ಉದ್ಯೋಗ ಸೃಷ್ಟಿಯಿಂದ ವಲಸೆ ತಡೆಯುವುದು ಒಂದು ಉಪಯೋಗವಾದರೆ ಉದ್ಯೋಗ ಖಾತರಿ ಯೋಜನೆಯಲ್ಲಿ ಕೈಗೊಂಡಿರುವಂತಹ ಕಾಮಗಾರಿಗಳು ಮುಂದಿನ ಹಂತದಲ್ಲಿಯೂ ಲಾಭದಾಯಕವಾಗಿರಬೇಕು ಎನ್ನುವ ಕಲ್ಪನೆಯೊಡನೆ ಕಲ್ಯಾಣಿಗಳ ಜೀರ್ಣೋದ್ಧಾರ, ಕೆರೆಗಳ ಹೂಳೆತ್ತುವುದು, ಬೆಟ್ಟಗಳ ಫೆನ್ಸಿಂಗ್, ಇಂಗು ಗುಂಡಿಗಳ ನಿರ್ಮಾಣದಂತಹ ಅಂತರ್ಜಲವನ್ನು ಹೆಚ್ಚಿಸುವುದು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮಾನವ ದಿನಗಳನ್ನು ಸೃಷ್ಟಿಸುವಂತಹ ಕಾಮಗಾರಿಗಳನ್ನು ಮಾಡಲಾಗುತ್ತಿದೆ.