರ, ಕಲ್ಲದೇವನಹಳ್ಳಿ ಸೇರಿದಂತೆ ಇತರ ಗ್ರಾಮಗಳಲ್ಲಿ ಕಲ್ಯಾಣ ಕರ್ನಾಟಕ ಉತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.</p>.<p>ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಹಾದೇವಪ್ಪಗೌಡ ಬಿರಾದಾರ ಧ್ವಜಾರೋಹಣ ಮಾಡಿ ಮಾತನಾಡಿ, ಅಸಂಖ್ಯಾತ ಹೋರಾಟಗಾರರ ಹೋರಾಟದ ಫಲವಾಗಿ ಕಲ್ಯಾಣ ಕರ್ನಾಟಕ ಪ್ರದೇಶವು ಸೆಪ್ಟಂಬರ್ 17ರಂದು ಸ್ವಾತಂತ್ರ್ಯ ಪಡೆಯಿತು. ಈ ಹೋರಾಟದಲ್ಲಿ ದುಮ್ಮದ್ರಿ ಶರಣಗೌಡ, ಅಚ್ಚಪ್ಪಗೌಡ, ಕೋಳೂರ ವಿರುಪಾಕ್ಷಪ್ಪಗೌಡ, ಮಹಾಂತಗೌಡ, ನಿಂಗನಗೌಡರು ಸೇರಿದಂತೆ ಸಾಕಷ್ಟು ನಾಯಕರು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ್ದಾರೆ ಎಂದು ಹೋರಾಟಗಾರರನ್ನು ಸ್ಮರಿಸಿದರು.</p>.<p>ಶಿಕ್ಷಕ ಗುರುನಾಥ ನಾವದಗಿ ವಿಶೇಷ ಉಪನ್ಯಾಸ ನೀಡಿದರು.</p>.<p>ಉಪಖಜಾನೆ ಅಧಿಕಾರಿ ಸಣ್ಣಕೆಪ್ಪ ಕೊಂಡಿಕಾರ್ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶವು ನಿಜಾಮ ಸರ್ಕಾರದಿಂದ ಮುಕ್ತಿ ಪಡಿದಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಇನ್ನೂ ಪ್ರಗತಿ ಸಾಧಿಸಬೇಕಿದೆ ಎಂದರು.</p>.<p>ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ದೇಸಾಯಿ, ಸಿಪಿಐ ದೌಲತ್.ಎನ್.ಕೆ, ಉಪ ತಹಶಿಲ್ದಾರ್ ಪ್ರವೀಣ ಸಜ್ಜನ್ ವೇದಿಕೆ ಮೇಲೆ ಇದ್ದರು. ನಾಗನಗೌಡ ಪಾಟೀಲ ನಿರೂಪಿಸಿದರು. ಅಮರೇಶ ಮಾಲಗತ್ತಿ ವಂದಿಸಿದರು.</p>.<p>ಇಲ್ಲಿನ ಸ್ವಾಮಿ ವಿವೇಕಾನಂದ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಉತ್ಸವದಲ್ಲಿ ಪ್ರಾಚಾರ್ಯ ಎಸ್.ಎಂ.ಕಿರಣಗಿ ಧ್ವಜಾರೋಹಣ ಮಾಡಿದರು. ಐಟಿಐ ಕಾಲೇಜು ಪ್ರಾಚಾರ್ಯ ಬಸವರಾಜ ಮರೋಳ, ಉಪನ್ಯಾಸಕರಾದ ಬಸವರಾಜ ತಳ್ಳಳ್ಳಿ, ನಿಂಗುನಾಯಕ, ಶರಣಪ್ಪ ಕಟ್ಟಿಮನಿ ಇದ್ದರು.<br />ಹುಣಸಗಿ ಪಟ್ಟಣ ಸಹಕಾರಿ ಸಂಘದಲ್ಲಿ ಅಧ್ಯಕ್ಷ ಬಸವರಾಜ ಮೇಲಿನಮನಿ ಧ್ವಜಾರೋಹಣ ಮಾಡಿದರು. ಬಳಿಕ ಮಾತನಾಡಿ, ಸರ್ಧಾರ್ ವಲ್ಲಭಬಾಯಿ ಪಟೇಲ ಅವರ ದಿಟ್ಟ ನಿಲುವಿನಿಂದಾಗಿ 33 ದಿನಗಳ ಹೋರಾಟದ ಫಲವಾಗಿ ಈ ಭಾಗದ ಸ್ವಾತಂತ್ರ್ಯವಾಯಿತು ಎಂದರು.</p>.<p>ಸಂಸ್ಥೆಯ ಪದ್ಮಾವತಿ ದೇಶಪಾಂಡೆ, ಚಂದ್ರಶೇಖರ ದೇಸಾಯಿ, ಗುರುಲಿಂಗಪ್ಪ ಸಜ್ಜನ, ಅಮರೇಶ ವೈಲಿ, ದೇವು ಬೈಚಬಾಳ, ಮಹಾಂತೇಶ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>