ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಸಿದ್ದಕ್ಕೆ ಯುವಕನ ಕೊಲೆ: ಒಬ್ಬನ ಬಂಧನ

Last Updated 3 ಜನವರಿ 2021, 16:41 IST
ಅಕ್ಷರ ಗಾತ್ರ

ಶಹಾಪುರ: ಪ್ರೀತಿಸಿದ್ದ ಯುವಕನನ್ನುಯುವತಿ ಸಂಬಂಧಿಕರು ಕೊಲೆ ಮಾಡಿ, ನಂತರ ಗೊತ್ತಾಗಬಾರದು ಎಂದು ವಿಷ ಕುಡಿಸಿದ ಬಾಟಲ್ ಇಟ್ಟು ಹೋದ ಬಗ್ಗೆ ಭಾನುವಾರ ಶಹಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಲ್ಲೂಕಿನ ಸಾದ್ಯಾಪುರ ಗ್ರಾಮದ ಸಂತೋಷ ಮಲ್ಲಪ್ಪ(20) ಕೊಲೆಯಾದ ಯುವಕ.

ಅದೇ ಗ್ರಾಮದ ಯುವತಿಯನ್ನು ಸಂತೋಷ ಪ್ರೀತಿಸಿ ಫೋನಿನಲ್ಲಿ ಮಾತನಾಡುವುದನ್ನು ಯುವತಿಯ ಸಂಬಂಧಿಕರು ನೋಡಿ ನ್ಯಾಯ ಮಾಡೋಣ ಬನ್ನಿ ಎಂದು ಬುಧವಾರ (ಡಿ.31) ಶಹಾಪುರದ ಕಾಲೇಜೊಂದಕ್ಕೆ ಕರೆಯಿಸಿ ಅಲ್ಲಿ ಸಂತೋಷನ ಮೇಲೆ ಹಲ್ಲೆ ಮಾಡಿದ್ದರು. ‘ನಂತರ ರಾತ್ರಿ ಸಮಯದಲ್ಲಿ ಯುವತಿಯ ಸಂಬಂಧಿಕರು ಸಂತೋಷನನ್ನು ಕೊಲೆ ಮಾಡಿದ್ದಾರೆ. ಶಹಾಪುರ ನಗರದ ಬಾಲಕಿಯರ ವಸತಿ ನಿಲಯದ ಶವವಿಟ್ಟು, ಕೊಲೆ ಮಾಡಿದ್ದು ಗೊತ್ತಾಗಬಾರದೆಂದು ವಿಷ ಕುಡಿಸಿ ಸಂತೋಷನ ಪಕ್ಕದಲ್ಲಿ ವಿಷದ ಬಾಟಲಿ ಇಟ್ಟು ಹೋಗಿದ್ದಾರೆ’ ಎಂದು ಆರೋಪಿಸಿ ಸಂತೋಷನ ಅಣ್ಣ ಅಮರೇಶ ದೂರಿನಲ್ಲಿ ತಿಳಿಸಿದ್ದಾರೆ.

ಡಿ.31ರಂದು ಮನೆಯಿಂದ ಹೋದ ಯುವಕ ನಗರದ ಬಾಲಕಿಯರ ವಸತಿ ನಿಲಯದ ಮಾರ್ಗದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಶಹಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ಒಬ್ಬರ ಬಂಧನ: ಸಂತೋಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ. ಈಗಾಗಲೇ ನೀಲಕಂಠ ಬಡಿಗೇರ ಎನ್ನುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ಶೋಧ ನಡೆದಿದೆ ಎಂದು ಶಹಾಪುರ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಚೆನ್ನಯ್ಯ ಸಿ.ಹಿರೇಮಠ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT