<p>ಯಾದಗಿರಿ: ನಗರ ಸೇರಿದಂತೆ ಜಿಲ್ಲಾದ್ಯಂತ ಶುಕ್ರವಾರ ಶ್ರಾವಣ ಮಾಸದ ನಾಗರ ಪಂಚಮಿ ಹಬ್ಬವನ್ನು ಶ್ರದ್ಧಾ–ಭಕ್ತಿಯಿಂದ ಆಚರಿಸಲಾಯಿತು.</p>.<p>ಬೆಳಿಗ್ಗೆಯೇ ಮನೆಯನ್ನು ಮಹಿಳೆಯರು ಸ್ವಚ್ಛಗೊಳಿಸಿ ಪೂಜೆಗೆ ಸಿದ್ಧತೆ ಮಾಡಿಕೊಂಡರು.</p>.<p>ವಿವಿಧ ದೇಗುಲಗಳಲ್ಲಿರುವ ನಾಗರಟ್ಟೆಗಳಲ್ಲಿ ಕಲ್ಲು ನಾಗರ ಹಾವಿಗೆ ಹಾಲೇರೆದು ಮಹಿಳೆಯರು ಸಂಭ್ರಮಿಸಿದರು.</p>.<p>ನಗರ ವಿವಿಧ ದೇವಸ್ಥಾನಗಳಲ್ಲಿರುವ ನಾಗರ ಕಟ್ಟೆಗಳಲ್ಲಿ ಕಲ್ಲಿನ ನಾಗಪ್ಪನಿಗೆ ಪೂಜೆ ಸಲ್ಲಿಸುವ ಮೂಲಕ ದೇವರಲ್ಲಿ ತಮ್ಮ ಇಚ್ಛೆಯನ್ನು ಈಡೇರಿಸುವಂತೆ ಪ್ರಾರ್ಥಿಸಿದರು.</p>.<p>ನಗರ ಪ್ರದೇಶಗಳಲ್ಲಿ ಮಹಿಳೆಯರು ನಾಗರ ಪಂಚಮಿ ಪೂಜೆಗೆ ಮಾತ್ರ ಸೀಮಿತವಾಗಿತ್ತು. ಆದರೆ, ಗ್ರಾಮೀಣ ಭಾಗದಲ್ಲಿ ವಿವಿಧ ಸಾಹಸ ಕ್ರೀಡೆಗಳನ್ನು ಹಮ್ಮಿಕೊಳ್ಳುವ ಮೂಲಕ ಪಂಚಮಿ ಹಬ್ಬವನ್ನು ಪುರುಷರು ವಿಶೇಷವಾಗಿ ಆಚರಿಸಿದರು.</p>.<p>ನಿಂಬೆ ಹಣ್ಣು ಎಸೆತ, ಕಲ್ಲು ಹೊತ್ತುಯುವುದು, ಜೋಳದ ಚೀಲ ಹೊತ್ತುಯುವುದು, ಮೊಸಂಬಿ ಹೊಡೆಯುವುದು, ತೆಂಗಿನಕಾಯಿ ಸುಲಿಯುವುದು ಸೇರಿದಂತೆ ಗ್ರಾಮೀಣ ಭಾಗದಲ್ಲಿ ಹಬ್ಬದ ಸಂಭ್ರಮ ಹೆಚ್ಚಾಗಿತ್ತು. ಗ್ರಾಮೀಣ ಭಾಗದ ರಸ್ತೆ ಭಾಗದಲ್ಲಿ ಪುರುಷರು ಸಂಭ್ರಮದಲ್ಲಿ ತೊಡಗಿದ್ದರು.</p>.<p class="Subhead">ವಿಶೇಷ ಸಿಹಿ ತಿಂಡಿ ತಯಾರಿ: ಪಂಚಮಿ ಹಬ್ಬದ ಅಂಗವಾಗಿ ವಿಶೇಷ ಸಿಹಿ ತಿಂಡಿ ತಯಾರಿ ಮಾಡಲಾಗಿತ್ತು. ಕರ್ಜಿಕಾಯಿ, ಶೇಂಗದ ಹುಂಡಿ, ಬೇಸನ್ ಹುಂಡಿ, ಕುದಿಸಿದ ಕಡಲೆ ಬೀಜ, ಶಂಕರ ಪಾಳೆ, ಗಾರಿಗೆ ಸೇರಿದಂತೆ ವಿವಿಧ ತಿಂಡಿ ತಯಾರಿಸಿ ನೆರೆ ಹೊರೆಯವನ್ನು ಆಹ್ವಾನಿಸಿ ಊಟ ಸವಿದು ಸಂಭ್ರಮಿಸಿದರು.</p>.<p>ಇನ್ನು ಮಹಿಳೆಯರು ಜೋಕಾಲಿ ಜೀಕುತ್ತಾ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ವಿಶೇಷವಾಗಿ ಹೊಸದಾಗಿ ವಿವಾಹವಾದ ಮಹಿಳೆಯರು ತವರು ಮನೆಗೆ ಆಗಮಿಸಿದ್ದರು. ದಂಪತಿ ಸೇರಿ ಕಲ್ಲು ನಾಗರ ಹಾವಿಗೆ ಹಾಲೇರೆದು ವಿಶೇಷ ಪೂಜೆ ಸಲ್ಲಿಸಿದರು.</p>.<p>****</p>.<p>5.50 ಕ್ವಿಂಟಲ್ ಜೋಳದ ಚೀಲ ಎಳೆದ ಯುವಕ<br />ಯಾದಗಿರಿ: ನಾಗರ ಪಂಚಮಿ ಅಂಗವಾಗಿ ಶಹಾಪುರ ತಾಲ್ಲೂಕಿನ ಗೋಗಿ ಪೇಟ ಗ್ರಾಮದ ಯುವಕ ಶ್ರೀಕಾಂತ ನಾಗಪ್ಪ ಬದ್ದೇಹಳ್ಳಿ 5.50 ಕ್ವಿಂಟಲ್ ಜೋಳದ ಚೀಲ ಬಂಡಿ ಸಮೇತ ಎಳೆದು ಗಮನ ಸೆಳೆದಿದ್ದಾರೆ.</p>.<p>ಗೋಗಿ ಪೇಟ ಗ್ರಾಮದ ಹನುಮಾನ ದೇವಸ್ಥಾನದಿಂದ ಶಹಾಪುರ ನಗರದ ಹನುಮಾನ ದೇವಸ್ಥಾನದ ವರೆಗೆ ಬಂಡಿ ಸಮೇತ ಜೋಳದ ಚೀಲ ಕಾಲ್ನಡಿಗೆಯಲ್ಲಿ ಎಳೆಯಬೇಕು ಎನ್ನುವ ಪಂದ್ಯ ಅಯೋಜಿಸಲಾಗಿತ್ತು.</p>.<p>ಬೆಳಗ್ಗೆ 7 ಗಂಟೆಯಿಂದ 11 ಗಂಟೆಯವರೆಗೆ ಒಂಟಿಯಾಗಿ ಎಳೆದುಕೊಂಡು ಶಹಾಪುರ ನಗರದ ಹನುಮಾನ ಮಂದಿರಕ್ಕೆ ತಲುಪಿಸಬೇಕು. ವಿರಾಮ ಪಡೆಯಲು ಐದು ಸಾರಿ ಅವಕಾಶ ಪಡೆಯಬಹುದು ಎಂದು ಷರತ್ತು ಹಾಕಿ ಪಂದ್ಯ ಕಟ್ಟಲಾಗಿತ್ತು.</p>.<p>ಸವಾಲು ಸ್ವೀಕರಿಸಿದ ಯುವಕ ಶ್ರೀಕಾಂತ 12 ಕಿ.ಮೀ ದೂರವನ್ನು ಎರಡೂವರೆ ಗಂಟೆಯಲ್ಲಿ ತಲುಪಿದ್ದಾರೆ. ಬೆಳಿಗ್ಗೆ 7 ಗಂಟೆ 9.30 ಗಂಟೆಗೆಲ್ಲ ಶಹಾಪುರ ತಲುಪಿದ್ದರು.</p>.