<p><strong>ಹುಣಸಗಿ:</strong> ‘ಮುಂಬರುವ ಜ. 9 ರಂದು ಹಮ್ಮಿಕೊಂಡಿರುವ ಕಸಾಪ ತಾಲ್ಲೂಕು ಸಮ್ಮೇಳನ ಅರ್ಥಪೂರ್ಣವಾಗಿ ಆಚರಿಸುವಂತಾಗಲು ಎಲ್ಲ ಇಲಾಖೆಯರೂ ಕೈಜೋಡಿಸುವುದ ಮುಖ್ಯ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗಣ್ಣ ಸಾಹು ದಂಡಿನ್ ಹೇಳಿದರು.</p>.<p>ಹುಣಸಗಿ ಪಟ್ಟಣದ ಯುಕೆಪಿ ಕ್ಯಾಂಪಿನ ನೀಲಕಂಠೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮ್ಮೇಳನದ ಕರಪತ್ರ ಬಿಡುಗಡೆ ಹಾಗೂ ಶಿಕ್ಷಕರ ಸಂಘಗಳ ಪದಾಧಿಕಾರಿಗಳು ಸೇರಿದಂತೆ ಇತರರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.</p>.<p>‘ತಾಲ್ಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನ ಎನ್ನುವದು ಅತ್ಯಂತ ಮಹತ್ವದ್ದು ಹಾಗೂ ತಾಲ್ಲೂಕಿನಲ್ಲಿ ಹಬ್ಬದ ಕಳೆಕಟ್ಟಲಿದೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರವಿದ್ದಲ್ಲಿ ಮಾತ್ರ ಯಶಸ್ವಿಯಾಗಲು ಸಾಧ್ಯ’ ಎಂದು ಹೇಳಿದರು.</p>.<p>ಗೌರವ ಕಾರ್ಯದರ್ಶಿ ಗುರು ಹುಲಕಲ್ಲ ಪ್ರಾಸ್ತಾವಿಕವಾಗಿ ಮಾತನಾಡಿ, ಸಮ್ಮೇಳನದಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ವಿವಿಧ ವಿಷಯಗಳ ಕಾರ್ಯಸೂಚಿಯ ಕುರಿತು ಮಾತನಾಡಿದರು.</p>.<p>ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ಮಾತನಾಡಿ, ‘ಎಲ್ಲ ಇಲಾಖೆಯ ಬಾಂಧವರು ತನುಮನ ಧನ ಹಾಗೂ ಸಮಯ ನೀಡುವ ಮೂಲಕ ಸಮ್ಮೇಳನ ಯಶಸ್ವಿಗೆ ಕಾರಣರಾಗಬೇಕು’ ಎಂದರು.</p>.<p>ಹಿರಿಯರಾದ ನಾಗಪ್ಪ ಅಡಿಕ್ಯಾಳ, ಸಮ್ಮೇಳನ ವಕ್ತಾರ ಬಸವರಾಜ ಸಜ್ಜನ, ಕೋಶಾಧ್ಯಕ್ಷ ಬಸವರಾಜ ಮೇಲಿಮನಿ, ಭೀಮಶೇನರಾವ್ ಕುಲಕರ್ಣಿ, ಶಿಕ್ಷಕರ ಸಂಘದ ಅಧ್ಯಕ್ಷ ಕೊಟ್ರೇಶ ಕೋಳುರು, ಬಸನಗೌಡ ವಠಾರ, ಶಿವಕುಮಾರ ಬಂಡೋಳಿ, ಪರಶುರಾಮ, ಅಶೋಕ ರಾಜನಕೋಳುರು ಸೇರಿದಂತೆ ಇತರರು ಮಾತನಾಡಿದರು.</p>.<p>ಸಭೆಯಲ್ಲಿ ಮುಖಂಡರಾದ ಆರ್.ಎಂ.ರೇವಡಿ, ಹೊನ್ನಕೇಶವ ದೇಸಾಯಿ, ವಿಜಯಕುಮಾರ ದೇಸಾಯಿ, ಬಸವರಾಜ ತೆಗ್ಗೇಳ್ಳಿ, ಮಶಾಕ ಯಾಳಗಿ, ಶಿಕ್ಷಕಿ ನೀಲಮ್ಮ ನಾಗರಬಟ್ಟ, ಶಶಿಕಲಾ ಮಠ, ಶೋಭಾ ನಾಯ್ಕೋಡಿ, ಅಕ್ಕಮಹಾದೇವಿ ದೇಶಮುಖ, ಶೇಖಪ್ಪ ಬಚಬನೂರು, ಕಾಂತೇಶ ಹಲಗಿಮನಿ, ರಾಜಕುಮಾರ ಬಿರಾದಾರ ಸೇರಿದಂತೆ ಇತರರು ಇದ್ದರು.</p>.