ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ರಾಜೂಗೌಡ ಹೆಗಲಿಗೆ ಆನಂದಸಿಂಗ್ ಹೊಣೆ

ಹೆಲಿಕಾಪ್ಟರ್ ಮೂಲಕ ಸುರಪುರದಿಂದ ಬೆಂಗಳೂರಿಗೆ ಶಾಸಕರ ದಿಢೀರ್ ಪ್ರಯಾಣ
Last Updated 12 ಆಗಸ್ಟ್ 2021, 7:57 IST
ಅಕ್ಷರ ಗಾತ್ರ

ಸುರಪುರ: ಸಚಿವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ನಿರ್ಧರಿಸಿರುವ ವಿಜಯನಗರ ಶಾಸಕ ಆನಂದಸಿಂಗ್ ಅವರ ಮನವೊಲಿಸುವ ಜವಾಬ್ದಾರಿಯನ್ನು ಪಕ್ಷದ ವರಿಷ್ಠರು ಶಾಸಕ ರಾಜೂಗೌಡರಿಗೆ ವಹಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾಜೂಗೌಡರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕರೆ ಮಾಡಿ ಆನಂದಸಿಂಗ್‍ನನ್ನು ಬೆಂಗಳೂರಿಗೆ ಕರೆ ತರಲು ತಿಳಿಸಿದರು.ರಾಜೂಗೌಡರನ್ನು ಕರೆದ್ಯೊಯಲು ಬೆಂಗಳೂರಿನಿಂದ ಹೆಲಿಕಾಪ್ಟರ್ ಬಂದಿತು. ಪಟ್ಟಣದ ಪ್ರವಾಸಿ ಮಂದಿರದ ಹೆಲಿಪ್ಯಾಡ್‍ನಿಂದ ಹೊಸಪೇಟೆಯ ಜಿಂದಾಲ್‍ಗೆ ಪಯಣ ಬೆಳೆಸಿದರು.

ಈ ಬಗ್ಗೆ ಮಾತನಾಡಿದ ರಾಜೂಗೌಡ, ‘ಆನಂದಸಿಂಗ್ ಮತ್ತು ನಾನು ಆಪ್ತ ಸ್ನೇಹಿತರು. ಅವರನ್ನು ಬಿಜೆಪಿಗೆ ನಾನೇ ಕರೆ ತಂದಿದ್ದೆ. ವರಿಷ್ಠರ ಸೂಚನೆ ಮೇರೆಗೆ ಉಪಚುನಾವಣೆಯ ಸಂಪೂರ್ಣ ಹೊಣೆ ಹೊತ್ತು ಅವರಿಗೆ ಗೆಲುವು ದೊರಕಿಸಿಕೊಟ್ಟಿದ್ದೆ‘ ಎಂದರು.

‘ಮಂಗಳವಾರದಿಂದ ವರಿ ಷ್ಠರು ಆನಂದಸಿಂಗ್ ಅವರನ್ನು ಸಂಪರ್ಕಿ ಸಲು ಯತ್ನಿಸಿದ್ದರೂ ಸಾಧ್ಯವಾಗಿಲ್ಲ. ಅವರೊಂದಿಗೆ ನನ್ನ ಒಡನಾಟ ಇರುವುದರಿಂದ ವರಿಷ್ಠರು ಈ ಜವಾಬ್ದಾರಿ ನನ್ನ ಮೇಲೆ ಹೊರೆಸಿದ್ದಾರೆ. ನಾನು ಅವರೊಂದಿಗೆ ಮಾತನಾಡಿದ್ದೇನೆ’ ಎಂದು ಹೇಳಿದರು.

‘ಆನಂದಸಿಂಗ್ ಅವರನ್ನು ಬಿ.ಎಸ್. ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಕರೆದುಕೊಂಡು ಹೋಗುತ್ತೇನೆ. ನಿರೀಕ್ಷಿತ ಖಾತೆ ತಪ್ಪಿದ್ದರಿಂದ ಅಸಮಾಧಾ ನಗೊಂಡಿದ್ದಾರೆ. ಅವರ ಮನವೊಲಿಕೆ ಖಂಡಿತವಾಗಿ ಸಾಧ್ಯವಾಗಲಿದೆ’ ಎಂದರು.

‘ನನಗೆ ಸಚಿವ ಸ್ಥಾನ ನೀಡಿದರೂ ಸ್ವೀಕರಿಸುವುದಿಲ್ಲ. ನನ್ನ ನಿರ್ಧಾರ ಅಚಲವಾಗಿ. ಉಳಿದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರುವುದು ನನ್ನ ಗುರಿ. ಆಗ ಸಚಿವನಾಗುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT