‘ರೈತರು ಕೃಷಿಯೊಂದಿಗೆ ಉಪ ಕಸುಬುಗಳನ್ನು ಅಳವಡಿಸಿಕೊಂಡರೆ ಮಾತ್ರ ಕೃಷಿಯಲ್ಲಿ ಅಧಿಕ ಲಾಭ ಪಡೆಯಬಹುದು. ವರ್ಷದ ಬಹು ದಿನಗಳವರೆಗೆ ಕೆಲಸವನ್ನು ಗ್ರಾಮೀಣ ಪ್ರದೇಶದಲ್ಲಿಯೇ ಪಡೆದುಕೊಳ್ಳಬಹುದು. ಅಣಬೆ ಬೇಸಾಯಕ್ಕೆ ಅವಶ್ಯಕವಾದ ಭತ್ತದ ಹುಲ್ಲು ಯಥೇಚ್ಛವಾಗಿ ದೊರೆಯುವುದರಿಂದ ಗ್ರಾಮೀಣ ಭಾಗದ ಯುಕವರು ಮತ್ತು ಯುವತಿಯರು ಈ ಉಪ ಕಸುಬು ಅಳವಡಿಸಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಕೃಷಿ ವಿಜ್ಞಾನ ಕೇಂದ್ರದಿಂದ ಆಸಕ್ತರಿಗೆ ಅಣಬೆ ಬೇಸಾಯದ ಸಂಪೂರ್ಣ ತಾಂತ್ರಿಕತೆ ಒದಗಿಸಿ ಮಾರುಕಟ್ಟೆ ಮಾಹಿತಿ ನೀಡಲಾಗುವುದು. ಹೆಚ್ಚಿನ ಸಂಖ್ಯೆಯ ರೈತರು ಇದರ ಲಾಭ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.
ತೋಟಗಾರಿಕೆ ವಿಜ್ಞಾನಿ ಸತೀಶಕಾಳೆ ಮಾತನಾಡಿ, ರೈತರಿಗೆ ಅಣಬೆ ಬೇಸಾಯದ ವಿವಿಧ ಹಂತಗಳನ್ನು ಅದಕ್ಕೆ ಬೇಕಾಗುವ ಪರಿಕರಗಳ ಬಗ್ಗೆ ಪರಿಚಯ ಮಾಡಿಸಿದರು. ಅಣಬೆ ಬೇಸಾಯಕ್ಕೆ ಬೇಕಾಗುವ ಪರಿಸರ, ಹವಾಮಾನ ಮತ್ತು ವಿವಿಧ ಅಣಬೆ ಜಾತಿಗಳ ಕುರಿತು ಮಾಹಿತಿ ನೀಡಿದರು.