<p>ಶಹಾಪುರ ನಗರದ ಹನುಮಾನ್ ದೇವಸ್ಥಾನದ ಹೊರಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಲ್ನಡಿಗೆಯಲ್ಲಿ ಎಳೆದುಕೊಂಡು ಹೋಗಿ ಸಾಧನೆ ಮಾಡಿದ್ದಾರೆ. ಪಂದ್ಯ ಗೆದ್ದ ಖುಷಿಯಲ್ಲಿ ಪರಸ್ಪರ ಬಣ್ಣವನ್ನು ಎರಚಿ ಸಂಭ್ರಮಿಸಿದರು.</p>.<p>‘ಈಚೆಗೆ ಜಮೀನು ಬಳಿ ಭಜನೆ ಆಯೋಜಿಸಲಾಗಿತ್ತು. ಅಲ್ಲಿ ಸೋದರ ಮಾವನವರು ಅಳಿಯನಿಗೆ ಸವಾಲು ಹಾಕಿದ್ದರು. ಸವಾಲು ಸ್ವೀಕರಿಸಿದ ಯುವಕ ಪಂದ್ಯದಲ್ಲಿ ಜಯಗಳಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತ ಬಸವರಾಜ ಹೇರುಂಡಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಶ್ರೀಕಾಂತ ಸಹೋದರ ಮಾವರಾದ ರವಿ, ಮಂಜಪ್ಪ ಬದ್ದೆಳ್ಳಿ ಗೋಗಿ ಯವರು 1 ತೊಲೆ ಬಂಗಾರ ಕಾಣಿಕೆಯಾಗಿ ನೀಡಿದ್ದಾರೆ. ಯುವಕನ ಸಾಧನೆಗೆ ಗೋಗಿ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯಾದಗಿರಿ: ನಗರ ಸೇರಿದಂತೆ ಜಿಲ್ಲಾದ್ಯಂತ ಶುಕ್ರವಾರ ಶ್ರಾವಣ ಮಾಸದ ನಾಗರ ಪಂಚಮಿ ಹಬ್ಬವನ್ನು ಶ್ರದ್ಧಾ–ಭಕ್ತಿಯಿಂದ ಆಚರಿಸಲಾಯಿತು.</p>.<p>ಬೆಳಿಗ್ಗೆಯೇ ಮನೆಯನ್ನು ಮಹಿಳೆಯರು ಸ್ವಚ್ಛಗೊಳಿಸಿ ಪೂಜೆಗೆ ಸಿದ್ಧತೆ ಮಾಡಿಕೊಂಡರು.</p>.<p>ವಿವಿಧ ದೇಗುಲಗಳಲ್ಲಿರುವ ನಾಗರಟ್ಟೆಗಳಲ್ಲಿ ಕಲ್ಲು ನಾಗರ ಹಾವಿಗೆ ಹಾಲೇರೆದು ಮಹಿಳೆಯರು ಸಂಭ್ರಮಿಸಿದರು.</p>.<p>ನಗರ ವಿವಿಧ ದೇವಸ್ಥಾನಗಳಲ್ಲಿರುವ ನಾಗರ ಕಟ್ಟೆಗಳಲ್ಲಿ ಕಲ್ಲಿನ ನಾಗಪ್ಪನಿಗೆ ಪೂಜೆ ಸಲ್ಲಿಸುವ ಮೂಲಕ ದೇವರಲ್ಲಿ ತಮ್ಮ ಇಚ್ಛೆಯನ್ನು ಈಡೇರಿಸುವಂತೆ ಪ್ರಾರ್ಥಿಸಿದರು.</p>.<p>ನಗರ ಪ್ರದೇಶಗಳಲ್ಲಿ ಮಹಿಳೆಯರು ನಾಗರ ಪಂಚಮಿ ಪೂಜೆಗೆ ಮಾತ್ರ ಸೀಮಿತವಾಗಿತ್ತು. ಆದರೆ, ಗ್ರಾಮೀಣ ಭಾಗದಲ್ಲಿ ವಿವಿಧ ಸಾಹಸ ಕ್ರೀಡೆಗಳನ್ನು ಹಮ್ಮಿಕೊಳ್ಳುವ ಮೂಲಕ ಪಂಚಮಿ ಹಬ್ಬವನ್ನು ಪುರುಷರು ವಿಶೇಷವಾಗಿ ಆಚರಿಸಿದರು.