ಅದೇ ಗ್ರಾಮದ ಯುವತಿಯನ್ನು ಸಂತೋಷ ಪ್ರೀತಿಸಿ ಫೋನಿನಲ್ಲಿ ಮಾತನಾಡುವುದನ್ನು ಯುವತಿಯ ಸಂಬಂಧಿಕರು ನೋಡಿ ನ್ಯಾಯ ಮಾಡೋಣ ಬನ್ನಿ ಎಂದು ಬುಧವಾರ (ಡಿ.31) ಶಹಾಪುರದ ಕಾಲೇಜೊಂದಕ್ಕೆ ಕರೆಯಿಸಿ ಅಲ್ಲಿ ಸಂತೋಷನ ಮೇಲೆ ಹಲ್ಲೆ ಮಾಡಿದ್ದರು. ‘ನಂತರ ರಾತ್ರಿ ಸಮಯದಲ್ಲಿ ಯುವತಿಯ ಸಂಬಂಧಿಕರು ಸಂತೋಷನನ್ನು ಕೊಲೆ ಮಾಡಿದ್ದಾರೆ. ಶಹಾಪುರ ನಗರದ ಬಾಲಕಿಯರ ವಸತಿ ನಿಲಯದ ಶವವಿಟ್ಟು, ಕೊಲೆ ಮಾಡಿದ್ದು ಗೊತ್ತಾಗಬಾರದೆಂದು ವಿಷ ಕುಡಿಸಿ ಸಂತೋಷನ ಪಕ್ಕದಲ್ಲಿ ವಿಷದ ಬಾಟಲಿ ಇಟ್ಟು ಹೋಗಿದ್ದಾರೆ’ ಎಂದು ಆರೋಪಿಸಿ ಸಂತೋಷನ ಅಣ್ಣ ಅಮರೇಶ ದೂರಿನಲ್ಲಿ ತಿಳಿಸಿದ್ದಾರೆ.