ತಾಲ್ಲೂಕಿನ ವನದುರ್ಗ, ಹೊಸಕೇರಾ, ಶೆಟ್ಟಿಕೇರಾ, ಕಕ್ಕಸಗೇರಾ ಗ್ರಾಮಗಳಲ್ಲಿ ರೋಗಜಾನುವಾರುಗಳಿಗೆ ಕಾಣಿಸಿಕೊಂಡಿದೆ. ಕಾಲು, ಭುಜ, ಗಂಟಲು ಭಾಗದಲ್ಲಿ ಗುಳ್ಳೆಯಾಗಿ ಸಣ್ಣದಾದ ಗಡ್ಡೆಯಾಗಿ ರಕ್ತ ಹೆಪ್ಪುಗಟ್ಟಿ ಕೀವು ಬಿಳುವುದರ ಜತೆಗೆ ಹುಳ ಬಿದ್ದಿವೆ. ಇದರಿಂದ ಜಾನುವಾರುಗಳು ನಿತ್ರಾಣಗೊಳ್ಳುತ್ತಲಿವೆ. ಪಶು ವೈದ್ಯರು ಚಿಕಿತ್ಸೆ ನೀಡುತ್ತಿದ್ದರು ಸಹ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಬೇರೆ ಜಾನುವಾರುಗಳಿಗೂ ರೋಗ ಪಸರಿಸುವ ಆತಂಕ ಶುರುವಾಗಿದೆ ಎನ್ನುತ್ತಾರೆ ವನದುರ್ಗ ಗ್ರಾಮದ ರೈತ ಮುಖಂಡ ಯಲ್ಲಪ್ಪ ಕಾಶಿರಾಜ.