</p>.<p>ನಿಂಬೆ ಹಣ್ಣು ಎಸೆತ, ಕಲ್ಲು ಹೊತ್ತುಯುವುದು, ಜೋಳದ ಚೀಲ ಹೊತ್ತುಯುವುದು, ಮೊಸಂಬಿ ಹೊಡೆಯುವುದು, ತೆಂಗಿನಕಾಯಿ ಸುಲಿಯುವುದು ಸೇರಿದಂತೆ ಗ್ರಾಮೀಣ ಭಾಗದಲ್ಲಿ ಹಬ್ಬದ ಸಂಭ್ರಮ ಹೆಚ್ಚಾಗಿತ್ತು. ಗ್ರಾಮೀಣ ಭಾಗದ ರಸ್ತೆ ಭಾಗದಲ್ಲಿ ಪುರುಷರು ಸಂಭ್ರಮದಲ್ಲಿ ತೊಡಗಿದ್ದರು.</p>.<p class="Subhead">ವಿಶೇಷ ಸಿಹಿ ತಿಂಡಿ ತಯಾರಿ: ಪಂಚಮಿ ಹಬ್ಬದ ಅಂಗವಾಗಿ ವಿಶೇಷ ಸಿಹಿ ತಿಂಡಿ ತಯಾರಿ ಮಾಡಲಾಗಿತ್ತು. ಕರ್ಜಿಕಾಯಿ, ಶೇಂಗದ ಹುಂಡಿ, ಬೇಸನ್ ಹುಂಡಿ, ಕುದಿಸಿದ ಕಡಲೆ ಬೀಜ, ಶಂಕರ ಪಾಳೆ, ಗಾರಿಗೆ ಸೇರಿದಂತೆ ವಿವಿಧ ತಿಂಡಿ ತಯಾರಿಸಿ ನೆರೆ ಹೊರೆಯವನ್ನು ಆಹ್ವಾನಿಸಿ ಊಟ ಸವಿದು ಸಂಭ್ರಮಿಸಿದರು.</p>.<p>ಇನ್ನು ಮಹಿಳೆಯರು ಜೋಕಾಲಿ ಜೀಕುತ್ತಾ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ವಿಶೇಷವಾಗಿ ಹೊಸದಾಗಿ ವಿವಾಹವಾದ ಮಹಿಳೆಯರು ತವರು ಮನೆಗೆ ಆಗಮಿಸಿದ್ದರು. ದಂಪತಿ ಸೇರಿ ಕಲ್ಲು ನಾಗರ ಹಾವಿಗೆ ಹಾಲೇರೆದು ವಿಶೇಷ ಪೂಜೆ ಸಲ್ಲಿಸಿದರು.</p>.<p>****</p>.<p>5.50 ಕ್ವಿಂಟಲ್ ಜೋಳದ ಚೀಲ ಎಳೆದ ಯುವಕ<br />ಯಾದಗಿರಿ: ನಾಗರ ಪಂಚಮಿ ಅಂಗವಾಗಿ ಶಹಾಪುರ ತಾಲ್ಲೂಕಿನ ಗೋಗಿ ಪೇಟ ಗ್ರಾಮದ ಯುವಕ ಶ್ರೀಕಾಂತ ನಾಗಪ್ಪ ಬದ್ದೇಹಳ್ಳಿ 5.50 ಕ್ವಿಂಟಲ್ ಜೋಳದ ಚೀಲ ಬಂಡಿ ಸಮೇತ ಎಳೆದು ಗಮನ ಸೆಳೆದಿದ್ದಾರೆ.</p>.