<p>ನಾಗನಗೌಡ ಪಾಟೀಲ ನಿರೂಪಿಸಿದರು. ಗುರು ರಾಠೋಡ ಸ್ವಾಗತಿಸಿದರು. ಬಸನಗೌಡ ಪಾಟೀಲ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸಗಿ:</strong> ‘ಮುಂಬರುವ ಜ. 9 ರಂದು ಹಮ್ಮಿಕೊಂಡಿರುವ ಕಸಾಪ ತಾಲ್ಲೂಕು ಸಮ್ಮೇಳನ ಅರ್ಥಪೂರ್ಣವಾಗಿ ಆಚರಿಸುವಂತಾಗಲು ಎಲ್ಲ ಇಲಾಖೆಯರೂ ಕೈಜೋಡಿಸುವುದ ಮುಖ್ಯ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗಣ್ಣ ಸಾಹು ದಂಡಿನ್ ಹೇಳಿದರು.</p>.<p>ಹುಣಸಗಿ ಪಟ್ಟಣದ ಯುಕೆಪಿ ಕ್ಯಾಂಪಿನ ನೀಲಕಂಠೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮ್ಮೇಳನದ ಕರಪತ್ರ ಬಿಡುಗಡೆ ಹಾಗೂ ಶಿಕ್ಷಕರ ಸಂಘಗಳ ಪದಾಧಿಕಾರಿಗಳು ಸೇರಿದಂತೆ ಇತರರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.</p>.<p>‘ತಾಲ್ಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನ ಎನ್ನುವದು ಅತ್ಯಂತ ಮಹತ್ವದ್ದು ಹಾಗೂ ತಾಲ್ಲೂಕಿನಲ್ಲಿ ಹಬ್ಬದ ಕಳೆಕಟ್ಟಲಿದೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರವಿದ್ದಲ್ಲಿ ಮಾತ್ರ ಯಶಸ್ವಿಯಾಗಲು ಸಾಧ್ಯ’ ಎಂದು ಹೇಳಿದರು.</p>.<p>ಗೌರವ ಕಾರ್ಯದರ್ಶಿ ಗುರು ಹುಲಕಲ್ಲ ಪ್ರಾಸ್ತಾವಿಕವಾಗಿ ಮಾತನಾಡಿ, ಸಮ್ಮೇಳನದಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ವಿವಿಧ ವಿಷಯಗಳ ಕಾರ್ಯಸೂಚಿಯ ಕುರಿತು ಮಾತನಾಡಿದರು.</p>.<p>ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ಮಾತನಾಡಿ, ‘ಎಲ್ಲ ಇಲಾಖೆಯ ಬಾಂಧವರು ತನುಮನ ಧನ ಹಾಗೂ ಸಮಯ ನೀಡುವ ಮೂಲಕ ಸಮ್ಮೇಳನ ಯಶಸ್ವಿಗೆ ಕಾರಣರಾಗಬೇಕು’ ಎಂದರು.</p>.<p>ಹಿರಿಯರಾದ ನಾಗಪ್ಪ ಅಡಿಕ್ಯಾಳ, ಸಮ್ಮೇಳನ ವಕ್ತಾರ ಬಸವರಾಜ ಸಜ್ಜನ, ಕೋಶಾಧ್ಯಕ್ಷ ಬಸವರಾಜ ಮೇಲಿಮನಿ, ಭೀಮಶೇನರಾವ್ ಕುಲಕರ್ಣಿ, ಶಿಕ್ಷಕರ ಸಂಘದ ಅಧ್ಯಕ್ಷ ಕೊಟ್ರೇಶ ಕೋಳುರು, ಬಸನಗೌಡ ವಠಾರ, ಶಿವಕುಮಾರ ಬಂಡೋಳಿ, ಪರಶುರಾಮ, ಅಶೋಕ ರಾಜನಕೋಳುರು ಸೇರಿದಂತೆ ಇತರರು ಮಾತನಾಡಿದರು.</p>.<p>ಸಭೆಯಲ್ಲಿ ಮುಖಂಡರಾದ ಆರ್.ಎಂ.ರೇವಡಿ, ಹೊನ್ನಕೇಶವ ದೇಸಾಯಿ, ವಿಜಯಕುಮಾರ ದೇಸಾಯಿ, ಬಸವರಾಜ ತೆಗ್ಗೇಳ್ಳಿ, ಮಶಾಕ ಯಾಳಗಿ, ಶಿಕ್ಷಕಿ ನೀಲಮ್ಮ ನಾಗರಬಟ್ಟ, ಶಶಿಕಲಾ ಮಠ, ಶೋಭಾ ನಾಯ್ಕೋಡಿ, ಅಕ್ಕಮಹಾದೇವಿ ದೇಶಮುಖ, ಶೇಖಪ್ಪ ಬಚಬನೂರು, ಕಾಂತೇಶ ಹಲಗಿಮನಿ, ರಾಜಕುಮಾರ ಬಿರಾದಾರ ಸೇರಿದಂತೆ ಇತರರು ಇದ್ದರು.</p>.<p>ನಾಗನಗೌಡ ಪಾಟೀಲ ನಿರೂಪಿಸಿದರು. ಗುರು ರಾಠೋಡ ಸ್ವಾಗತಿಸಿದರು. ಬಸನಗೌಡ ಪಾಟೀಲ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>