<p>ಗೋಗಿ ಪೇಟ ಗ್ರಾಮದ ಹನುಮಾನ ದೇವಸ್ಥಾನದಿಂದ ಶಹಾಪುರ ನಗರದ ಹನುಮಾನ ದೇವಸ್ಥಾನದ ವರೆಗೆ ಬಂಡಿ ಸಮೇತ ಜೋಳದ ಚೀಲ ಕಾಲ್ನಡಿಗೆಯಲ್ಲಿ ಎಳೆಯಬೇಕು ಎನ್ನುವ ಪಂದ್ಯ ಅಯೋಜಿಸಲಾಗಿತ್ತು.</p>.<p>ಬೆಳಗ್ಗೆ 7 ಗಂಟೆಯಿಂದ 11 ಗಂಟೆಯವರೆಗೆ ಒಂಟಿಯಾಗಿ ಎಳೆದುಕೊಂಡು ಶಹಾಪುರ ನಗರದ ಹನುಮಾನ ಮಂದಿರಕ್ಕೆ ತಲುಪಿಸಬೇಕು. ವಿರಾಮ ಪಡೆಯಲು ಐದು ಸಾರಿ ಅವಕಾಶ ಪಡೆಯಬಹುದು ಎಂದು ಷರತ್ತು ಹಾಕಿ ಪಂದ್ಯ ಕಟ್ಟಲಾಗಿತ್ತು.</p>.<p>ಸವಾಲು ಸ್ವೀಕರಿಸಿದ ಯುವಕ ಶ್ರೀಕಾಂತ 12 ಕಿ.ಮೀ ದೂರವನ್ನು ಎರಡೂವರೆ ಗಂಟೆಯಲ್ಲಿ ತಲುಪಿದ್ದಾರೆ. ಬೆಳಿಗ್ಗೆ 7 ಗಂಟೆ 9.30 ಗಂಟೆಗೆಲ್ಲ ಶಹಾಪುರ ತಲುಪಿದ್ದರು.</p>.<p>ಶಹಾಪುರ ನಗರದ ಹನುಮಾನ್ ದೇವಸ್ಥಾನದ ಹೊರಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಲ್ನಡಿಗೆಯಲ್ಲಿ ಎಳೆದುಕೊಂಡು ಹೋಗಿ ಸಾಧನೆ ಮಾಡಿದ್ದಾರೆ. ಪಂದ್ಯ ಗೆದ್ದ ಖುಷಿಯಲ್ಲಿ ಪರಸ್ಪರ ಬಣ್ಣವನ್ನು ಎರಚಿ ಸಂಭ್ರಮಿಸಿದರು.</p>.<p>‘ಈಚೆಗೆ ಜಮೀನು ಬಳಿ ಭಜನೆ ಆಯೋಜಿಸಲಾಗಿತ್ತು. ಅಲ್ಲಿ ಸೋದರ ಮಾವನವರು ಅಳಿಯನಿಗೆ ಸವಾಲು ಹಾಕಿದ್ದರು. ಸವಾಲು ಸ್ವೀಕರಿಸಿದ ಯುವಕ ಪಂದ್ಯದಲ್ಲಿ ಜಯಗಳಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತ ಬಸವರಾಜ ಹೇರುಂಡಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಶ್ರೀಕಾಂತ ಸಹೋದರ ಮಾವರಾದ ರವಿ, ಮಂಜಪ್ಪ ಬದ್ದೆಳ್ಳಿ ಗೋಗಿ ಯವರು 1 ತೊಲೆ ಬಂಗಾರ ಕಾಣಿಕೆಯಾಗಿ ನೀಡಿದ್ದಾರೆ. ಯುವಕನ ಸಾಧನೆಗೆ ಗೋಗಿ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>